ನಾನು ಕರೋನಾದಿಂದ ಸತ್ರೆ ಅದಕ್ಕೆ ಸಿಎಂ ಬಿಎಸ್ವೈ ಮತ್ತು ಸುಧಾಕರ್ ಕಾರಣ…! ಸ್ಯಾಂಡಲ್ ವುಡ್ ನಟ-ನಿರ್ದೇಶಕ ಗುರು ಆಕ್ರೋಶ…!!

ಕೊರೋನಾ‌ ಎರಡನೇ ಅಲೆಗೆ ಸ್ಯಾಂಡಲ್ ವುಡ್ ನಲುಗಿ ಹೋಗಿದೆ. ಪ್ರಜ್ವಲ್ ದೇವರಾಜ್, ಮಿಲನಾನಾಗರಾಜ್ ದಂಪತಿ ಬೆನ್ನಲ್ಲೇ ಇದೀಗ ಮಠ ಖ್ಯಾತಿಯ ನಿರ್ದೇಶಕ ಗುರು ಕೊರೋನಾ ಗೆ ತುತ್ತಾಗಿದ್ದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಟ ಹಾಗೂ ನಿರ್ದೇಶಕ ಗುರುಪ್ರಸಾದ್ ಗೆ ಕೊರೋನಾ ಸೋಂಕು ತಗುಲಿದ್ದು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಷ್ಟೇ ಅಲ್ಲ ಕೊರೋನಾ ನಿರ್ವಹಿಸುವಲ್ಲಿ‌ ವಿಫಲವಾಗಿರುವ ರಾಜ್ಯ ಸರ್ಕಾರದ ವಿರುದ್ಧ ಗುರುಪ್ರಸಾದ್ ಕಿಡಿಕಾರಿದ್ದಾರೆ.

ಸೋಷಿಯಲ್ ಮೀಡಿಯಾ ದಲ್ಲಿ ಲೈವ್ ನಡೆಸಿ ಮಾತನಾಡಿದ ನಿರ್ದೇಶಕ ಗುರು, ನಾನು ಕೊರೋನಾದಿಂದ‌ ಸತ್ತೋದ್ರೇ‌ಅದಕ್ಕೆ ಸಿಎಂ ಬಿಎಸ್ವೈ, ಆರೋಗ್ಯ ಸಚಿವ ಸುಧಾಕರ್ ಹಾಗೂ ಸಿಎಂ ಪುತ್ರ ವಿಜಯೇಂದ್ರ್ ಕಾರಣ ಎಂದು ಆರೋಪಿಸಿದ್ದಾರೆ.

ರಾಜ್ಯದಲ್ಲಿ ಕೊರೋನಾದಿಂದ ಸಾವನ್ನಪ್ಪಿದ‌ ಪ್ರತಿಯೊಬ್ಬರ ಸಾವಿಗೂ ಸಿಎಂ ಬಿಎಸ್ವೈ ಹಾಗೂ ಸಚಿವ ಸುಧಾಕರ್ ಕಾರಣ. ಕೊರೋನಾ ನಿವರ್ಹಿಸುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಗುರು ಟೀಕಿಸಿದ್ದಾರೆ.

ಮೋದಿ ಪ್ರಾಮಾಣಿಕರು. ಆದರೆ ಬಿಜೆಪಿಯವರಲ್ಲ ಪ್ರಾಮಾಣಿಕರಲ್ಲ. ರಾಜ್ಯದಲ್ಲಿ ಕೊರೋನಾ ಉಲ್ಬಣಿಸುತ್ತಿದ್ದರೂ ಒಂದೂವರೆ ವರ್ಷದಿಂದ ಸರ್ಕಾರಕ್ಕೆ ನಿಯಂತ್ರಣ ಮಾಡಲು ಸಾಧ್ಯವಾಗಿಲ್ಲ.

ನಿಯತ್ತಾಗಿ ಕೆಲಸ ಮಾಡಿ ಜನರ ಪ್ರಾಣ ಉಳಿಸಿ ಸ್ವಾಮಿ ಅಂತ ಗುರುಪ್ರಸಾದ್ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

Comments are closed.