ಕೊರೋನಾ ಎರಡನೇ ಅಲೆಯಿಂದ ಚಿತ್ರರಂಗ ಎಲ್ಲ ಚಟುವಟಿಕೆಗಳು ಸ್ಥಗಿತಗೊಂಡಿದ್ದು ಚಿತ್ರರಂಗದ ದಿನಗೂಲಿ ಕಾರ್ಮಿಕರು ಕಂಗಾಲಾಗಿದ್ದಾರೆ. ಈ ಕಾರ್ಮಿಕರ ಸಂಕಷ್ಟಕ್ಕೆ ಮಿಡಿದ ಉಪೇಂದ್ರ್ 3 ಸಾವಿರಕ್ಕೂ ಅಧಿಕ ಕಾರ್ಮಿಕರಿಗೆ ದಿನಸಿ ಕಿಟ್ ವಿತರಿಸುವುದಾಗಿ ಹೇಳಿದ್ದರು. ಈಗ ದಿನಸಿ ಕಿಟ್ ಗೆ ತರಕಾರಿ ಸೇರಿಸಿ ರೈತರನ್ನು ಕಾಪಾಡಿದ್ದಾರೆ.
ರಾಜ್ಯದೆಲ್ಲೆಡೆ ಕೊರೋನಾದಿಂದ ಮದುವೆ-ಮುಂಜಿ ಮುಂತಾದ ಶುಭಕಾರ್ಯಗಳು ಸ್ಥಗಿತಗೊಂಡಿದ್ದು, ಹೊಟೇಲ್, ರೆಸ್ಟೊರೆಂಟ್ ಗಳು ಬಾಗಿಲು ತೆರೆಯುತ್ತಿಲ್ಲ. ಹೀಗಾಗಿ ತರಕಾರಿ ಮಾರುಕಟ್ಟೆಯಲ್ಲಿ ಬೆಲೆ ಕುಸಿತವಾಗಿದ್ದು, ತರಕಾರಿ ಬೆಳೆದ ರೈತರು ಕಂಗಾಲಾಗಿದ್ದಾರೆ. ‘
ಚಿತ್ರರಂಗದ ದಿನಗೂಲಿ ಕಾರ್ಮಿಕರಿಗೆ ದಿನಸಿ ಕಿಟ್ ವಿತರಿಸಲು ಮುಂಧಾಗಿರುವ ನಟ ಉಪೇಂದ್ರ್ ಇದರೊಂದಿಗೆ ರೈತರಿಗೂ ನೆರವಾಗಲು ಮುಂದಾಗಿದ್ದಾರೆ. ತರಕಾರಿ ಬೆಳೆದ ರೈತರಿಂದ ನೇರವಾಗಿ ತರಕಾರಿ ಖರಿದೀಸಿ ಅದನ್ನು ಕಿಟ್ ಜೊತೆ ವಿತರಿಸಲು ನಿರ್ಧರಿಸಿದ್ದಾರೆ.
ಇದರಿಂದ ತರಕಾರಿ ಬೆಳೆದ ರೈತರಿಗೆ ಸ್ವಲ್ಪವಾದರೂ ನೆರವು ಸಿಕ್ಕಂತಾಗಲಿದೆ ಅನ್ನೋದು ಉಪೇಂದ್ರ್ ಪ್ಲ್ಯಾನ್. ಉಪೇಂದ್ರ ದಿನಸಿ ಕಿಟ್ ವಿತರಿಸುವುದಾಗಿ ಘೋಷಿಸುತ್ತಿದ್ದಂತೆ ಎಲ್ಲೆಡೆಯಿಂದ ನೆರವು ಹರಿದುಬಂದಿದ್ದು, ನಟ-ನಟಿಯರು,ಸಂಘ-ಸಂಸ್ಥೆಗಳು ಉಪೇಂದ್ರ್ ಅವರಿಗೆ ಧನಸಹಾಯ ಮಾಡಿದ್ದಾರೆ.
ಆ ಎಲ್ಲ ಸಹಾಯಧನದೊಂದಿಗೆ ಕಾರ್ಮಿಕರಿಗೆ ದಿನಸಿ ಹಾಗೂ ಅಗತ್ಯ ಉಳ್ಳವರಿಗೆ ಧನಸಹಾಯ ನೀಡಲು ಉಪೇಂದ್ರ್ ಹಾಗೂ ತಂಡ ನಿರ್ಧರಿಸಿದೆ. ಒಟ್ಟಿನಲ್ಲಿ ಕೊರೋನಾ ಸಂಕಷ್ಟದಲ್ಲಿ ಚಿತ್ರರಂಗಕ್ಕೆ ರಿಯಲ್ ಸ್ಟಾರ್ ರಿಯಲ್ ಸಹಾಯಹಸ್ತ ಚಾಚಿದ್ದು, ಕಾರ್ಮಿಕರ ಕಣ್ಣೀರು ಒರೆಸುವ ನಾಯಕರಾಗಿದ್ದಾರೆ.
Comments are closed.