ಕ್ರೇಜಿಸ್ಟಾರ್ ರವಿಚಂದ್ರನ್ ಸ್ಯಾಂಡಲ್ ವುಡ್ ಗೆ ಹೊಸ ರೂಪ ಕೊಟ್ಟವರು. ಚಿತ್ರರಂಗವನ್ನು ಅಪಾರವಾಗಿ ಪ್ರೀತಿಸುವ ರವಿಚಂದ್ರನ್ ಗೆ ಈಗ ಮಗನೂ ಸಾಥ್ ನೀಡಿದ್ದಾನೆ. ಕೊರೋನಾ ಸಂಕಷ್ಟದಲ್ಲಿರುವ ಸಿನಿ ಕಾರ್ಮಿಕರಿಗೆ ನೆರವಾಗೋ ನಿಟ್ಟಿನಲ್ಲಿ ಮನುರಂಜನ್ 5 ಸಾವಿರ ರೂಪಾಯಿ ಸಹಾಯಧನ ಘೋಷಿಸಿದ್ದಾರೆ.
ಕೊರೋನಾ ಲಾಕ್ ಡೌನ್ ನಿಂದ ಮನೋರಂಜನಾ ಕ್ಷೇತ್ರ ತನ್ನ ಚಟುವಟಿಕೆ ಸಂಪೂರ್ಣ ಸ್ಥಗಿತಗೊಳಿಸಿದೆ. ಹೀಗಾಗಿ ಸಿನಿಕಾರ್ಮಿಕರು ಸಂಕಷ್ಟದಲ್ಲಿದ್ದಾರೆ. ಇದನ್ನು ಅರಿತ ನಟ ರವಿಚಂದ್ರನ್ ಪುತ್ರ ಮನುರಂಜನ್ ತನ್ನ ಮುಗಿಲುಪೇಟೆ ಚಿತ್ರತಂಡದ 100 ಕ್ಕೂ ಅಧಿಕ ಕಾರ್ಮಿಕರಿಗೆ ಸಹಾಯಧನ ಘೋಷಿಸಿದ್ದಾರೆ.
ತನ್ನ ಚಿತ್ರಕ್ಕಾಗಿ ಹಗಲು ಇರುಳೆನ್ನದೇ ನೂರಾರು ಕಾರ್ಮಿಕರು ಶ್ರಮಿಸುತ್ತಿದ್ದು, ಅವರು ಈಗ ಕೊರೋನಾದಿಂದ ಸಂಕಷ್ಟದಲ್ಲಿದ್ದಾರೆ. ಇಂಥ ಹೊತ್ತಿನಲ್ಲಿ ಅವರ ಕಷ್ಟಕ್ಕೆ ನೆರವಾಗುವುದು ನಮ್ಮ ಕರ್ತವ್ಯ ಎಂದಿರುವ ಮನುರಂಜನ್, ತನ್ನ ಚಿತ್ರತಂಡ ಪ್ರತಿ ಕಾರ್ಮಿಕರ ಅಕೌಂಟ್ ಗೆ 5 ಸಾವಿರ ರೂಪಾಯಿ ಹಾಕುವುದಾಗಿ ಘೋಷಿಸಿದ್ದಾರೆ.
ನನ್ನ ಸಿನಿಮಾಗಾಗಿ ತನುಮನ ಅರ್ಪಿಸಿ ದುಡಿಯುತ್ತಿರುವ ಕಾರ್ಮಿಕರಿಗೆ ಇದು ನಾನು ಸಲ್ಲಿಸುವ ಸಣ್ಣ ಸಹಾಯ ಎಂದು ಮನುರಂಜನ್ ಹೇಳಿಕೊಂಡಿದ್ದಾರೆ.
ಈಗಾಗಲೇ ಚಿತ್ರರಂಗದ ಹಲವು ನಟ-ನಟಿಯರು ಕಾರ್ಮಿಕರು, ಹಿರಿಯ ಕಲಾವಿದರ ಸಹಾಯಕ್ಕೆ ಧಾವಿಸಿದ್ದು, ನಟಿ ರಾಗಿಣಿ, ಸುದೀಪ್, ಉಪೇಂದ್ರ್, ಶಿವಣ್ಣ ಹೀಗೆ ಹಲವರು ನೆರವಾಗುತ್ತಿದ್ದಾರೆ.
2017 ರಲ್ಲಿ ಸಾಹೇಬಾ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಕಾಲಿಟ್ಟ ಮನುರಂಜನ್ ಮೊದಲ ಚಿತ್ರದಲ್ಲೇ ಭರವಸೆ ಮೂಡಿದ್ದು, ಸದ್ಯ ಮುಗಿಲಪೇಟೆ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.
Comments are closed.