ರಾಯಪುರ್: ಕೊರೋನಾ ಎರಡನೇ ಅಲೆಗೆ ಕಂಗಾಲಾಗಿರುವ ಜನತೆಗೆ ಹೋಮಿಯೋಪತಿ ಔಷಧಿ ಹೆಸರಿನಲ್ಲಿ ವೈದ್ಯನೊಬ್ಬ ಕಳ್ಳಭಟ್ಟಿ ಮಿಶ್ರಿತ ಔಷಧಿ ನೀಡಿ 8 ಜನರನ್ನು ಬಲಿಪಡೆದ ಘಟನೆ ನಡೆದಿದೆ. ಛತ್ತಿಸಗಡದ ಬಿಲಾಸ್ ಪುರದಲ್ಲಿ ಘಟನೆ ನಡೆದಿದ್ದು, ಒಂದೇ ಕುಟುಂಬದ 8 ಜನರು ಸಾವನ್ನಪ್ಪಿದ್ದರೇ, 5 ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬಿಲಾಸ್ ಪುರದ ಹೋಮಿಯೋಪಥಿ ವೈದ್ಯನೊಬ್ಬ ಕೊರೋನಾ ನಿಯಂತ್ರಣಕ್ಕಾಗಿ ಡ್ರೋಸೆರಾ30 ಎಂಬ ಹೋಮಿಯೋಪಥಿ ಔಷಧಿ ನೀಡಿದ್ದ ಎನ್ನಲಾಗಿದೆ. ಆದರೆ ಈ ಔಷಧಿ ಸೇವಿಸುತ್ತಿದ್ದಂತೆ ಒಂದೇ ಕುಟುಂಬದ 8 ಜನರು ಸಾವನ್ನಪ್ಪಿದ್ದಾರೆ. ಅಸ್ವಸ್ಥರಾದ ಐವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ.
ಒಂದೇ ಕುಟುಂಬದ ಐವರು ಸಾವನ್ನಪ್ಪುತ್ತಿದ್ದಂತೆ ಔಷಧಿ ನೀಡಿದ ವೈದ್ಯ ತಲೆಮರೆಸಿಕೊಂಡಿದ್ದು, ಆತ ನೀಡಿದ ಔಷಧಿಯಲ್ಲಿ ಮೇಲ್ನೋಟಕ್ಕೆ ಅಪಾರ ಪ್ರಮಾಣದ ಕಳ್ಳಭಟ್ಟಿ ಮಿಕ್ಸ್ ಆಗಿದೆ ಎಂಬ ಮಾಹಿತಿ ತನಿಖಾಧಿಕಾರಿಗಳಿಗೆ ಲಭ್ಯವಾಗಿದೆ .
ಸ್ಥಳಕ್ಕೆ ಪೊಲೀಸರು ಹಾಗೂ ವೈದ್ಯಾಧಿಕಾರಿಗಳು ಭೇಟಿ ನೀಡಿದ್ದಾರೆ.
Comments are closed.