ಬೆಂಗಳೂರು : ಮಾಜಿ ಸಚಿವ, ಕರಾವಳಿ ಭಾಗದ ಪ್ರಭಾವಿ ಕಾಂಗ್ರೆಸ್ ಮುಖಂಡ ಉಳ್ಳಾಲ ಶಾಸಕ ಯು.ಟಿ.ಖಾದರ್ ಹತ್ಯೆಗೆ ಮೂಲಭೂತವಾಗಿ ಸಂಘಟನೆ ಸ್ಕೆಚ್ ರೂಪಿಸಿರೋ ಸ್ಪೋಟಕ ಮಾಹಿತಿ ಹೊರಬಿದ್ದಿದೆ.
ಈ ಹಿಂದೆ ಮಾಜಿ ಶಾಸಕ ತನ್ವೀರ್ ಸೇಠ್ ಅವರನ್ನು ಮೈಸೂರಿನಲ್ಲಿ ಹತ್ಯೆಗೆ ಸಂಚು ರೂಪಿಸಿದಂತೆಯೇ ಸಂಘಟನೆಯೊಂದು ಯು.ಟಿ.ಖಾದರ್ ಹತ್ಯೆಗೂ ಸ್ಕೆಚ್ ಹಾಕಿರೋದಾಗಿ ಗುಪ್ತಚರ ಇಲಾಖೆ ಗೃಹ ಇಲಾಖೆಗೆ ಮಾಹಿತಿ ನೀಡಿದೆ. ಗುಪ್ತಚರ ಇಲಾಖೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಯು.ಟಿ.ಖಾದರ್ ಅವರಿಗೆ ಭದ್ರತೆ ನೀಡಲು ಮುಂದಾಗಿದೆ. ಆದರೆ ಯು.ಟಿ.ಖಾದರ್ ತನಗೆ ಯಾವುದೇ ಭಯವಿಲ್ಲ, ಹೀಗಾಗಿ ಭದ್ರತೆ ಬೇಡಾ ಅಂದಿದ್ದಾರೆ. ತಾನು ಶಾಸಕನಾಗಿ ಯಾವತ್ತೂ ಗನ್ ಮ್ಯಾನ್ ಇಟ್ಟುಕೊಂಡಿಲ್ಲ, ಸರಕಾರ ನೀಡುವ ಕಟಾಚಾರದ ಭದ್ರತೆ ತನಗೆ ಬೇಡ. ಭದ್ರತೆ ಕಲ್ಪಿಸೋದಾದ್ರೆ ಸರಿಯಾದ ಭದ್ರತೆಯನ್ನೇ ನೀಡಿ ಎಂದಿದ್ದಾರೆ.