uday surya evicted : ಬಿಗ್​ಬಾಸ್​ ಮನೆಯಿಂದ ಹೊರಬಿದ್ದ ನಟ ಉದಯ್​ ಸೂರ್ಯ

uday surya evicted : ವೂಟ್​ ಸೆಲೆಕ್ಟ್​​ನಲ್ಲಿ ಪ್ರಸಾರವಾಗುತ್ತಿರುವ ಬಿಗ್​ಬಾಸ್​ ಕನ್ನಡ ಒಟಿಟಿ ಸೀಸನ್​ 1 ಕಾರ್ಯಕ್ರಮವು ಮೂರು ವಾರಗಳನ್ನು ಪೂರೈಸಿದೆ. ಮೂರನೇ ವಾರ ಬಿಗ್​ಬಾಸ್​ ಮನೆಯಿಂದ ನಟ ಉದಯ್​ ಸೂರ್ಯ ಎಲಿಮಿನೇಟ್​​ ಆಗಿದ್ದಾರೆ. ಬಿಗ್​ಬಾಸ್​ ಮನೆ ಒಟಿಟಿಗೆ ಎಂಟ್ರಿ ಕೊಡುವ ಸಂದರ್ಭದಲ್ಲಿ ಭಾರೀ ನಿರೀಕ್ಷೆಯನ್ನು ಹುಟ್ಟಿಸಿದ್ದ ಉದಯ್​ ಸೂರ್ಯ ಭಾರೀ ಮುಖಭಂಗವನ್ನು ಅನುಭವಿಸಿಕೊಂಡೇ ದೊಡ್ಮನೆಯಿಂದ ಹೊರ ಬಿದ್ದಿದ್ದಾರೆ.


ಬಿಗ್​ಬಾಸ್​ ಒಟಿಟಿ ಸೀಸನ್​ 1ರಲ್ಲಿ ಮೂರನೇ ವಾರದಲ್ಲಿ ಉದಯ್​ ಸೂರ್ಯ, ರೂಪೇಶ್​ ಶೆಟ್ಟಿ, ಅಕ್ಷತಾ, ಆರ್ಯವರ್ಧನ್​ ಗುರೂಜಿ, ಚೈತ್ರಾ ಹಳ್ಳಿಕೇರಿ, ಜಯಶ್ರೀ ಆರಾಧ್ಯ ಹಾಗೂ ಸೋಮಣ್ಣ ಮಾಚಿಮಾಡ ನಾಮಿನೇಟ್​ ಆಗಿದ್ದರು. ಈ ಏಳು ಜನರಲ್ಲಿ ಕೊನೆಯದಾಗಿ ಜಯಶ್ರೀ ಆರಾಧ್ಯ ಹಾಗೂ ಉದಯ್​ ಸೂರ್ಯ ಉಳಿದುಕೊಂಡಿದ್ದರು. ಆದರೆ ಕೊನೆಯದಾಗಿ ನಟ ಸುದೀಪ್​​ ಜಯಶ್ರೀ ಸೇಫ್​ ಆಗಿದ್ದಾರೆ ಎಂದು ಹೇಳುವ ಮೂಲಕ ಉದಯ್​​ ಸೂರ್ಯರಿಗೆ ಸೂಟ್​ಕೇಸ್​​ ಸಮೇತ ಮನೆಯಿಂದ ಹೊರಬಿದ್ದಿದ್ದಾರೆ.


ಬಿಗ್​​ಬಾಸ್​ ಕನ್ನಡ ಒಟಿಟಿ 1ರ ಕಾರ್ಯಕ್ರಮದಲ್ಲಿ ಮೂರನೇ ವಾರದಲ್ಲಿ ಕೊನೆಯದಾಗಿ ಎಲಿಮಿನೇಟ್​ ಆಗುವ ಮೂಲಕ ದೊಡ್ಮನೆಗೆ ಟಿವಿ ಶೋನಲ್ಲಿ ಕಾಣಿಸಿಕೊಳ್ಳುವ ಅವಕಾಶವನ್ನು ಕಳೆದುಕೊಂಡಿದ್ದಾರೆ.
ಕಳೆದ ವಾರದಲ್ಲಿ ಉದಯ್​ ಸೂರ್ಯ ಸಾನ್ಯ ಅಯ್ಯರ್​ ಬಗ್ಗೆ ಕೆಟ್ಟದಾಗಿ ಕಮೆಂಟ್​ ಮಾಡಿದ್ದರು. ಚೈತ್ರಾ ಹಳ್ಳಿಕೇರಿ ಹಾಗೂ ಜಯಶ್ರೀ ಆರಾಧ್ಯ ಬಗ್ಗೆ ಕೆಟ್ಟದಾಗಿ ಕಮೆಂಟ್​ ಮಾಡಿದ್ದರು. ಇದು ಉದಯ್​ ಸೂರ್ಯರಿಗೆ ಭಾರೀ ದೊಡ್ಡ ಪೆಟ್ಟನ್ನು ನೀಡಿತ್ತು. ಇದಾದ ಬಳಿಕ ನನ್ನ ಉದ್ದೇಶ ಆಗಿರಲಿಲ್ಲ ಎಂದೆಲ್ಲ ಸ್ಪಷ್ಟನೆ ನೀಡಿದ್ದರು. ಆದರೆ ಉದಯ್​ ಸೂರ್ಯರನ್ನು ಚೈತ್ರಾ ಹಳ್ಳಿಕೇರಿ, ಸಾನ್ಯ ಅಯ್ಯರ್, ನಂದಿನಿ, ಜಶ್ವಂತ್ ಬೋಪಣ್ಣ ಹಾಗೂ ರೂಪೇಶ್ ಶೆಟ್ಟಿ ತರಾಟೆಗೆ ತೆಗೆದುಕೊಂಡಿದ್ದರು.


ತಾವು ಮಾಡಿದ ತಪ್ಪಿಗೆ ಕ್ಷಮೆ ಕೇಳಿದ ಉದಯ್​ ಸೂರ್ಯ ನನ್ನ ಉದ್ದೇಶ ಆ ರೀತಿ ಇರಲಿಲ್ಲ. ವೀಕ್ಷಕರು ನನಗೊಂದು ಚಾನ್ಸ್​ ನೀಡಬಹುದು ಎಂದುಕೊಂಡಿದ್ದೆ ಎಂದು ಹೇಳುತ್ತಾ ಮನೆಯಿಂದ ಹೊರ ಬಿದ್ದಾರೆ. ಅಲ್ಲದೇ ಸಾನ್ಯಾ ಅಯ್ಯರ್​ ಹಾಗೂ ಚೈತ್ರಾ ಹಳ್ಳಿಕೇರಿ ಜೊತೆ ಉದಯ್​ ಸೂರ್ಯ ಕ್ಷಮೆಯಾಚಿಸಿದ್ದಾರೆ.

ಇದನ್ನು ಓದಿ : Arkavathi trouble : ಮಾಜಿ ಸಿಎಂ ಸಿದ್ದರಾಮಯ್ಯಗೆ ಮತ್ತೆ ಅರ್ಕಾವತಿ ಸಂಕಷ್ಟ: ನ್ಯಾಯಾಲಯದ ಮೊರೆ ಹೋಗಲು ನಿರ್ಧರಿಸಿದ ದೂರುದಾರ

ಇದನ್ನೂ ಓದಿ : KS Eshwarappa : ಮುರುಘಾ ಶರಣರ ವಿರುದ್ಧ ಹರಡಿರುವ ಅನಿಷ್ಟ ಸುದ್ದಿ ಸುಳ್ಳಾಗಲಿ ಎಂದ ಕೆ.ಎಸ್​ ಈಶ್ವರಪ್ಪ

bigg boss kannada ott 1 week 3 elimination uday surya evicted

Comments are closed.