ಕನ್ನಡ ಕಿರುತೆರೆಯಲ್ಲಿ ಭಾರಿ ಸದ್ದು ಮಾಡುತ್ತಿದ್ದ ಧಾರವಾಹಿ ‘ಅಶ್ವಿನಿ ನಕ್ಷತ್ರ’. ಈ ಧಾರವಾಹಿಯ ನಾಯಕ ಹಾಗೂ ನಾಯಕಿ ಬಹು ಬೇಗನೆ ಜನಮನ್ನಣೆ ಗಳಿಸಿದರು ಕೂಡ. ಹೌದು.’ಅಶ್ವಿನಿ ನಕ್ಷತ್ರ’ದ ಬೆಡಗಿ ಮಯೂರಿ ಈ ಧಾರವಾಹಿಯ ಅಭಿನಯದ ನಂತರ ನೇರವಾಗಿ ಬೆಳ್ಳಿತೆರೆಗೆ ಕಾಲಿಟ್ಟಿದ್ದು,’ಕೃಷ್ಣಲೀಲಾ’ ಚಿತ್ರದ ಮೂಲಕ ಕನ್ನಡಿಗರ ಮನ ಗೆದ್ದರು.
ಹುಬ್ಬಳ್ಳಿ ಮೂಲದ ನಟಿ ಮಯೂರಿ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಸೇಂಟ್ ಮಿಚಲ್ಸ್ ಶಾಲೆಯಲ್ಲಿ ಮುಗಿಸಿದ್ದಾರೆ. ನಂತರ ಇವರು ಹುಬ್ಬಳ್ಳಿಯ ಫಾತೀಮಾ ಕಾಲೇಜ್ ನಲ್ಲಿ ಪಿಯುಸಿಯನ್ನು ಪೂರ್ಣಗೊಳಿಸಿ ಅದೇ ಹುಬ್ಬಳ್ಳಿಯಲ್ಲಿರುವ ಆಕ್ಸ್ಪರ್ಡ್ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಲ್ಲಿ ಪದವಿಯನ್ನು ಪಡೆದುಕೊಂಡಿದ್ದಾರೆ.
ಕನ್ನಡ ಧಾರಾವಾಹಿಗಳಲ್ಲಿ ಹೆಚ್ಚು ಜನಮನ್ನಣೆ ಗಳಿಸಿರುವ “ಅಶ್ವಿನಿ ನಕ್ಷತ್ರ” ಧಾರವಾಹಿಯಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡ ಇವರು ಅದ್ಭುತವಾಗಿ ನಟಿಸಿದ್ದರು. ಈ ಧಾರಾವಾಹಿ ಅಭೂತ ಪೂರ್ವ ಯಶಸ್ಸನ್ನು ಗಳಿಸಿ ಜನರ ಮನಗೆದ್ದಿತು. ಹೀಗೆ ಜನರಿಗೆ ಪ್ರೀತಿ ಪಾತ್ರರಾಗಿದ್ದ ಇವರಿಗೆ ಕನ್ನಡ ಸಿನಿಮಾಗಳಲ್ಲಿ ನಟಿಸಲು ಆಹ್ವಾನಗಳು ಬಂದವು.
ಕನ್ನಡದ “ಕೃಷ್ಣಲೀಲಾ” ಚಿತ್ರದಲ್ಲಿ ನಟಿಸಿ ಯಶಸ್ಸು ಕಂಡ ನಂತರ ಕನ್ನಡ ಚಿತ್ರರಂಗದಲ್ಲಿ ಇವರು ನಟಿಯಾಗಿ ಗುರುತಿಸಿಕೊಂಡರು. ಕೃಷ್ಣಲೀಲಾ ಯಶಸ್ವಿ ನಂತರ ಇವರಿಗೆ ನಾಗತಿಹಳ್ಳಿ ಚಂದ್ರಶೇಖರ್ ಅವರ ನಿರ್ದೇಶನದಲ್ಲಿ ಮೂಡಿಬಂದ “ಇಷ್ಟಕಾಮ್ಯ” ಚಿತ್ರದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.
ಹೀಗೆ ಸಿನಿ ರಂಗದಲ್ಲಿ ಹೆಸರು ಮಾಡುತ್ತಿರುವ ವೇಳೆಯಲ್ಲೇ ತಮ್ಮ ಬಹುಕಾಲದ ಗೆಳೆಯ ಅರುಣ್ ಜೊತೆ ಮಯೂರಿಯವರು ಬೆಂಗಳೂರಿನ ಜೆಪಿ ನಗರದ ಶ್ರೀ ತಿರುಮಲಗಿರಿ ಲಕ್ಷ್ಮೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಸರಳ ವಿವಾಹ ಮಾಡಿಕೊಂಡಿದ್ದರು.
ವಿವಾಹವಾಗಿ ವರ್ಷ ತುಂಬವ ಮುನ್ನವೇ ಸದ್ಯ ದೀಪಗಳ ಹಬ್ಬ, ದೀಪಾವಳಿಯ ಸಂಭ್ರಮದಲ್ಲಿರುವ ಮಯೂರಿ ಹಾಗೂ ಅರುಣ್ ಜೋಡಿ ಅಭಿಮಾನಿಗಳೊಂದಿಗೆ ಸಿಹಿ ಸುದ್ದಿಯನ್ನೂ ಹಂಚಿಕೊಂಡಿದ್ದಾರೆ.
ಹೌದು, ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಸಿಹಿಸುದ್ದಿ ನೀಡಿರುವ ಮಯೂರಿಯವರು ತಾವು ಗರ್ಭಿಣಿ ಆಗಿರುವ ವಿಷಯ ಹೇಳಿ ಸಂಭ್ರಮಿಸಿದ್ದಾರೆ. ಅಲ್ಲದೆ ಫೋಟೋಶೂಟ್ ಕೂಡ ಮಾಡಿಸಿಕೊಂಡಿದ್ದಾರೆ. ಈ ದಂಪತಿಗೆ ಚಿತ್ರರಂಗದ ಅನೇಕ ಸ್ನೇಹಿತರು ಹಾಗು ಕಲಾವಿದರು ಈ ಜೋಡಿಗೆ ಶುಭಕೋರಿದ್ದಾರೆ.
ಕನ್ನಡಲ್ಲಿ ಅಶ್ವಿನಿ ನಕ್ಷತ್ರದ ಮೂಲಕ ಜರ್ನಿ ಆರಂಭಿಸಿ ಅದ್ಬುತ ಹಿಟ್ ಸಿನಿಮಾಗಳಲ್ಲೂ ಬಣ್ಣ ಹಚ್ಚಿದ್ದ ಈ ನಾಯಕಿಯ ಸಿನಿ ಬದುಕು ಹಾಗು ಮುಂದಿನ ಜೀವನ ಸುಗಮವಾಗಿರಲಿ.
Comments are closed.