ಕಷ್ಟವಾದರೂ ಇಷ್ಟವಾಗಿದ್ದನ್ನು ಬಿಟ್ಟೆ…! ರಮ್ಯ ಪೋಸ್ಟ್ ನಲ್ಲಿ ಹೇಳ್ತಿರೋದೇನು ಗೊತ್ತೆ…?!

ಇತ್ತೀಚಿಗೆ ಸೆಲೆಬ್ರೆಟಿಗಳು ತಮ್ಮ ಫಿಟ್ ನೆಸ್ ಜೊತೆ ಆರೋಗ್ಯ,ಜೀವನಶೈಲಿ ಹಾಗೂ ಆಹಾರದ ಬಗ್ಗೆ ಯೂ ಸಾಕಷ್ಟು ಕಾಳಜಿ ವಹಿಸಲು ಆರಂಭಿಸಿದ್ದಾರೆ.

ಇದೀಗ ಈ ಸಾಲಿಗೆ ಸ್ಯಾಂಡಲ್ ವುಡ್ ಪದ್ಮಾವತಿ,ಮಾಜಿ ಸಂಸದೆ ರಮ್ಯಸ್ಪಂದನಾ ಹೊಸ ಸೇರ್ಪಡೆ. ಕಷ್ಟವಾದ್ರೂ ಗಟ್ಟಿ ನಿರ್ಧಾರ ಮಾಡಿ ತಮ್ಮಿಷ್ಟದ ನಾನ್ ವೆಜ್ ಬಿಟ್ಟಿರುವ ರಮ್ಯ ಈ ಸಂಗತಿಯನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ನಾನು ಈ ವರ್ಷದ ಆರಂಭದಲ್ಲೇ ಸಸ್ಯಹಾರಿಯಾಗಿ ಬದಲಾಗಿದ್ದೇನೆ. ಇದು ನನ್ನ ನಿರ್ಧಾರ. ನಮಗೆ ದೇಹಕ್ಕೆ ಅಗತ್ಯ ಪ್ರೋಟಿನ್ ಮಾಂಸದಲ್ಲಿದೆ ಎಂದು ಹೇಳಲಾಗುತ್ತದೆ. ಆದರೆ ಇದು ನಿಜವಲ್ಲ. ಸಸ್ಯಹಾರದಿಂದಲೂ ನೀವು ಅಗತ್ಯ ಪೋಷಕಾಂಶ ಪಡೆಯಬಹುದು ಎಂದಿದ್ದಾರೆ.

ನಾನು ಮಾಂಸಾಹಾರ ಬಿಟ್ಟ ಮೇಲೂ ನನ್ನ ದೇಹ ಹಾಗೂ ಆರೋಗ್ಯವನ್ನು ಚೆನ್ನಾಗಿಯೇ ಕಾಪಾಡಿಕೊಂಡಿದ್ದೇನೆ. ಸಧ್ಯ ನಾನು ಪ್ರಾಣಿ ಜನ್ಯ ಆಹಾರವನ್ನು ಬಿಡುವ ಚಿಂತನೆಯಲ್ಲಿದ್ದೇನೆ ಎಂದಿದ್ದಾರೆ.

ನನಗೆ ಐಸ್ಕ್ರೀಂ ಎಂದ್ರೇ ಪಂಚಪ್ರಾಣ.ಆದರೆ ಅದೊಂದು ಪ್ರಾಣಿಜನ್ಯ ಆಹಾರ. ಹೀಗಾಗಿ ಅದನ್ನು ಬಿಡುವ ನಿರ್ಧಾರಮಾಡಿದ್ದೇನೆ. ಪಾಲಿಸುವುದು ಕಷ್ಟ.ಆದರೂ‌ಕಠಿಣವಾಗಿ ನಿರ್ಧಾರ ಮಾಡಬೇಕಷ್ಟೇ ಎಂದಿದ್ದು ಅಚ್ಚರಿ ಮೂಡಿಸಿದ್ದಾರೆ.

ಸಧ್ಯ ಕಾಂಗ್ರೆಸ್ ಪಕ್ಷದ ಚಟುವಟಿಕೆ,ಸಿನಿಮಾ ಜಾಗೂ ಸಿನಿಮಾ ಸಂಬಂಧಿತ ಚಟುವಟಿಕೆ, ಕಾರ್ಯಕ್ರಮಗಳಿಂದನೂ ದೂರ ಇರುವ ರಮ್ಯ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿದ್ದು ಆಗಾಗ ಪೋಟೋಸ್ ತಮ್ಮ ಅಭಿಪ್ರಾಯಗಳನ್ನು ಶೇರ್ ಮಾಡಿಕೊಳ್ಳುತ್ತಲೇ ಇರುತ್ತಾರೆ.

ಮೊನ್ನೆ ಮೊನ್ನೆಯಷ್ಟೇ ಕೃಷಿವಿರೋಧಿ ಕಾನೂನಿನ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರ ಬೆಂಬಲಾರ್ಥ ಒಂದು ಹೊತ್ತಿನ ಊಟ‌ಕೈಬಿಟ್ಟು ಹೋರಾಟಕ್ಕೆ ಬೆಂಬಲಿಸಿದ್ದರು.

Comments are closed.