Bumper offer from govt: ನೀವು ಬಿಪಿಎಲ್‌ ಕಾರ್ಡುದಾರರೇ? : ಹಾಗಿದ್ದರೆ ಸಂಕ್ರಾಂತಿಯಂದು ಸರಕಾರದಿಂದ ಸಿಗಲಿದೆ ಬಂಪರ್‌ ಆಫರ್‌

(Bumper offer from govt) ಈಗಾಗಲೇ ಪಡಿತರದಾರರಿಗೆ ಕೇಂದ್ರ ಸರಕಾರದಿಂದ ಹಲವು ಸೌಲಭ್ಯಗಳು ದೊರೆತಿವೆ. ಕಾಲಕಾಲಕ್ಕೆ ಸರಕಾರ ಪಡಿತರ ಚೀಟಿದಾರರಿಗೆ ಹೊಸ ಹೊಸ ಯೋಜನೆಗಳನ್ನು ಪರಿಚಯಿಸುತ್ತಿದೆ. ಇದೀಗ ಸಂಕ್ರಾಂತಿ ಹಬ್ಬ ಕೂಡ ಸಮೀಪಿಸುತ್ತಿದೆ. ಈ ಹಿನ್ನಲೆಯಲ್ಲಿ ತಮಿಳುನಾಡು ಸರಕಾರ ಪಡಿತರ ಕಾರ್ಡುದಾರರಿಗೆ ಉಡುಗೊರೆ ನೀಡುವುದಾಗಿ ಘೋಷಿಸಿದ್ದು, ಅದರಂತೆಯೇ ನಡೆದುಕೊಳ್ಳುತ್ತಿದೆ.

ರಾಜ್ಯ ಸರಕಾರ ಈ ಯೋಜನೆಯನ್ನು ಜನವರಿ ೯ ರಂದು ಪ್ರಾರಂಭಿಸಿದ್ದು, ಬಿಪಿಎಲ್‌ ಕಾರ್ಡ್‌ ಹೊಂದಿರುವ ಅರ್ಹ ಕುಟುಂಬಗಳಿಗೆ 1107 ರೂ.ಗಳ “ಪೊಂಗಲ್‌ ಗಿಫ್ಟ್‌ ಹ್ಯಾಂಪರ್ಸ್”‌ (Bumper offer from govt) ವಿತರಣೆಗೆ ಚಾಲನೇ ನೀಡಲಾಗಿದೆ. ಮಾಹಿತಿಗಳ ಪ್ರಕಾರ, ಪಡಿತರ ಚೀಟಿದಾರರಿಗೆ 1000 ರೂ. ನಗದು ಜೊತೆಗೆ ಗಿಫ್ಟ್‌ ಹ್ಯಾಂಪರ್‌ ನಲ್ಲಿ ಒಂದು ಕೆಜಿ ಸಕ್ಕರೆ, ಒಂದು ಕೆಜಿ ಅಕ್ಕಿ ಹಾಗೂ ಕಬ್ಬು ನೀಡಲಾಗುತ್ತದೆ.

ಸರಕಾರದ ಈ ಯೋಜನೆಯಡಿಯಲ್ಲಿ ರಾಜ್ಯದ ಎರಡು ಕೋಟಿ ಪಡಿತರ ಚೀಟಿದಾರರಿಗೆ ಪೊಂಗಲ್‌ ಗಿಫ್ಟ್‌ ಹ್ಯಾಂಪರ್‌ ನೀಡಲಾಗುತ್ತಿದ್ದು, ವಾರದ ಹಿಂದೆಯೇ ಈ ಯೋಜನೆಗೆ ತಮಿಳುನಾಡಿನ ಮುಖ್ಯಮಂತ್ರಿ ಸ್ಟಾಲೀನ್‌ ಚಾಲನೆ ನೀಡಿದ್ದಾರೆ.

ಇದನ್ನೂ ಓದಿ : Arecanut state market price: ಅಡಿಕೆ ಧಾರಣೆಯಲ್ಲಿ ಏರಿಳಿತ: ಮಂಗಳೂರಿನಲ್ಲಿ ಇಂದಿನ ಅಡಿಕೆ ಬೆಲೆ ಎಷ್ಟು?

ಇದನ್ನೂ ಓದಿ : Vikas Purohit : “ಮೆಟಾ ಗ್ಲೋಬಲ್ ಬ್ಯುಸಿನೆಸ್” ಭಾರತದ ಮುಖ್ಯಸ್ಥರನ್ನಾಗಿ ಟಾಟಾ ಗ್ರೂಪ್ಸ್‌ನ ಮಾಜಿ ಸಿಇಒ ಆಯ್ಕೆ

ಇದನ್ನೂ ಓದಿ : ಸಾಲ ವಂಚನೆ ಪ್ರಕರಣ : ಐಸಿಐಸಿಐ ಬ್ಯಾಂಕ್ ಎಂಡಿ ಚಂದಾ ದೀಪಕ್ ಕೊಚ್ಚರ್ ದಂಪತಿಗೆ ಜಾಮೀನು

ಇದಕ್ಕೂ ಮೊದಲು ತಮಿಳು ನಾಡು ಸರಕಾರ ಗಿಫ್ಟ್‌ ಹ್ಯಾಂಪರ್‌ ನೀಡಿತ್ತು. 2019 ರಲ್ಲಿ ನಿರ್ಗತಿಕ ಕುಟುಂಬಗಳಿಗೆ 1000 ರೂ, 2020 ರಲ್ಲಿ 2500 ರೂ, ಮತ್ತು 2021 ರಲ್ಲಿ 2500 ರೂ. ಅನ್ನು ವರ್ಗಾವಣೆ ಮಾಡಲಾಗಿತ್ತು. ರಾಜ್ಯದ ಎಲ್ಲಾ ಜನರು ಈ ಸಂಕ್ರಾಂತಿ ಹಬ್ಬವನ್ನು ಸಂತೋಷದಿಂದ ಆಚರಿಸಲಿ ಎನ್ನುವ ಉದ್ದೇಶದಿಂದ ಸರಕಾರ ಈ ಸೌಲಭ್ಯವನ್ನು ನೀಡುತ್ತಿದೆ.

Bumper offer from govt: Are you a BPL cardholder? : If so, you will get a bumper offer from the government on Sankranti

Comments are closed.