ಮೇಘನಾ ಬದುಕಿಗೆ ತಿರುವು ಕೊಟ್ಟ ಚಿರು ಡೈರಿ….! ಪತಿ ಬರೆದಿದ್ದನ್ನು ಓದಿ ಪತ್ನಿ ಕೈಗೊಂಡ ತೀರ್ಮಾನ ಏನು‌ ಗೊತ್ತಾ…?!

ಯುವಸಾಮ್ರಾಟ್ ಚಿರಂಜೀವಿ ಸರ್ಜಾ ಬದುಕನ್ನು ತುಂಬ ಪ್ರೀತಿಸುತ್ತಿದ್ದ ಯುವ ನಟ. ಆದರೆ‌ ಸಾಧನೆಯ ಹಾದಿ ದೀರ್ಘವಾಗಿರು ವಾಗಲೇ ಚಿರು ಸರಿದು ಹೋದರು. ಆದರೆ ಅವರ ಸಾವಿನ ನಂತರ‌ಶಾಕ್‌ನಲ್ಲಿದ್ದ ಮೇಘನಾ ಗೆ ಅವರ ಬರಹವೇ ಪ್ರೇರಣೆ ಯಾಗಿದೆಯಂತೆ.

ಚಿರು ಹೀಗೆ ಬಿದ್ದು ಹಾಗೇ ಹೋದಾಗ ಮೇಘನಾ ಐದು ತಿಂಗಳ ಗರ್ಭಿಣಿ. ಬದುಕಿನ ಖುಷಿ ಹಂಚಿಕೊಳ್ಳಬೇಕಿದ್ದ ಪತಿಯೇ ಇನ್ನಿಲ್ಲವಾದಾಗ ಮೇಘನಾಗೆ ಏನು ಮಾಡಬೇಕು? ಯಾಕೆ ಬದುಕಬೇಕು? ಎಂಬುದೇ ಅರ್ಥವಾಗಿರಲಿಲ್ಲವಂತೆ.

ಸಧ್ಯ ಜ್ಯೂನಿಯರ್ ಚಿರುವನ್ನು ಮಡಿಲಲ್ಲಿ ಇಟ್ಕೊಂಡು ಆತನಿಗಾಗಿ ಬದುಕುವ ತೀರ್ಮಾನ ಕೈಗೊಂಡಿರುವ ಮೇಘನಾಗೆ ಬದುಕಿನ ತೀರ್ಮಾನಗಳನ್ನು ಕೈಗೊಳ್ಳೋಕೆ ಚಿರು ಬರೆದ ಡೈರಿಯ ಸಾಲುಗಳು ಪ್ರೇರಣೆಯಾದವಂತೆ.

ಚಿರುಗೆ ಪ್ರತಿನಿತ್ಯ ತನ್ನ ಇಷ್ಟದ ಸಾಲನ್ನು ಡೈರಿಯಲ್ಲಿ ಬರೆದಿಡುವ ಹವ್ಯಾಸ ಇತ್ತಂತೆ. ಚಿರು ತೀರಿಕೊಂಡ ಆರು ತಿಂಗಳ ನಂತರ ಚಿರು ಡೈರಿ ಮೇಘನಾ ಕೈಸೇರಿದೆ. ಅದನ್ನು ತೆರೆದ ಮೇಘನಾಗೆ ” ಅದರಲ್ಲಿನ ಒಂದು ಸಾಲು ಸೆಳೆದಿದ್ದಲ್ಲದೇ ಅವರ ಎಲ್ಲ ನೋವು,ಗೊಂದಲಗಳಿಗೆ ಉತ್ತರವಾಗಿದೆಯಂತೆ.

ನಟನೆ ನನ್ನ ಬದುಕು. ಇಷ್ಟಪಡುವ ವಸ್ತುಗಳಿಂದ ಯಾವತ್ತೂ ದೂರ ಸರಿಯಬಾರದು ಎಂದು ಚಿರು ಬರೆದಿದ್ದರಂತೆ. ಇದನ್ನು ಓದಿದ ಮೇಲೆ‌ ಮೇಘನಾ ಮತ್ತಷ್ಟು ಸ್ಟ್ರಾಂಗ್ ಆಗಿದ್ದಾರೆ.ಅಷ್ಟೇ ಅಲ್ಲ ಬದುಕಿನ ಎಲ್ಲ ಗೊಂದಲಗಳನ್ನು ದೂರ ಮಾಡಿಕೊಂಡು ಗಟ್ಟಿಯಾಗಿ ನಿರ್ಧಾರ ಕೈಗೊಂಡು ಬದುಕುವ ತೀರ್ಮಾನ ಮಾಡಿದ್ದಾರಂತೆ.

ಈ ಡೈರಿ ಓದುವ ಮುನ್ನ ಮೇಘನಾಗೆ ಇನ್ಮುಂದೆ ನಟನೆ ಮುಂದುವರೆಸಬೇಕೋ ಬೇಡವೋ ಎಂಬ ಗೊಂದಲ ಇತ್ತಂತೆ. ಆದರೇ ನಾವು ಪ್ರೀತಿಸುವ ಸಂಗತಿಯನ್ನು ದೂರ ಮಾಡಬಾರದು ಎಂಬ ಚಿರು ಮಾತಿಗೆ ಮೇಘನಾ‌ಮತ್ತೆ ನಟಿಸುವ ನಿರ್ಧಾರ ಮಾಡಿದ್ದಾರಂತೆ.

ನಟನೆ ಅನ್ನೋದು ನನ್ನ‌ರಕ್ತದಲ್ಲಿದೆ. ಅದನ್ನು ಬಿಟ್ಟು ಬೇರೆನೂ ನನಗೆ ಗೊತ್ತಿಲ್ಲ. ಹೀಗಾಗಿ ನಟನೆಯನ್ನು ಮುಂದುವರೆಸಿಕೊಂಡು ಹೋಗುವುದು ಮತ್ತು ಚಿರು ಕನಸಿನಂತೆ ಜ್ಯೂನಿಯರ್ ಚಿರು ವನ್ನು ಬೆಳೆಸೋದು ಎರಡೇ ಸಧ್ಯ ನನ್ನ‌ ಮುಂದಿರುವ ಕನಸು ಎಂದು ಭಾವುಕರಾಗುತ್ತಾರೆ ನಟಿ ಮೇಘನಾ ರಾಜ್….!

Comments are closed.