Upendra: ರೆಬೆಲ್ ರೂಪದಲ್ಲಿ ಉಪೇಂದ್ರ: ಮಂಜು ಮಾಂಡವ್ಯ ನಿರ್ದೇಶನದಲ್ಲಿ ಉಪ್ಪಿ ನ್ಯೂ ಮೂವಿ

ನಿರ್ದೇಶನದ ಜೊತೆ ಜೊತೆಗೆ ನಟನೆಯಲ್ಲೂ ಬ್ಯುಸಿಯಾಗಿರೋ ನಟ ಉಪೇಂದ್ರ್ ಅವರ ಮತ್ತೊಂದು ಚಿತ್ರ ಸೆಟ್ಟೇರಲು ಸಿದ್ಧವಾಗಿದೆ. ಮಾಸ್ಟರ್ ಪೀಸ್ ಖ್ಯಾತಿಯ ಮಂಜು ಮಾಂಡವ್ಯ ಉಪ್ಪಿಗೆ ಆಕ್ಷ್ಯನ್ ಕಟ್ ಹೇಳಲಿದ್ದಾರೆ.

ಪಿರಿಯಾಡಿಕಲ್ ಸ್ಟೋರಿಯೊಂದನ್ನು ಚಿತ್ರವಾಗಿಸಲು ಮಂಜುಮಾಂಡವ್ಯ ಸಿದ್ಧವಾಗಿದ್ದು, ಉಪ್ಪಿ ಡೇಟ್ಸ್ ಗಾಗಿ ಕಾದಿದ್ದಾರಂತೆ. ಈ ಸಿನಿಮಾದಲ್ಲಿ ಉಪ್ಪಿ ರೆಬೆಲ್ ಪಾತ್ರವೂ ಸೇರಿದಂತೆ ಎರಡು ಶೇಡ್ ಪಾತ್ರದಲ್ಲಿ ನಟಿಸಲಿದ್ದಾರಂತೆ.

ಸಿನಿಮಾದ ಬಗ್ಗೆ ವಿವರಣೆ ನೀಡಿರುವ ನಿರ್ದೇಶಕ ಮಂಜು ಮಾಂಡವ್ಯ,ಇದು ಉಪೇಂದ್ರ ಅವರನ್ನೇ ಮನಸ್ಸಿನಲ್ಲಿಟ್ಟುಕೊಂಡು ನಾನು ಬರೆದ ಕತೆ. ಹೀಗಾಗಿ ಉಪೇಂದ್ರ ಎಂದೊಡನೆ ಜನರ ಮನಸ್ಸಿಗೆ ಬರುವ ವಿಭಿನ್ನ ಕಲ್ಪನೆಯಂತೆ ನನ್ನ ಸಿನಿಮಾವೂ ವಿಭಿನ್ನವಾಗಿದೆ ಎಂದಿದ್ದಾರೆ.

ಸ್ವಾತಂತ್ರ್ಯಪೂರ್ವ 1920 ರ ದಶಕದಲ್ಲಿ ನಡೆದ ಕತೆಯನ್ನು ಆಧರಿಸಿ ಚಿತ್ರಕತೆ ಸಿದ್ಧವಾಗಿದೆ. ಆದರೆ ಇದು ಇತಿಹಾಸಕ್ಕೆ ಸಂಬಂಧಿಸಿದ್ದಲ್ಲ. ನನ್ನ ಕಾಲ್ಪನಿಕ ಕತೆ. ಚಿತ್ರವನ್ನು ನಿರ್ಮಿಸಲು ಅದೇ ರೀತಿಯ ಸೂಕ್ತ ಸ್ಥಳಕ್ಕಾಗಿ ಹುಡುಕಾಟ ನಡೆಸಿದ್ದೇವೆ. ಸಿನಿಮಾದಲ್ಲಿ ಮನೆ ಕಟ್ಟಡ ಜನಜೀವನ ಎಲ್ಲವನ್ನು ಅಂದಿನಂತೆ ಕಟ್ಟಿಕೊಡುವ ಚಿಂತನೆ ಇದೆ ಎಂದಿದ್ದಾರೆ.

80 ದಿನಗಳ ಶೂಟಿಂಗ್ ಪ್ಲ್ಯಾನ್ ಇದ್ದು, ಲಂಡನ್ ನಲ್ಲೂ ಶೂಟಿಂಗ್ ನಡೆಯಲಿದೆಯಂತೆ. ಜೇಮ್ಸ್ ಚಿತ್ರದ ನಿರ್ಮಾಪಕರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಒಟ್ಟಿನಲ್ಲಿ ಉಪೇಂದ್ರ್ ಅವರನ್ನು ರೆಬೆಲ್ ಕ್ಯಾರೆಕ್ಟರ್ ನೋಡಲು ಅಭಿಮಾನಿಗಳು ಒಂದಷ್ಟು ತಿಂಗಳು ಕಾಯಲೇ ಬೇಕು.

(Manju mandvya working with upendra for his next movie)

Comments are closed.