ಲಾಕ್ ಡೌನ್ ನನ್ನ ಪಾಲಿಗೆ ವರವಾಯ್ತು…!ಒಂದೂಂದು ದಿನವೂ ಅವಿಸ್ಮರಣೀಯ…! ನೆನಪಿನ ಬುತ್ತಿ ಬಿಚ್ಚಿದ ಮೇಘನಾ ರಾಜ್..!!

ಕೊರೋನಾ,ಲಾಕ್ ಡೌನ್ ಯಾರ ಪಾಲಿಗೆ ಕಹಿಯಾಯ್ತೋ ಗೊತ್ತಿಲ್ಲ. ಆದರೇ ಸ್ಯಾಂಡಲ್ ವುಡ್ ನ ನ್ಯೂ ಮಮ್ಮಿ ಮೇಘನಾ ರಾಜ್ ಪಾಲಿಗೆ ಮಾತ್ರ ಇದು ಬದುಕಿನ ಮರೆಯಲಾಗದ ವರ….ಅಂತ ಅವರೇ ಹೇಳಿದ್ದಾರೆ.

ಮಾಧ್ಯಮಗಳ ಇಂಟರವ್ಯೂನಲ್ಲಿ ಮೇಘನಾ ಈ ಮಹತ್ವದ ಸಂಗತಿ‌ ಹಂಚಿಕೊಂಡಿದ್ದು, ಮಾರ್ಚ್‌ನಲ್ಲಿ ‌ಜಾರಿಯಾದ ಲಾಕ್ ಡೌನ್ ನನ್ನ‌ ಪಾಲಿಗೆ ಅವಿಸ್ಮರಣಿಯ ನೆನಪು. ಒಂಥರಾ ವರ ಇದ್ದಂತೆ. ಈ ಲಾಕ್ ಡೌನ್ ನಿಂದ ನಾನು ಮತ್ತು ಚಿರು ಮಾರ್ಚ್‌ನಿಂದ ಜೂನ್ ತನಕ ಒಟ್ಟಿಗೆ ಸಮಯ ಕಳೆಯಲು‌ ಸಾಧ್ಯವಾಯಿತು ಎಂದಿದ್ದಾರೆ.

ನಾವು ಈ ಸಮಯದಲ್ಲಿ ಸಂತೋಷದ ಸುದ್ದಿಯೊಂದನ್ನು ನೀರಿಕ್ಷಿಸುತ್ತಿದ್ದೇವು. ಅಂದುಕೊಂಡಂತೆ‌ ಆ ಸಿಹಿಸುದ್ದಿಯೂ ಸಿಕ್ಕಿತು. ಜೊತೆಗೆ ಚಿರು‌ ಪ್ರತಿಕ್ಷಣ ನನ್ನೊಂದಿಗೆ ಇದ್ದರು. ಹೀಗಾಗಿ ಈ ಸಮಯವನ್ನು ನಾವಿಬ್ಬರು ಒಟ್ಟಿಗೆ ಖುಷಿಯಿಂದ ಕಳೆದಿದ್ದೇವೆ ಎಂದು‌ಚಿರು ಜೊತೆಗಿನ ನೆನಪುಗಳನ್ನು ಹಂಚಿಕೊಂಡಿದ್ದಾರೆ.

ನಾನು ತಾಯಿಯಾಗುತ್ತಿದ್ದೇನೆ ಎಂದು ತಿಳಿಯುತ್ತಿದ್ದಂತೆ ಮನೆಯ ವಾತಾವರಣ ವೇ ಬದಲಾಯ್ತು. ಎಲ್ಲರೂ ಖುಷಿಯಿಂದ ಒಟ್ಟಿಗೆ ಕಾಲ ಕಳೆಯಲಾರಂಭಿಸಿದೆವು.

ಒಂದೊಮ್ಮೆ ಲಾಕ್ ಡೌನ್ ಜಾರಿಯಾಗದೇ ಇದ್ದಿದ್ದರೇ ನಂಗೆ ಚಿರು ಜೊತೆ ಅಷ್ಟೊಂದು ಸಮಯ ಒಟ್ಟಿಗೆ ಕಳೆಯಲು ಅವಕಾಶ ಸಿಗುತ್ತಿರಲಿಲ್ಲ. ಹೀಗಾಗಿ ಈ ಸಮಯ ನನ್ನ ಪಾಲಿಗೆ ಅತಿ ಅಮೂಲ್ಯವಾಗಿತ್ತು ಎಂದಿದ್ದಾರೆ.

ಲಾಕ್ ಡೌನ್ ನಿಧಾನಕ್ಕೆ ತೆರವಾಗುತ್ತಿದ್ದಂತೆ ಜೂನ್ ೭ ರಂದು ತೀವ್ರ ಹೃದಯಾಘಾತಕ್ಕೆ ತುತ್ತಾದ ಚಿರು ನಿಧನರಾಗಿದ್ದು, ಕುಟುಂಬಕ್ಕೆ ಶಾಕ್ ತಂದಿತ್ತು.

ಚಿರು ನಿಧನದ ವೇಳೆ ಐದು ತಿಂಗಳ ಗರ್ಭಿಣಿಯಾಗಿದ್ದ ಮೇಘನಾ ರಾಜ್ ಅಕ್ಟೋಬರ್ 22 ರಂದು ಗಂಡುಮಗುವಿಗೆ ಜನ್ಮ ನೀಡಿದ್ದರು. ಸಧ್ಯ ಮೇಘನಾ ರಾಜ್ ಮಗುವಿನ ಆರೈಕೆಯಲ್ಲಿ ಬ್ಯುಸಿಯಾಗಿದ್ದಾರೆ.

ಆದರೆ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿರುವ ಮೇಘನಾ ರಾಜ್ ಸದಾ ತಮ್ಮ ಹಾಗೂ ಚಿರು ಪೋಟೋಗಳನ್ನು ಶೇರ್ ಮಾಡಿಕೊಂಡು ಸಂಭ್ರಮಿಸುತ್ತಾರೆ‌‌

Comments are closed.