‌‌ಚಿರು ಮರೆಯಲಾರದೇ ಕೊರಗುತಿದೆ ಸರ್ಜಾ ಕುಟುಂಬ…! ಅರ್ಜುನ್ ಸರ್ಜಾ ಟ್ವೀಟ್ ನಲ್ಲೂ ಕಣ್ಣೀರು…!!

ಯುವ ಸಾಮ್ರಾಟ್ ನಂತಿದ್ದ ಚಿರಂಜೀವಿ ಸರ್ಜಾ ಇನ್ನಿಲ್ಲವಾಗಿ 6 ತಿಂಗಳು ಕಳೆದಿದೆ. ಆದರೂ ಪ್ರತಿಕ್ಷಣ ಸರ್ಜಾ ಕುಟುಂಬ ಮನೆ ಮಗನನ್ನು‌ ನೆನೆದು ಕೊರಗುತ್ತಲೇ ಇದೆ. ಇದಕ್ಕೆ ಸಾಕ್ಷಿ ಒದಗಿಸುವಂತಿದೆ ಅರ್ಜುನ್ ಸರ್ಜಾ ಟ್ವೀಟ್.

ಚಿರು ನಿಧನರಾದಾಗ ಕಣ್ಣಿರಿಟ್ಟಿದ್ದ ಅರ್ಜುನ್ ಸರ್ಜಾ, ತನ್ನ ಕಣ್ಮುಂದೆ ಹುಟ್ಟಿ ಬೆಳೆದ ಮಗನನ್ನು ಕಳೆದುಕೊಂಡು ಅಕ್ಷರಷಃ ಕುಸಿದು ಹೋಗಿದ್ದೇನೆ ಎಂದಿದ್ದರು. ಆತ ಹುಟ್ಟಿದಾಗ ಚೈನೈನಿಂದ ಶೂಟಿಂಗ್ ಬಿಟ್ಟು ಬೆಂಗಳೂರಿಗೆ ಬಂದಿದ್ದನ್ನು ನೆನಪಿಸಿಕೊಂಡು ಕಣ್ಣಿರಿಟ್ಟಿದ್ದರು.

ಈಗ ಚಿರು ನಿಧನದ ತಿಂಗಳುಗಳ ಬಳಿಕ ಮತ್ತೆ ಆತನನ್ನು ನೆನೆದು ಕಣ್ಣೀರಿಟ್ಟಿರುವ ಅರ್ಜುನ್ ಸರ್ಜಾ ಭಾವುಕರಾಗಿ ಟ್ವೀಟ್ ಮಾಡಿ ತಮ್ಮ ಮನಸ್ಸಿನ ಭಾವನೆ ಹಂಚಿಕೊಂಡಿದ್ದಾರೆ.

ಚಿರು ಪೋಟೋ ಜೊತೆ ಟ್ವೀಟ್ ಮಾಡಿರುವ ಸರ್ಜಾ, ಚಿರು ಮಗನೇ ನಿನ್ನ ಎಷ್ಟು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಅಂದ್ರೇ ಅದನ್ನು ಹೇಳಲು ಸಹ ಸಾಧ್ಯವಾಗುತ್ತಿಲ್ಲ ಎಂದು ಬರೆದುಕೊಂಡಿದ್ದಾರೆ.

ಇನ್ನು ಅರ್ಜುನ್ ಸರ್ಜಾ ಈ ಪೋಸ್ಟ್ ಗೆ ನೆಟ್ಟಿಗರು ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಲ್ಲದೇ ತಾವು ಸಹ ದುಃಖವನ್ನು ಹಂಚಿಕೊಂಡಿ ದ್ದಾರೆ. ಚಿರು‌ ದಿಢೀರ್ ನಿಧನದ ವೇಳೆ ಅರ್ಜುನ್ ಸರ್ಜಾ ಚೈನೈನಲ್ಲಿದ್ದು ಸುದ್ದಿ ತಿಳಿದ ತಕ್ಷಣ ಧಾವಿಸಿ ಬಂದಿದ್ದರು. ಅಲ್ಲದೇ ಚಿರು ಪಾರ್ಥಿವ ಶರೀರ ಕಂಡು ಬಿಕ್ಕಿ ಬಿಕ್ಕಿ ಅತ್ತಿದ್ದರು.

ಚಿರು ನಿಧನದ ಬಳಿಕ ಅಕ್ಟೋಬರ್ 22 ರಂದು ಮೇಘನಾ ರಾಜ್ ಗಂಡುಮಗುವಿಗೆ ಜನ್ಮ ನೀಡಿದ್ದು ಈ ವೇಳೆ ಆಸ್ಪತ್ರೆಗೆ ಭೇಟಿ ನೀಡಿದ್ದ ಅರ್ಜುನ್ ಸರ್ಜಾ, ಗಂಡು ‌ಮಗು ಸೇಮ್ ಚಿರುವಿನಂತೆ ಇದೆ ಎಂದಿದ್ದರು. ಅಷ್ಟೇ ಅಲ್ಲ ಚಿರಂಜೀವಿ ಸರ್ಜಾನನ್ನು ಸ್ಯಾಂಡಲ್ ವುಡ್ ಗೆ ನಾನೇ ಲಾಂಚ್ ಮಾಡಿದ್ದೇ. ಇನ್ನು 20 ವರ್ಷದ ಬಳಿಕ ಜ್ಯೂನಿಯರ್ ಚಿರುವನ್ನೂ ನಾನೇ ಲಾಂಚ್ ಮಾಡುತ್ತೇನೆ ಎನ್ನಿಸುತ್ತದೆ ಎಂದಿದ್ದರು.

ಚಿರು ನಿಧನವಾಗಿ 6 ತಿಂಗಳು ಕಳೆದಿದ್ದರೂ ಸರ್ಜಾ ಕುಟುಂಬ ಇನ್ನೂ ಅದೇ ನೋವಿನಲ್ಲೇ ದಿನ ದೂಡುತ್ತಿದ್ದು, ಒಬ್ಬರಲ್ಲ ಒಬ್ಬರು ಪ್ರತಿದಿನ ಚಿರು ನೆನೆದು ಕಣ್ಣಿರಿಡುತ್ತಲೇ ಇದ್ದಾರೆ.

Comments are closed.