ಲೈವ್ ನಲ್ಲೇ ಕಣ್ಣಿರಿಟ್ಟ ರಾಗಿಣಿ ದ್ವಿವೇದಿ….! ತುಪ್ಪದ ಬೆಡಗಿ ದುಃಖಕ್ಕೆ ಕಾರಣ ಏನು ಗೊತ್ತಾ…?!

ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದಲ್ಲಿ ಜೈಲು ಸೇರಿ ಜಾಮೀನು ಪಡೆದ ಹೊರಗೆ ಬಂದ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಸುದ್ದಿಗೋಷ್ಠಿಗೂ ಮುನ್ನ ವೇ ಅಭಿಮಾನಿಗಳೊಂದಿಗೆ ಕಣ್ಣೀರಾಗಿದ್ದಾರೆ.  ಪೇಸ್ ಬುಕ್ ಲೈವ್ ಬಂದ ರಾಗಿಣಿ ತಮ್ಮ ಜೈಲಿನ ದಿನಗಳನ್ನು ನೆನೆದು ಕಣ್ಣಿರಿಟ್ಟಿದ್ದು, ಪಾಸಿಟಿವ್ ಆಗಿರಿ ಏನೇ ಆಗಲಿ ಧೈರ್ಯ ಕಳೆದುಕೊಳ್ಳಬೇಡಿ ಎಂದಿದ್ದಾರೆ.

ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದಲ್ಲಿ ಜೈಲು ಸೇರಿದ್ದ ರಾಗಿಣಿ ಸುಪ್ರೀಂ ಕೋರ್ಟ್ ನಿಂದ ಜಾಮೀನು ಪಡೆದುಕೊಂಡಿದ್ದು, ಸಧ್ಯದಲ್ಲೇ ಸುದ್ದಿಗೋಷ್ಠಿ ನಡೆಸಿ  ಪ್ರಕರಣದ ಬಗ್ಗೆ ಹಲವು ಸಂಗತಿ ಹಂಚಿಕೊಳ್ಳುವುದಾಗಿ ಹೇಳಿಕೊಂಡಿದ್ದರು. ಜೈಲಿನಿಂದ ಹೊರಬಂದಾಗಿನಿಂದ ದೇವಾಲಯ, ಮಸೀದಿಗಳಿಗೆ ಭೇಟಿ ನೀಡಿದ್ದ ನಟಿ ರಾಗಿಣಿ ಇದೇ ಮೊದಲ ಬಾರಿಗೆ ಪೇಸ್ ಬುಕ್ ಲೈವ್ ಬಂದಿದ್ದಾರೆ.

ಈ ವೇಳೆ ತಾವು ಜೈಲಿನಲ್ಲಿ ಕಳೆದ 140 ದಿನಗಳನ್ನು ನೆನಪಿಸಿಕೊಂಡು ಕಣ್ಣೀರಿಟ್ಟಿದ್ದಾರೆ. ನನಗೆ ಜೈಲಿನಲ್ಲಿ ದಿನಕಳೆಯುವುದು ತುಂಬ ಕಷ್ಟವಾಯಿತು. ತುಂಬಾ ಮಾನಸಿಕ ಹಿಂಸೆ ಅನುಭವಿಸಿದೆ. ಆಗೆಲ್ಲ ನಾನು ಮೌನವಾಗಿದ್ದು, ನನಗೆ ನಾನೇ ಧೈರ್ಯ ತುಂಬಿಕೊಳ್ಳುತ್ತಿದೆ. ಕುಟುಂಬದವರು ನನ್ನ ನಿಜವಾದ ಶಕ್ತಿ. ಅವರು ಸದಾ ನನ್ನೊಂದಿಗೆ ನನಗೆ ಧೈರ್ಯ ತುಂಬಿದರು ಎಂದಿದ್ದಾರೆ.

https://www.instagram.com/tv/CLHhcVGJJ0q/?igshid=1hq9ezoye11wz

ನಿಮ್ಮ ಬಗ್ಗೆ ನಿಮಗೆ ನಂಬಿಕೆ ಇದ್ದರೇ, ನಿಮ್ಮಲ್ಲಿ ಛಲವಿದ್ದರೇ ನೀವು ಯಾರಿಗೂ ಯಾವುದಕ್ಕೂ ಹೆದರಬೇಕಿಲ್ಲ.ಅದೇ ಶಕ್ತಿಯಿಂದಲೇ ನಾನು ಇಂದು ನಿಮ್ಮ ಮುಂದೇ ಬಂದು ಮಾತನಾಡುತ್ತಿದ್ದೇನೆ ಎಂದ ರಾಗಿಣಿ, 12 ವರ್ಷದಿಂದ ಕನ್ನಡ ಚಲನಚಿತ್ರ ರಂಗದಲ್ಲಿದ್ದೇನೆ. ಸಾಮಾಜಿಕ ಕಾರ್ಯಗಳಲ್ಲಿ ತೊಡಗಿದ್ದೇನೆ. ಹೀಗಾಗಿ ಇಂಥ ಏಳುಬೀಳುಗಳನ್ನು ಎದುರಿಸುವುದನ್ನು ನನಗೆ ನನ್ನ ತಂದೆ-ತಾಯಿ ಚೆನ್ನಾಗಿ ಹೇಳಿಕೊಟ್ಟಿದ್ದಾರೆ ಎಂದರು.

ನಾನು ಈ ವಿಡಿಯೋ ಮಾಡುತ್ತಿರೋದು  ಮಾನಸಿಕವಾಗಿ ನೊಂದಿರುವವರಿಗಾಗಿ ಮೆಂಟಲ್ ಹೆಲ್ತ್ ತುಂಬ ಮುಖ್ಯ. ಯಾವುದೇ ರೀತಿಯ ಕಷ್ಟ ಬಂದರೂ ಕುಗ್ಗಬೇಡಿ. ನೀವು ನಿಮಗಾಗಿ ನಿಮ್ಮವರಿಗಾಗಿ ಸ್ರ್ಟಾಂಗ್ ಆಗಬೇಕು ಎಂದಿದ್ದಾರೆ. ಅಷ್ಟೇ ಅಲ್ಲ ಲೈವ್ ನಲ್ಲೇ ಸಾಕಷ್ಟು ವಿಚಾರಗಳನ್ನು ಮುಕ್ತವಾಗಿ ಹಂಚಿಕೊಂಡಿರುವ ರಾಗಿಣಿ, ನನಗೆ ಸ್ವಲ್ಪ ಟೈಂಕೊಡಿ. ಒಂದೊಳ್ಳೆ ಸಿನಿಮಾ ಕೊಡುತ್ತೇನೆ. ನಿಮ್ಮನ್ನು ಎಂಟ್ರಟೈನ್ ಮಾಡುತ್ತೇನೆ ಎಂದು ಮನವಿ ಮಾಡಿದ್ದಾರೆ.

ರಾಗಿಣಿ ಲೈವ್ ವಿಡಿಯೋಗೆ ಹಲವರು ಕೆಟ್ಟದಾಗಿ ಕಮೆಂಟ್ ಮಾಡಿದ್ದಾರೆ. ಅಂತಹವರಿಗೂ ತಾಳ್ಮೆಯಿಂದ ಉತ್ತರಿಸಿರುವ ರಾಗಿಣಿ ,ಹೆಣ್ಣುಮಕ್ಕಳಿಗೆ ಕೆಟ್ಟ ಹೆಸರು ಇಡೋದರಿಂದ, ಅವರ ಕುಟುಂಬವನ್ನು ಟೀಕಿಸುವುದರಿಂದ ನಿಮಗೆ ಏನುಖುಷಿ ಸಿಗುತ್ತೋ ಗೊತ್ತಿಲ್ಲ. ಆದರೆ ಹಾಗಾದರೂ ನೀವು ಖುಷಿ ಪಟ್ಟಿರಲ್ಲ.ಅಷ್ಟೇ ಸಾಕು ಬಿಡಿ ಎಂದು ಕಮೆಂಟ್ ಮೂಲಕ ಟಾಂಗ್ ನೀಡಿದ್ದಾರೆ.  

Comments are closed.