ಕೆಂಪುಕೋಟೆಯಲ್ಲಿ ಸಿಖ್ ಧ್ವಜ ಹಾರಾಟ : ನಟ ದೀಪ್ ಸಿಧು ಬಂಧನ

ನವದೆಹಲಿ : ಗಣರಾಜ್ಯೋತ್ಸವದ ದಿನದಂದು ಕೆಂಪುಕೋಟೆಯಲ್ಲಿ ಸಿಖ್ ಧ್ವಜ ಹಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದೀಪ್ಸಿಧುವನ್ನು ದೆಹಲಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ರೈತರ ಪ್ರತಿಭಟನೆಯ ನಡುವಲ್ಲೇ ಕೆಂಪುಕೋಟೆಯಲ್ಲಿ ಧರ್ಮದ ಧ್ವಜ ಹಾರಾಟ ಮಾಡಿರೋ ಪ್ರಕರಣ ಸರಕಾರಕ್ಕೆ ಮಾತ್ರವಲ್ಲ ರೈತ ಮುಖಂಡರ ಆಕ್ರೋಶಕ್ಕೂ ಕಾರಣವಾಗಿತ್ತು. ಪ್ರಕರಣದಲ್ಲಿ ನಟ ದೀಪ್ ಸಿಧು ಹೆಸರು ಕೇಳಿಬಂದಿತ್ತು.

ಆದರೆ ನಟ ದೀಪ್ ಸಿಧು ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ನಾಪತ್ತೆಯಾಗಿದ್ದ. ಈ ನಡುವಲ್ಲೇ ದೀಪ್ ಸಿಧು ಆಡಿಯೋ ವೈರಲ್ ಆಗಿತ್ತು. ಇದೀಗ ದೆಹಲಿ ಪೊಲೀಸರು ನಟ ದೀಪ್ ಸಿಧುವನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Comments are closed.