ಬದಲಾಗು ನೀನು.. ಬದಲಾಯಿಸು ನೀನು ಎನ್ನುತ್ತಿದ್ದಾರೆ ಕನ್ನಡ ಸ್ಟಾರ್ ನಟ, ನಟಿಯರು

0

ಲಾಕ್ ಡೌನ್ ಸಡಿಲವಾದರೂ ಸೋಂಕು ತಗಲುವುದು ಕಡಿಮೆಯಾಗದೇ ವ್ಯಾಪಕವಾಗಿ ಹರಡುತ್ತಿದೆ. ನಮ್ ಜನ ಇಷ್ಟಾದರೂ ಇನ್ನೂ ಮಾತು ಕೇಳದೇ, ಸೋಷಿಯಲ್ ಡಿಸ್ಟೆನ್ಸ್ ಕಾಪಾಡದೇ ಮನೆಯಿಂದ ಹೊರಗೇನೆ ಸುತ್ತಾಡ್ತಿರೋದು ವಿಷಾದಕರ ಸಂಗತಿ. ಇದರ ಮಧ್ಯೆ ಎಲ್ಲಾ ಮಾಧ್ಯಮಗಳು, ಸೆಲೆಬ್ರೆಟಿಗಳು, ರೇಡಿಯೋಗಳು ಪತ್ರಿಕೆಗಳು, ಸೋಷಿಯಲ್ ಮೀಡಿಯಾ ಹೀಗೆ ಎಲ್ಲಾ ಕಡೆಯಿಂದನೂ ಅರಿವು ಮೂಡಿಸುವ ಕಾರ್ಯ ನಡೆಯುತ್ತಿದೆ. ಇದರ ನಡುವಲ್ಲೇ ನಿರ್ದೇಶಕ ಪವನ್ ಒಡೆಯರ್ ನಿರ್ದೇಶನದಲ್ಲಿ ರಾಜ್ಯ ಸರ್ಕಾರದ ಸಂದೇಶ ಸಾರುವ ನಿಟ್ಟಿನಲ್ಲಿ ಒಂದು ಹಾಡು ತಯಾರಾಗುತ್ತಿದ್ದು, ಕನ್ನಡ ಟಾಪ್ ಸೆಲೆಬ್ರೆಟಿಗಳು ನಟಿಸಿದ್ದಾರೆ.

ಕ್ರೇಜಿ ಸ್ಟಾರ್ ವಿ ರವಿಚಂದ್ರನ್, ಕರುನಾಡ ಚಕ್ರವರ್ತಿ ಶಿವಣ್ಣ, ಚಾಲೆಂಜಿಂಗ್ ಸ್ಟಾರ್ ದರ್ಶನ್ , ಗೋಲ್ಡನ್ ಸ್ಟಾರ್ ಗಣೇಶ್ , ರಿಯಲ್ ಸ್ಟಾರ್ ಉಪೇಂದ್ರ, ರಮೇಶ್ ಅರವಿಂದ್, ರಕ್ಷಿತ್ ಶೆಟ್ಟಿ, ಅಭಿಶೇಕ್ ಅಂಬರೀಶ್ ,ಇಶಾನ್, ರವಿಶಂಕರ್, ಕ್ರಿಕೇಟಿಗ ಅನಿಲ್ ಕುಂಬ್ಳೆ, ನಟಿಯರಾದ ಆಶಿಕಾ ರಂಗನಾಥ್ , ಶಾನ್ವಿ ಶ್ರೀವಾತ್ಸವ್, ಹರ್ಷಿಕಾ ಪೂಣಚ್ಚ, ಮಾನ್ವಿತ, ಇವರ ಜೊತೆ ಸಂಸದೆ ಸುಮಲತಾ ಅಂಬರೀಶ್, ಹಾಗೇನೆ ಗಾಯಕ ವಿಜಯ್ ಪ್ರಕಾಶ್, ಬಿಲಿಯರ್ಡ್ಸ್ ಆಟಗಾರ ಪಂಕಜ್ ಅಡ್ವಾಣಿ ಸಹ ಈ ಹಾಡಿನ ವಿಡಿಯೋದಲ್ಲಿ ಅಭಿನಯಿಸಿದ್ದಾರೆ.

ಈ ಹಾಡಿನ ಮತ್ತೊಂದು ವಿಶೇಷ ಅಂದ್ರೆ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಸಹ ಅಭಿನಯಿಸಿದ್ದಾರೆ.

ವೈದ್ಯಕೀಯ ಶಿಕ್ಷಣ ಇಲಾಖೆ ನಿರ್ಮಾಣದ ಈ ಎಂಟು ನಿಮಿಷವಿರೋ ಈ ಹಾಡಿಗೆ ವಿ ಹರಿಕೃಷ್ಣ ಸಂಗೀತವಿದ್ದು, ಇಮ್ರಾನ್ ಸರ್ದಾರಿಯಾ ತಂಡ ಕೊರಿಯೋಗ್ರಾಫಿ ಮಾಡಿದೆ. ಪವನ್ ಒಡೆಯರ್ ಅವರ ಪರಿಕಲ್ಪನೆಯಲ್ಲಿ ಹಾಡು ಮೂಡಿಬಂದಿದ್ದು, ಕೆಲವು ಸೆಲೆಬ್ರೆಟಿಗಳು ಮನೆಯಿಂದಾನೇ ಕಾನ್ಸೆಪ್ಟ್ ಕೇಳ್ಕೊಂಡು ವಿಡಿಯೋ ಮಾಡಿ ಕಳ್ಸಿದ್ದು, ಇನ್ನು ಕೆಲ ಸೆಲೆಬ್ರೆಟಿಗಳತ್ರ ಇಮ್ರಾನ್ ಟೀಮ್ ಅವರ ಮನೆಗಳಿಗೆ ಹೋಗಿ ಚಿತ್ರೀಕರಣ ಮಾಡಿಕೊಂಡು ಬಂದಿದ್ದಾರೆ.

ಕೊರೊನಾದಿಂದ ಹೊರಗುಳಿಯುವ ಮಾರ್ಗ ಮತ್ತು ಅದನ್ನು ಎದುರಿಸುವ ವಿಷಯವನ್ನು ಆಧಾರವಾಗಿಟ್ಟುಕೊಂಡು ಸಿನಿಮೀಯವಾಗಿ ಈ ಹಾಡನ್ನು ಚಿತ್ರೀಕರಿಸಲಾಗಿದೆಯಂತೆ.. ಇದೇ 25ಕ್ಕೆ D-Beatsಆಡಿಯೋ ಲೇಬಲ್ ನಲ್ಲಿ ಈ ಹಾಡು ಬಿಡುಗಡೆಯಾಗಲಿದೆ.

Leave A Reply

Your email address will not be published.