Kantara 2 Movie : “ಕಾಂತಾರ 2” ಸಿನಿಮಾಕ್ಕೆ ಅಣ್ಣಪ್ಪ ಪಂಜುರ್ಲಿ ಒಪ್ಪಿಗೆ : ರಿಷಬ್ ಶೆಟ್ಟಿಗೆ ದೈವ ವಿಧಿಸಿದ ಷರತ್ತುಗಳೇನು ಗೊತ್ತಾ ?


ಡಿವೈನ್‌ ಸ್ಟಾರ್‌ ರಿಷಬ್‌ ಶೆಟ್ಟಿ ಹಾಗೂ ಹೊಂಬಾಳೆ ಫಿಲ್ಮ್ಸ್‌ ಕಾಂಬಿನೇಶನ್‌ನಲ್ಲಿ ಮೂಡಿ ಬಂದ “ಕಾಂತಾರ” ಸಿನಿಮಾ ಯಶಸ್ಸಿನಿಂದ ಸಿನಿತಂಡ ಸಖತ್‌ ಥ್ರಿಲ್‌ ಆಗಿದ್ದಾರೆ. (Kantara 2 Movie) ಕೇವಲ ಹದಿನೈದು ಕೋಟಿಯಲ್ಲಿ ನಿರ್ಮಾಣಗೊಂಡ ಸಿನಿಮಾ ವಿಶ್ವದಾದ್ಯಂತ 400 ಕೋಟಿಕ್ಕೂ ಅಧಿಕ ಹಣವನ್ನು ಸಿನಿಮಂದಿರಗಳಿಂದಲೇ ಗಳಿಸಿಕೊಂಡಿದೆ. ಇದೀಗ ಸಿನಿತಂಡ “ಕಾಂತಾರ 2” ಸಿನಿಮಾ ಚಿತ್ರೀಕರಣಕ್ಕಾಗಿ ಪಂರ್ಜುಲಿ ದೈವದ ಬಳಿ ಅನುಮತಿ ಕೇಳಿದೆ.

“ಕಾಂತಾರ” ಸಿನಿಮಾ ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲದೇ ಹೊರ ರಾಜ್ಯ ಹಾಗೂ ವಿದೇಶಗಳಲ್ಲಿಯೂ ಸೂಪರ್‌ ಡೂಪರ್‌ ಹಿಟ್‌ ಆಗಿದೆ. ಸಿನಿತಂಡ ತಮ್ಮ ನಿರೀಕ್ಷೆಗಿಂತಲೂ ಬಹುದೊಡ್ಡ ಮಟ್ಟದ ಗೆಲುವನ್ನು ಸಿನಿಮಾ ಕಂಡಿದೆ. ಇದ್ದಕ್ಕೆ ಕಾರಣ ಸಿನಿತಂಡದ ಶ್ರಮದ ಜೊತೆಗೆ ದೈವದ ಆಶೀರ್ವಾದ ಎನ್ನಲಾಗಿದೆ. ಕರಾವಳಿ ಪ್ರದೇಶದವರಾದ ನಟ ರಿಷಬ್‌ ಶೆಟ್ಟಿ ದೈವವನ್ನು ನಂಬುತ್ತಾರೆ. ದೈವದ ಬಗ್ಗೆ ಸಿನಿಮಾ ಮಾಡುವಾಗ ಅದರ ನೇಮ, ನಿಷ್ಠೆಗಳಿಂ ಮಾಡಿದ್ದು, ಅಪಚಾರವಾಗದಂತೆ ನಡೆದುಕೊಂಡಿದ್ದರಿಂದಲೇ ದೈವದ ಆಶೀರ್ವಾದ ಸಿನಿಮಾಕ್ಕೆ ಸಿಕ್ಕಿ, ದೊಡ್ಡ ಮಟ್ಟದಲ್ಲಿ ಹಿಟ್‌ ಆಗಿದೆ ಎನ್ನುವ ಮಾತುಗಳು ಕೇಳಿ ಬಂದಿದೆ.

ಇದೀಗ “ಕಾಂತಾರ 2” ಸಿನಿಮಾದ ಮಾತುಕತೆ ಶುರುವಾಗಿದ್ದು, ಈ ಸಿನಿಮಾ ಮಾಡಬಹುದೇ ಎಂದು ಸತಃ ರಿಷಬ್‌ ಶೆಟ್ಟಿ ಹಾಗೂ ನಿರ್ಮಾಪಕ ವಿಜಯ ಕಿರಗಂದೂರು ಮತ್ತು ಸಿನಿತಂಡ ದೈವದ ಅನುಮತಿಯನ್ನು ಕೇಳಿದ್ದು, ದೈವವು ಒಂದಷ್ಟು ಎಚ್ಚರಿಕೆಗಳನ್ನು ಸಿನಿತಂಡಕ್ಕೆ ನೀಡಿದೆ. ಮಂಗಳೂರು ನಗರ ಹೊರವಲಯದ ಬಂದಲೆಯ ಮನೆಯಲ್ಲಿ ನಡೆದ ಪಂಜುರ್ಲಿ ಕೋಲದಲ್ಲಿ ಕಾಂತಾ ಸಿನಿತಂಡ ಪಾಲ್ಗೊಂಡಿದೆ. ಕದ್ರಿ ಮಂಜುನಾಥೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಕೃಷ್ಣ ಅಡಿಗ ಅವರ ಸಮ್ಮುಖದಲ್ಲಿ ನಡೆದ ಅಣ್ಣಪ್ಪ ಪಂಜುರ್ಲಿ ಕೋಲದಲ್ಲಿ ದೈವದ ಬಳಿ ರಿಷಬ್‌ ಶೆಟ್ಟಿ ಕಾಂತಾರ ಸಿನಿಮಾದ ಭಾಗ ಎರಡು ನಿರ್ಮಾಣಕ್ಕೆ ಅನುಮತಿ ಕೇಳಿದೆ.

ಈ ಸಂದರ್ಭದಲ್ಲಿ “ಕಾಂತಾರ” ಭಾಗ ಎರಡು ಸಿನಿಮಾ ಮಾಡಲು ದೈವವು ಅನುಮತಿಯನ್ನು ನೀಡಿದೆ. ಆದರೆ ದೈವವು ಸಿನಿತಂಡಕ್ಕೆ ಕೆಲವು ಷರತ್ತು ಹಾಗೂ ಎಚ್ಚರಿಕೆಯನ್ನು ನೀಡಿದೆ. ಈ ಸಿನಿತಂಡಕ್ಕೆ ಅಭಯ ನೀಡಿರುವ ಅಣ್ಣಪ್ಪ ಪಂಜುರ್ಲಿ ಮೊದಲು ಸಿನಿಮಾ ಮಾಡುವಾಗ ಹತ್ತು ಬಾರಿ ಯೋಚನೆ ಮಾಡಿದ್ದೀರಿ, ಈ ಬಾರಿ ಮಾತ್ರ ನೂರು ಬಾರಿ ಯೋಚನೆ ಮಾಡಿ. ಮಾಡಿದ ಪ್ರಯತ್ನಕ್ಕೆ ಯಾವತ್ತೂ ಜಯ ಸಿಗುವ ರೀತಿ ಮಾಡುತ್ತೇನೆ. ಈ ಹಿಂದೆ ಇದ್ದ ತಂಡದ ಜೊತೆಗೆ, ಅಷ್ಟೇ ಶುದ್ಧಾಚಾರದಲ್ಲಿ ಮುಂದುವರಿಯಿರಿ ಎಂದು ದೈವ ಅಣ್ಣಪ್ಪ ಪಂಜುರ್ಲಿ ಕಾಂತಾರ ಸಿನಿಮಾ ತಂಡಕ್ಕೆ ಅಭಯ ನೀಡಿದೆ.

ಇದನ್ನೂ ಓದಿ : Senior actor Doddanna | “ಬಹುರೂಪಿ” ಚಲನಚಿತ್ರೋತ್ಸವಕ್ಕೆ ಚಾಲನೆ ನೀಡಿದ ಹಿರಿಯ ನಟ ದೊಡ್ಡಣ್ಣ

ಇದನ್ನೂ ಓದಿ : Gowri Movie : ರವಿಚಂದ್ರನ್ ಗೌರಿ ಸಿನಿಮಾದಲ್ಲಿ ಮೂರೇ ಮೂರು ಪಾತ್ರ !

ಇದನ್ನೂ ಓದಿ : Film Chamber Meeting | ಫಿಲ್ಮ್‌ ಚೇಂಬರ್‌ ಕೈಯಲ್ಲಿ ಅನಿರುದ್ಧ ಕಿರುತೆರೆ ಭವಿಷ್ಯ : ಸಭೆಯಲ್ಲಿ “ಬ್ಯಾನ್”‌ ವಿಚಾರ ಏನಾಯ್ತು

ದೈವದ ಅನುಮತಿ ಪಡೆದ ಬೆನ್ನಲ್ಲೇ ರಿಷಬ್‌ ಶೆಟ್ಟಿ ಸಿನಿಮಾ ನಿರ್ಮಾಣಕ್ಕೆ ಈಗಾಗಲೇ ಮಾಡಿಕೊಂಡಿದ್ದ ಯೋಜನೆಯನ್ನು ಜಾರಿಗೊಳಿಸಿದ್ದಾರೆ. ಸಿನಿಮಾದಲ್ಲಿ ನಟಿಸುವ ಕೆಲವು ಕಲಾವಿದರಿಗೆ ಉದ್ದ ಕೂದಲು ಬಿಡಲು ತಿಳಿಸಿದ್ದಾರೆ. ಮುಂದಿನ ಮಳೆಗಾಲದ ಅವಧಿಯಲ್ಲಿ “ಕಾಂತಾರ 2” ಸಿನಿಮಾದ ಚಿತ್ರೀಕರಣ ಮುಗಿಸುವ ಸಾಧ್ಯತೆಗಳಿವೆ. ಇನ್ನೂ ಕಾಂತಾರ ಸಿನಿಮಾದ ಮೊದಲ ಭಾಗದಲ್ಲಿ ಕಾಣಿಸಿಕೊಂಡ ಹೆಚ್ಚಿನ ಕಲಾವಿದರು ಎರಡನೇ ಭಾಗದಲ್ಲಿ ನಟಿಸುವ ಸಾಧ್ಯತೆ ದಟ್ಟವಾಗಿದೆ. ಇದರಲ್ಲಿ ಕಾಂತಾರದ ಮೊದಲ ಭಾಗ ನಡೆದ ಕತೆಗಿಂತಲೂ ಹಿಂದಿನ ಸಮಯದ ಕತೆ ಹೊಂದಿರಲಿದೆ ಎನ್ನಲಾಗುತ್ತಿದೆ.

Annappa Panjurli agrees for “Kantara 2” movie: Do you know the conditions imposed by God for Rishabh Shetty?

Comments are closed.