Hombale Films: ಹೊಂಬಾಳೆ ಫಿಲ್ಸ್ಮಂ ಮುಂದಿನ ಹೀರೋ ಯಾರು…! ಕುತೂಹಲದ ಪ್ರಶ್ನೆಗೆ ಜುಲೈ 11 ರಂದು ಸಿಗಲಿದೆ ಉತ್ತರ…!!

ದ್ವಿತ್ವ ಸಿನಿಮಾ ಘೋಷಿಸಿ ಅಪ್ಪು ಅಭಿಮಾನಿಗಳ ಮನಗೆದ್ದ ಹೊಂಬಾಳೆ ಫಿಲ್ಸ್ಮಂ ಮತ್ತೊಂದು ಸಿನಿಮಾ ಘೋಷಣೆಯ ಸಿಹಿಸುದ್ದಿ ಕೊಟ್ಟಿದ್ದು, ಆದರೆ ಹಿರೋ ಯಾರು ಎಂಬ ಚರ್ಚೆಯನ್ನು ಹುಟ್ಟುಹಾಕಿದೆ. ಸ್ಯಾಂಡಲ್ ವುಡ್ ನಲ್ಲಿ ಹೊಂಬಾಳೆ ಫಿಲ್ಸ್ಮಂ ಟ್ವೀಟ್ ಸಖತ್ ಕುತೂಹಲ ಮೂಡಿಸಿದೆ.

ಮೊನ್ನೆ ಮೊನ್ನೆಯಷ್ಟೇ ಪುನೀತ್ ರಾಜಕುಮಾರ್ ಮತ್ತು ಪವನ್ ಕುಮಾರ್ ಒಂದಾಗಿ ತೆರೆಗೆ ತರ್ತಿರೋ ದ್ವಿತ್ವದ ಸಿನಿಮಾ ಟೈಟಲ್ ಘೋಷಿಸಿ ಕುತೂಹಲ ಹೆಚ್ಚಿಸಿದ ಹೊಂಬಾಳೆ ಸಿನಿಮಾ ಜುಲೈ 11 ರಂದು ಮತ್ತೊಂದು ಸಿನಿಮಾ ಘೋಷಿಸಿದ್ದು, ಹಿರೋ ಯಾರು ಎಂಬುದನ್ನು ಜುಲೈ 11 ರಂದು ಅನೌನ್ಸ್ ಮಾಡಲಿದೆ.

ಹೀಗಾಗಿ ಹೊಂಬಾಳೆ ಫಿಲ್ಸ್ಮನ ಮುಂದಿನ ಸಿನಿಮಾ ಹೀರೋ ಯಾರು ಎಂಬ ಚರ್ಚೆ ಚಂದನವನದಲ್ಲಿ ನಡೆದಿದೆ. ಯಶ್ ಕೆಜಿಎಫ್ ಹಾಗೂ ಕೆಜಿಎಫ್-2 ಎರಡು ಸಿನಿಮಾವನ್ನು  ಹೊಂಬಾಳೆ ಫಿಲ್ಸ್ಮಂನಿರ್ಮಿಸಿದ್ದು, ಯಶ್ ಗಾಗಿಯೇ ಮೂರನೇ ಚಿತ್ರ ಅನೌನ್ಸ್ ಮಾಡಿದ್ಯಾ ಎಂಬ ಅನುಮಾನ ಅಭಿಮಾನಿಗಳಿಗಿದೆ.

ಇನ್ನೊಂದೆಡೆ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಜುಲೈ 11 ರಂದು ಮಹತ್ವದ ಘೋಷಣೆ ಮಾಡೋದಾಗಿ ಹೇಳಿರೋದರಿಂದ ಹೊಂಬಾಳೆ ಫಿಲ್ಸ್ಮಂ ನಾಯಕ ರಕ್ಷಿತ್ ಶೆಟ್ಟಿ ಇರಬಹುದಾ ಎಂದು ಊಹಿಸಲಾಗುತ್ತಿದೆ.

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಜುಲೈ 12 ರಂದು ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದು,ಇದೇ ಖುಷಿಯಲ್ಲಿ ಹೊಂಬಾಳೆ ಸಿನಿಮಾ ತನ್ನ ಮುಂದಿನ ನಾಯಕನಾಗಿ ಶಿವರಾಜ್ ಕುಮಾರ್ ಅವರನ್ನು ಆಯ್ಕೆ ಮಾಡಿರೋದಾಗಿ ಪ್ರಕಟಿಸಬಹುದೇ ಎಂಬ ಚಿಂತನೆಯೂ ಅಭಿಮಾನಿಗಳಲ್ಲಿದೆ.

ಸದ್ಯ ಪುನೀತ್ ರಾಜಕುಮಾರ್ ನಟನೆಯ ದ್ವಿತ್ವ ಸಿನಿಮಾಗೆ ಹೊಂಬಾಳೆ ಸಿನಿಮಾ ಬಂಡವಾಳ ಹೂಡಿದ್ದು, ಅದರೊಂದಿಗೆ ಕೆಜಿಎಫ್-2 ಕೂಡ ಬಿಡುಗಡೆ ಸಿದ್ಧವಾಗಿದೆ. ಈ ಮಧ್ಯೆ ಹೊಂಬಾಳೆ ಸಿನಿಮಾದಿಂದ ತೆರೆಗೆ ಬರ್ತಿರೋ ಹೀರೋ ಯಾರು ಎಂಬ ಕುತೂಹಲ ಎಲ್ಲರನ್ನು ಕಾಡುತ್ತಿದೆ.

ಜುಲೈ 11 ರಂದು ಮುಂದಿನ ಚಿತ್ರದ ಟೈಟಲ್ ಹಾಗೂ ಹೀರೋ ಘೋಷಿಸುವುದಾಗಿ ಹೊಂಬಾಳೆ ಫಿಲ್ಸ್ಮ ಟ್ವೀಟ್ ಮಾಡಿದ್ದು, ಟ್ವೀಟ್ ಹಾಗೂ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.  

Comments are closed.