ದರ್ಶನ ಅಭಿಮಾನಿಗಳಿಂದ ಜೀವ ಬೆದರಿಕೆ….! ಪೊಲೀಸರ ಮೊರೆ ಹೋದ ಇಂದ್ರಜಿತ್ ಲಂಕೇಶ್…!!

ಸ್ಯಾಂಡಲ್ ವುಡ್ ನಿರ್ದೇಶಕ ಇಂದ್ರಜಿತ್ ಲಂಕೇಶ್ ಹಾಗೂ ನಟ ದರ್ಶನ ನಡುವಿನ ಫೈಟಿಂಗ್ ಸದ್ಯಕ್ಕೆ ಕೊನೆಗೊಳ್ಳುವ ಲಕ್ಷಣವಿಲ್ಲ. ದರ್ಶನ್ ವಿರುದ್ಧ ನೊರೆಂಟು ಆರೋಪ ಮಾಡಿದ್ದ ಇಂದ್ರಜಿತ್ ಗೆ ದರ್ಶನ್ ಅಭಿಮಾನಿಗಳು ತಿರುಗಿ ಬಿದ್ದಿದ್ದು ರಕ್ಷಣೆ ಕೋರಿ ಪೊಲೀಸ ಠಾಣೆ ಮೆಟ್ಟಿಲೇರಿದ್ದಾರೆ.

ದರ್ಶನ್ ಹಾಗೂ ಸ್ನೇಹಿತರು  ಮೈಸೂರಿನ ಸಂದೇಶ್ ಪ್ರಿನ್ಸ್ ಹೊಟೇಲ್ ನಲ್ಲಿ ವೇಟರ್ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಇಂದ್ರಜಿತ್ ಲಂಕೇಶ್ ಆರೋಪಿಸಿದ್ದರು.  ಈ ಆರೋಪಕ್ಕೆ ದರ್ಶನ್ ಇಂದ್ರಜಿತ್ ಲಂಕೇಶ್ ವಿಡಿಯೋ ರಿಲೀಸ್ ಮಾಡಲಿ ಎಂದು ಸವಾಲು ಹಾಕಿದ್ದರು.

ಇದನ್ನೂ ಓದಿ : ಮತ್ತೆ ಚರ್ಚೆಗೆ ಬಂತು ಪವಿತ್ರಾ ಗೌಡ ಹೆಸರು….! ಏನಿದು ದಚ್ಚು-ಪವಿ ಅಸಲಿ ಕಹಾನಿ…!!

ಈ ಹಿನ್ನೆಲೆಯಲ್ಲಿ ದರ್ಶನ್ ಸ್ನೇಹಿತರು  ಹಾಗೂ ಅಭಿಮಾನಿಗಳು ಇಂದ್ರಜಿತ್ ವಿರುದ್ಧ ತಿರುಗಿ ಬಿದ್ದಿದ್ದಾರೆ ಎನ್ನಲಾಗಿದೆ. ಪ್ರತಿ 30 ಸೆಕೆಂಡ್ ಗೊಂದರಂತೆ ಇಂದ್ರಜಿತ್ ಲಂಕೇಶ್ ಗೆ ಬೆದರಿಕೆ ಕಾಲ್ ಗಳು ಬರುತ್ತಿದೆ ಎನ್ನಲಾಗಿದೆ.

ಅಲ್ಲದೇ ದರ್ಶನ್ ಅಭಿಮಾನಿಗಳು ಹೆಸರಿನಲ್ಲಿ ಜನರು ಕಾಲ್ ಮಾಡಿ ಅಶ್ಲೀಲವಾಗಿ ಬೈಯ್ಯುತ್ತಿದ್ದಾರೆ ಎಂದು ಆರೋಪಿಸಿರುವ ಇಂದ್ರಜಿತ್ ರಕ್ಷಣೆ ಕೋರಿ ಕೋರಮಂಗಲ ಪೊಲೀಸರ ಮೊರೆ ಹೋಗಿದ್ದಾರೆ. ಆಗ್ನೇಯ ವಿಭಾಗದ ಡಿಸಿಪಿಯವರಿಗೆ ಇಂದ್ರಜಿತ್ ದೂರು ನೀಡಿದ್ದು, ಬೆದರಿಕೆ ಕರೆ ಮಾಡುತ್ತಿರುವವರ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

Comments are closed.