ಮತ್ತೆ ಚರ್ಚೆಗೆ ಬಂತು ಪವಿತ್ರಾ ಗೌಡ ಹೆಸರು….! ಏನಿದು ದಚ್ಚು-ಪವಿ ಅಸಲಿ ಕಹಾನಿ…!!

ಸ್ಯಾಂಡಲ್ ವುಡ್ ನಲ್ಲಿ ಸದ್ಯ ದರ್ಶನ್ ವಿವಾದದ್ದೇ ಸದ್ದು-ಸುದ್ದಿ. 25 ಕೋಟಿ ಸಾಲ ಪ್ರಕರಣ ದರ್ಶನ್ ಹಾಗೂ ಉಮಾಪತಿ ನಡುವೆ ಕಿಚ್ಚು ಹಚ್ಚಿದ್ರೇ, ಹೊಟೇಲ್ ನಲ್ಲಿ ವೇಟರ್ ಮೇಲಿನ ಹಲ್ಲೆ ಪ್ರಕರಣವೂ ದಿನಕ್ಕೊಂದು ಸ್ವರೂಪ ಪಡೆಯುತ್ತಿದೆ. ಈ ಮಧ್ಯೆ  ದರ್ಶನ್ ಹಾಗೂ ಪವಿತ್ರಾ ಹೆಸರು ಮತ್ತೆ ಚರ್ಚೆಗೆ ಗ್ರಾಸವಾಗಿದೆ.

ದರ್ಶನ್ ವೈವಾಹಿಕ ಬದುಕು ಮೂರಾಬಟ್ಟೆಯಾಗಿ ಗಂಡ-ಹೆಂಡತಿ ಜಗಳ ಬೀದಿಗೆ ಬಿದ್ದಾಗ ಒಂದು ಆಡಿಯೋ ವೈರಲ್ ಆಗಿತ್ತು. ದರ್ಶನ್ ಮಾತನಾಡಿದ್ದು ಎನ್ನಲಾದ ಆ ಆಡಿಯೋ ಸಂಚಲನಕ್ಕೆ ಕಾರಣವಾಗಿತ್ತು.

ಆ ಆಡಿಯೋದಲ್ಲಿ ದರ್ಶನ್ ನಾನು ಇನ್ನುಂದೆ ಪವಿತ್ರ ಜೊತೆಗೆ ಬದುಕೋದು ಎಂಬರ್ಥದಲ್ಲಿ ಮಾತನಾಡಿದ್ದರು.

 ಆ ಬಳಿಕ ನಿಧಾನಕ್ಕೆ ತಣ್ಣಗಾಗಿದ್ದ ಈ ವಿವಾದ ಈಗ ಮತ್ತೆ ಹಸಿರಾಗಿದೆ. ಮೈಸೂರಿನಲ್ಲಿ ನಡೆದ ಗಲಾಟೆ ವೇಳೆ ಪವಿತ್ರ ಗೌಡ ಕೂಡ ದರ್ಶನ್ ಜೊತೆ ಇದ್ದರು ಎನ್ನಲಾಗ್ತಿದೆ.

ಇದನ್ನೂ ಓದಿ : ಹಾಟ್ ಪೋಟೋಸ್ ಮೂಲಕ ಅಭಿಮಾನಿಗಳ ಎದೆಗೆ ಕಿಚ್ಚು ಹಚ್ಚಿದ ಮಾದಕ ಬೆಡಗಿ ತಾನ್ಯಾ ಹೋಪ್..!!

ಸ್ಯಾಂಡಲ್ ವುಡ್ ನಲ್ಲಿ ಹಲವು ಚಿತ್ರಗಳಲ್ಲಿ ನಟಿಸಿರುವ ಪವಿತ್ರ ಗೌಡ ನಟನೆಗಿಂತ ದರ್ಶನ್ ಜೊತೆಗೆ ಕಾಣಿಸಿಕೊಳ್ಳುವ ಮೂಲಕವೇ ಹೆಚ್ಚು ಪ್ರಸಿದ್ಧಿಗೆ ಬಂದವರು.

ಇದನ್ನೂ ಓದಿ : ಐಟಂ ಸಾಂಗ್ ಗೆ ಬಂದವರು ಸಿನಿಮಾಗೆ ಕೊಟ್ರು ಸ್ಪೆಷಲ್ ಎಂಟ್ರಿ…! ಜಾಕ್ವಲಿನ್ ಬಗ್ಗೆ ಅನೂಪ್ ಭಂಡಾರಿ ಹೇಳಿದ್ದೇನು ಗೊತ್ತಾ..?!

ದರ್ಶನ್ ಜೊತೆಗಿರೋ ಪೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದ ಪವಿತ್ರಾ ಹಿಂದೊಮ್ಮೆ ವಿವಾದ ಸೃಷ್ಟಿಸಿದ್ದರು. ಅಷ್ಟೇ ಅಲ್ಲ  ಪವಿತ್ರ ದರ್ಶನ್ ತಾಯಿ ಹಾಗೂ ಸಹೋದರಿ ಜೊತೆಗೂ ಕಾಣಿಸಿಕೊಂಡು ಹಲವು ಚರ್ಚೆ ಹುಟ್ಟುಹಾಕಿದ್ದರು.

ಪವಿತ್ರಾ ಗೌಡ ಡಿವೋರ್ಸಿ ಎನ್ನಲಾಗಿದ್ದು, ಆಕೆಗೆ ಒಂದು ಹೆಣ್ಣುಮಗುವು ಇದೆ. ಆದರೆ ಸದ್ಯ ನಟನೆಯಿಂದ ದೂರ ಉಳಿದಿರುವ ಪವಿತ್ರಾ ಗೌಡ ಆಗಾಗ ದರ್ಶನ ಜೊತೆ ಕಾಣಿಸಿಕೊಂಡು  ಚರ್ಚೆ ಹುಟ್ಟುಹಾಕೋದಂತು ನಿಜ.  ಈ ಹಿಂದೆ ಕುರುಕ್ಷೇತ್ರ ಸೆಟ್ ನಲ್ಲೂ ದರ್ಶನ್ ಜೊತೆ ಕಾಣಿಸಿಕೊಂಡಿದ್ದರು ಪವಿತ್ರಾ ಗೌಡ.

ಸ್ಯಾಂಡಲ್ ವುಡ್ ನ ಛತ್ರಿಗಳು ಸಾರ್ ಛತ್ರಿಗಳು, ಆಗಮ್ಯಾ,54321,ಸಾಗುವ ದಾರಿ,ಬತ್ತಾಸು,ಪ್ರೀತಿ ಕಿತಾಬು ಸೇರಿದಂತೆ ಹಲವು ಚಿತ್ರದಲ್ಲಿ ನಟಿಸಿದ ಪವಿತ್ರಾ ಗೌಡ ಸೋಷಿಯಲ್ ಮೀಡಿಯಾದಲ್ಲೂ ಸಖತ್ ಆಕ್ಟಿವ್ ಆಗಿದ್ದು, ಆಗಾಗ ತಮ್ಮ ಪೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

ಇದನ್ನೂ ಓದಿ : CD Case Twist : ರಮೇಶ್ ಜಾರಕಿಹೊಳಿ ಸಿಡಿ ಕೇಸ್ ಗೆ ಟ್ವಿಸ್ಟ್…..! ಪ್ರಕರಣ ದಿಕ್ಕು ಬದಲಿಸಬಲ್ಲ ಘಟನೆಗೆ ಮೂಲವಾದ ನರೇಶ್ ಗೌಡ…!!

ದರ್ಶನ್ ಜೊತೆ ಪವಿತ್ರಾ ಗೌಡ ಹೆಸರು ಕೇಳಿಬಂದಿದ್ದರೂ ಇದುವರೆಗೂ ದರ್ಶನ್ ಅಥವಾ ಪವಿತ್ರಾ ಈ ವಿಚಾರದ ಬಗ್ಗೆ ಯಾವುದೇ ಸ್ಪಷ್ಟನೆ ನೀಡುವ ಪ್ರಯತ್ನ ಮಾಡಿಲ್ಲ. ಹೀಗಾಗಿ ಗಾಂಧಿನಗರದಲ್ಲಿ ಈ ಬಗ್ಗೆ ಕಲರ್ ಕಲರ್ ಕತೆ ಕೇಳಿಬರುತ್ತಿದೆ.

Comments are closed.