ಸಿನಿಮಾಕ್ಕೆ ಅಡ್ವಾನ್ಸ್ ಪಡೆದಿದ್ದೇ…! ಸ್ವಾಮಿ, ಉಳಿದ ವ್ಯವಹಾರ ನನಗೆ ಗೊತ್ತಿಲ್ಲ…! ನಟಿ ರಾಧಿಕಾಕುಮಾರಸ್ವಾಮಿ ಸುದ್ದಿಗೋಷ್ಟಿ…!!

ಬೆಂಗಳೂರು: ರಾಜಕೀಯ ನಾಯಕರ ಹೆಸರಿನಲ್ಲಿ ವಂಚಿಸುತ್ತಿದ್ದ ಯುವರಾಜ್ ಅಲಿಯಾಸ್ ಸ್ವಾಮಿ ಪ್ರಕರಣದಲ್ಲಿ ತಮ್ಮ‌ ಹೆಸರು ಕೇಳಿಬಂದಿರೋದಿಕ್ಕೆ ನಟಿ ರಾಧಿಕಾಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದಾರೆ.

ಡಾಲರ್ಸ್ ಕಾಲೋನಿ ನಿವಾಸದಲ್ಲಿ ಸುದ್ದಿ ಗೋಷ್ಟಿ ನಡೆಸಿದ ರಾಧಿಕಾ ಕುಮಾರಸ್ವಾಮಿ ಜೊತೆ ಅವರ ಸಹೋದರ ಕೂಡ ಉಪಸ್ಥಿತರಿದ್ದರು.

ಈ ವೇಳೆ ಮಾತನಾಡಿದ ರಾಧಿಕಾ ಕುಮಾರಸ್ವಾಮಿ ಯುವರಾಜ್ ಅಲಿಯಾಸ್ ಸ್ವಾಮಿ ನಮ್ಮ ಕುಟುಂಬಕ್ಕೆ ೧೭ ವರ್ಷಗಳ ಪರಿಚಯ. ಒಂದು ವರ್ಷದ ಹಿಂದೆ ಐತಿಹಾಸಿಕ ಸಿನಿಮಾ ಮಾಡೋದಾಗಿ ನನ್ನೊಂದಿಗೆ ಹೇಳಿದ್ದರು.

ಅಷ್ಟೇ ಅಲ್ಲ ಆ ಚಿತ್ರದಲ್ಲಿ ನಾಯಕಿಯಾಗಿ ನಟಿಸಲು ಕೇಳಿಕೊಂಡಿದ್ದರು. ಅದಕ್ಕೆ ನಾನು ಒಪ್ಪಿಕೊಂಡಿದ್ದೆ. ಅದರ ಅಡ್ವಾನ್ಸ್ ಅಂತ ಅವರು ನನಗೆ ಅವರ ಅಕೌಂಟ್ ನಿಂದ ೧೫ ಲಕ್ಷ ಹಾಗೂ ಅವರ ಸಂಬಂಧಿ‌ ಹೆಸರಿನ ಅಕೌಂಟ್ ನಿಂದ ೬೦ ಒಟ್ಟು ೭೫ ಲಕ್ಷ ನೀಡಿದ್ದಾರೆ.

ಸಿನಿಮಾ‌ ಅಡ್ವಾನ್ಸ್ ಗಾಗಿ ನಾನು ಈ ಹಣ ಪಡೆದಿದ್ದೇನೆ. ಸಿನಿಮಾದಲ್ಲಿ ನಾವು ಬಾಯಿಮಾತಿನಲ್ಲಿ‌ಮಾತಾಡಿಕೊಂಡು ವ್ಯವಹಾರ ಮಾಡುತ್ತೇವೆ. ಹಾಗೇ ಇವರಿಂದಲೂ ಸಿನಿಮಾಗೆ ಯಾವುದೇ ಅಗ್ರಿಮೆಂಟ್ ಇಲ್ಲದೇ ಹಣ ಪಡೆದಿದ್ದೆ.


ಯುವರಾಜ್ ಹೆಂಡತಿ ಹೆಸರಿನಲ್ಲಿ ಪ್ರೊಡಕ್ಷನ್ ಹೌಸ್ ಇದೆ. ಅವರ ಪ್ರೊಡಕ್ಷನ್ ಹೌಸ್ ನಲ್ಲಿ ಐತಿಹಾಸಿಕ ನಾಟ್ಯರಾಣಿ ಶಾಕುಂತಲಾ ಸಿನಿಮಾ ಮಾಡೋದಾಗಿ ಹೇಳಿದ್ದರು.ಇದನ್ನು ಹೊರತುಪಡಿಸಿ ಅವರೊಂದಿಗೆ ನನಗೆ ಯಾವುದೇ ರೀತಿಯ ಸಂಬಂಧವಿಲ್ಲ. ಉಳಿದ ವ್ಯವಹಾರಗಳ ಬಗ್ಗೆ‌ನಮಗೆ ಏನು ಗೊತ್ತಿಲ್ಲ ಎಂದು ರಾಧಿಕಾ ಹೇಳಿದ್ದಾರೆ.

ಅವರು ನನ್ನ ತಂದೆಯ ಕಾಲದಿಂದಲೂ ಪರಿಚಯ. ಅವರ ಕಷ್ಟಕ್ಕೆ ನನ್ನ‌ ತಂದೆ ಸಹಾಯ ಮಾಡಿದ್ದಾರೆ. ಅವರು ಕೂಡ ನನ್ನ ತಂದೆಯ ಬಗ್ಗೆ ಹೇಳಿದ ಭವಿಷ್ಯ ನಿಜವಾಗಿದೆ. ಹೀಗಾಗಿ ನಾವು ಅವರ ಮಾತನ್ನು ನಂಬುತ್ತಿದ್ದೇವು.

ವಾಸ್ತು ಸೇರಿದಂತೆ ಹಲವು ವೈಯಕ್ತಿಕ ಸಮಸ್ಯೆಗಳನ್ನು ಹೇಳಿಕೊಂಡು ಅವರು ಸೂಚಿಸಿದ ಪೂಜೆ ಪರಿಹಾರಗಳನ್ನು ಮಾಡಿಸಿಕೊಂಡಿದ್ದೇವೆ ಎಂದು ರಾಧಿಕಾ ಹೇಳಿದ್ದಾರೆ.ಆದರೆ ಅವರು ನನಗೆ ೧.೫ ಕೋಟಿ ಹಣ ನೀಡಿದ್ದಾರೆ. ನಾನು ಅವರಿಗೆ ರಾಜಕೀಯ ಡೀಲ್ ಗಳನ್ನು ‌ಮಾಡಿಕೊಡುತ್ತಿದ್ದೆ ಎಂಬೆಲ್ಲ ಆರೋಪಗಳಲ್ಲಿ ಹುರುಳಿಲ್ಲ.

ಜೀವನದಲ್ಲಿ ನಾನು ಮೋಸ ಹೋಗಿದ್ದೇನೆಯೇ ಹೊರತು ನಾವ್ಯಾರಿಗೂ ಮೋಸ ಮಾಡಿಲ್ಲ ಎಂದು ರಾಧಿಕಾ‌ಖಡಕ್ ಆಗಿ ಉತ್ತರಿಸಿದ್ದಾರೆ.

Comments are closed.