ಕೊರೊನಾ ಸ್ಕ್ರೀನಿಂಗ್ ವೇಳೆ ವೈದ್ಯರ ಮೇಲೆ ಹಲ್ಲೆ : ತಬ್ಲಿಗ್ ಜಮಾತ್ ಗೆ ತೆರಳಿದ ಗುಂಪಿನಿಂದ ಕೃತ್ಯ

0

ಇಂದೋರ್ : ದೆಹಲಿಯ ನಿಜಾಮುದ್ದೀನ್ ಮಸೀದಿಯಲ್ಲಿ ನಡೆದಿದ್ದ ತಬ್ಲೀಗ್ ಜಮಾತ್ ಗೆ ಮಧ್ಯಪ್ರದೇಶದಿಂದಲೂ ಹಲವು ಮಂದಿ ಪಾಲ್ಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯ ವೈದ್ಯರು ಇಂದೋರ್ ಗೆ ತೆರಳಿ ತಬ್ಲೀಗ್ ಜಮಾತ್ ನಲ್ಲಿ ಪಾಲ್ಗೊಂಡಿದ್ದವರ ಸ್ಕ್ರೀನಿಂಗ್ ನಡೆಸುತ್ತಿದ್ದರು. ಆದ್ರೆ ಈ ವೇಳೆಯಲ್ಲಿ ವೈದ್ಯರ ಮೇಲೆ ಗುಂಪು ಹಲ್ಲೆ ನಡೆಸಿದೆ.

ಯಾವುದೇ ಕಾರಣಕ್ಕೂ ಕೊರೊನಾ ಸ್ಕ್ರೀನಿಂಗ್ ನಡೆಸುವಂತಿಲ್ಲ ಅಂತಾ ತಾಕೀತು ಮಾಡಿದೆ. ಅಲ್ಲದೇ ಗುಂಪು ವೈದ್ಯರ ಮೇಲೆ ಕಲ್ಲು ತೂರಾಟ ನಡೆಸಿ ಮಾರಣಾಂತಿಕ ಹಲ್ಲೆ ನಡೆಸಿದೆ. ಘಟನೆಯಿಂದಾಗಿ ಆರೋಗ್ಯ ಇಲಾಖೆಯ ಸಿಬ್ಬಂಧಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಇಂದೋರ್ ನಲ್ಲಿ ಈಗಾಗಲೇ 75 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ. ಆದ್ರೀಗ ಕೇಂದ್ರ ಸರಕಾರ ತಬ್ಲೀಗ್ ಜಮಾತ್ ನಲ್ಲಿ ಪಾಲ್ಗೊಂಡಿದ್ದವರ ಮಾಹಿತಿಯನ್ನು ಕಲೆ ಹಾಕುತ್ತಿರೋ ವೇಳೆಯಲ್ಲಿಯೇ ಈ ಘಟನೆ ನಡೆದಿರೋದು ಆತಂಕಕ್ಕೆ ಕಾರಣವಾಗಿದೆ.

ಇಂದೋರ್ ನಲ್ಲಿ ವೈದ್ಯರ ಮೇಲೆ ಹಲ್ಲೆಯ ಭೀಕರತೆ ಹೇಗಿದೆ ನೋಡಿ.

Leave A Reply

Your email address will not be published.