ಕರೋನಾ ಎರಡನೇ ಅಲೆ ಎಫೆಕ್ಟ್…! ಬಾಗಿಲು ಮುಚ್ಚುತ್ತಾ ಬಿಗ್ ಬಾಸ್ ಶೋ…!?

ಕೊರೋನಾ ಎರಡನೇ ಅಲೆ ಕರ್ನಾಟಕ ಸೇರಿದಂತೆ ದೇಶವನ್ನೇ ಸಂಕಷ್ಟಕ್ಕೆ ದೂಡಿದೆ. ಎಲ್ಲೆಡೆಯೂ ಸೋಂಕು ಹರಡುತ್ತಲೇ ಇದೆ. ಹೀಗಾಗಿ ಜೀವನಾವಶ್ಯಕ ವಸ್ತುಗಳನ್ನು ಹೊರತುಪಡಿಸಿ ಮನೋರಂಜನೆ ಸೇರಿದಂತೆ ಎಲ್ಲವನ್ನು ಬಂದ್ ಮಾಡಲಾಗಿದೆ. ಈ ಮಧ್ಯೆ ಕನ್ನಡದ ಅತಿದೊಡ್ಡ ರಿಯಾಲಿಟಿ ಶೋ ಖ್ಯಾತಿಯ ಬಿಗ್ ಬಾಸ್ ಶೋ ಮೇಲೂ ಕೊರೋನಾ ಕರಿನೆರಳು ಬಿದ್ದಿದ್ದು, ಶೋ ಅರ್ಧದಲ್ಲೇ ಮೊಟಕುಗೊಳ್ಳಲಿದೆ ಎನ್ನಲಾಗುತ್ತಿದೆ.

https://kannada.newsnext.live/indian-cricketer-veda-krishnamoorthi-sister-death-corona-virus/

ಕೊರೋನಾ ಕರಿನೆರಳಿನಿಂದಾಗಿ ಈಗಾಗಲೇ ಎಲ್ಲೆಡೆ ಜನತಾ ಕರ್ಪ್ಯೂ, ಲಾಕ್ ಡೌನ್ ಜಾರಿಯಾಗಿದೆ. ಜೀವನಾವಶ್ಯಕ ಅಂಗಡಿಗಳನ್ನು ಹೊರತುಪಡಿಸಿ ಬೇರೆಲ್ಲವುಗಳ ಮೇಲೂ ನಿರ್ಬಂಧ ಹೇರಲಾಗಿದೆ. ಈ ಮಧ್ಯೆ ಕನ್ನಡದ ಧಾರಾವಾಹಿಗಳ ಚಿತ್ರೀಕರಣವೂ ಸಂಪೂರ್ಣ ಸ್ಥಗಿತಗೊಂಡಿದೆ. ರಿಯಾಲಿಟಿ ಶೋ ಬಿಗ್ ಬಾಸ್ ಶೋ ನಡೆಯುತ್ತಿದ್ದು ಸದ್ಯದಲ್ಲೇ ಶೋ ಮೊಟಕುಗೊಳಿಸಲಾಗುತ್ತದೆ ಎಂಬ ಸುದ್ದಿ ವಾಹಿನಿ ಕಡೆಯಿಂದ ಹೊರಬಿದ್ದಿದೆ.

https://kannada.newsnext.live/sandalwood-jotejoteyali-actor-meghashetty-corona-covid-19-talk/

ಬಿಗ್ ಬಾಸ್ ಶೋ ಸ್ಟ್ರಾಂಗ್ ಕಂಟೆಸ್ಟೆಂಟ್ ಎಂದೇ ಕರೆಯಿಸಿಕೊಂಡಿದ್ದ ದಿವ್ಯ ಉರುಡುಗ ಅನಾರೋಗ್ಯದಿಂದ ಆಸ್ಪತ್ರೆ ಸೇರಿದ್ದು, ಮೂಲಗಳ ಮಾಹಿತಿ ಪ್ರಕಾರ ಅವರಿಗೆ ಯೂರಿನ್ ಟ್ರ್ಯಾಕ್ ಇನಪೆಕ್ಸನ್ ಕಾಣಿಸಿಕೊಂಡಿದೆ ಎನ್ನಲಾಗಿದೆ. ಕೊರೋನಾ ನಿಯಮಗಳು ಎಲ್ಲೆಡೆ ಕಟ್ಟುನಿಟ್ಟಾಗಿ ಜಾರಿಯಾಗಿರೋದರಿಂದ ಇನ್ನು ಬಿಗ್ ಬಾಸ್ ಶೋ ಮುಂದುವರೆಸಿದಲ್ಲಿ ಅನಾರೋಗ್ಯ ಸಮಸ್ಯೆಗಳು ಎದುರಾದರೇ ಕಷ್ಟ ಎಂಬ ಸ್ಥಿತಿ ಇದೆ.

ಹೀಗಾಗಿ 10ಕ್ಕೂ ಹೆಚ್ಚು ಸ್ಪರ್ಧಿಗಳು, ಶೋಗೆ ಸಂಬಂಧಿಸಿದ ಸಿಬ್ಬಂದಿ ಎಲ್ಲರ ಆರೋಗ್ಯದ ದೃಷ್ಟಿಯಿಂದ ಶೋ ಮೊಟಕುಗೊಳಿಸುವುದೇ ಸೂಕ್ತ ಎಂಬ ತೀರ್ಮಾನಕ್ಕೆ ವಾಹಿನಿ ಬಂದಿದೆ ಎನ್ನಲಾಗುತ್ತಿದೆ. ಇನ್ನೊಂದೆಡೆ ಸರ್ಕಾರಿ ನಿಯಮಗಳ ಪ್ರಕಾರವೂ ಕೂಡ  ಹೆಚ್ಚಿನ ಜನ ಸೇರುವ ಮನೋರಂಜನಾ ಚಟುವಟಿಕೆಗಳಿಗೆ ಅವಕಾಶ ನಿರಾಕರಿಸಲಾಗಿದೆ. ಹೀಗಾಗಿ ಶೋ ಕೊನೆಗೊಳ್ಳಲಿದೆ ಎಂಬ ಮಾತು ಕೇಳಿಬರುತ್ತಿದೆ.

ಈಗಾಗಲೇ ಕಳೆದ ಎರಡು ವಾರದಿಂದ ಅನಾರೋಗ್ಯದ ಕಾರಣಕ್ಕೆ ನಿರೂಪಕ ಸುದೀಪ್ ಶೋದಿಂದ ದೂರ ಉಳಿದಿದ್ದರು. ಇನ್ನು ಮೂರನೇ ವಾರ ಸುದೀಪ್ ಚೇತರಿಸಿಕೊಂಡರು ಕೊವೀಡ್-19 ನಿಯಮಾವಳಿಗಳನ್ನು ಪಾಲಿಸಬೇಕಾಗಿರುವ ಕಾರಣ ವಾಹಿನಿಯೇ ವಾರಾಂತ್ಯದ ಎಪಿಸೋಡ ಶೂಟಿಂಗ್ ಮುಂದೂಡಿತ್ತು.

ಆದರೆ ಪ್ರತಿವಾರವೂ ವಾರಾಂತ್ಯದ ಎಪಿಸೋಡ, ವಾರದ ಕತೆ ಕಿಚ್ಚನ ಜೊತೆ ನಡೆಸದೇ ಶೋ ಮುಂದುವರೆಸಿಕೊಂಡು ಹೋಗುವುದು ಸಾಧ್ಯವಿಲ್ಲ. ಶೂಟಿಂಗ್ ಮಾಡಲು ಕೊರೋನಾ ನಿಯಮಾವಳಿಗಳು ಅಡ್ಡಿಯಾಗುತ್ತವೆ. ಹೀಗಾಗಿ ಸಧ್ಯದಲ್ಲೇ ಕಲರ್ಸ್ ಕನ್ನಡ ವಾಹಿನಿ ಶೋ ಸ್ಥಗಿತಗೊಳಿಸಿ ಸ್ಪರ್ಧಿಗಳನ್ನು ಸುರಕ್ಷಿತವಾಗಿ ಮನೆಗೆ ತಲುಪಿಸುವ ಪ್ರಯತ್ನ ಮಾಡಲಿದೆ ಎನ್ನಲಾಗುತ್ತಿದೆ.

https://kannada.newsnext.live/bangalore-sandalwood-ragini-crematorium-staff-food-supply-helphand/

ಒಟ್ಟಿನಲ್ಲಿ ಈಗಾಗಲೇ ಸುದೀಪ್ ಶೋಗೆ ಬಂದಿಲ್ಲ ಎಂದು ನೊಂದುಕೊಂಡಿದ್ದ ಬಿಗ್ ಬಾಸ್ ಶೋ ಅಭಿಮಾನಿಗಳಿಗೆ ಬಿಗ್ ಶಾಕ್ ಎದುರಾಗಲಿದ್ದು, ಕಾರ್ಯಕ್ರಮವನ್ನೇ ಅರ್ಧದಲ್ಲೇ ಸ್ಥಗಿತಗೊಳಿಸಿದರೂ ಅಚ್ಚರಿಯೇನಿಲ್ಲ ಎನ್ನಲಾಗುತ್ತಿದೆ.

 

Comments are closed.