ಬಿಗ್ ಬಾಸ್ ಈ ವಾರದ ಕತೆ ಹೇಳಕೂ ಬರಲ್ಲ ಕಿಚ್ಚ…! ಇಷ್ಟಕ್ಕೂ ಸುದೀಪ್ ಗೆ ಆಗಿರೋದೇನು ಗೊತ್ತಾ…?!

ಕನ್ನಡ ಕಿರುತೆರೆ ಲೋಕದ ಅತಿದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳಿಗಿಂತ ದೊಡ್ಡ ಆಕರ್ಷಣೆ ಕಿಚ್ಚನ ನಿರೂಪಣೆ. ಆದರೆ ಅನಾರೋಗ್ಯದ ಹಿನ್ನೆಲೆಯಲ್ಲಿ ಹಿಂದಿನ ವಾರದಂತೆ ಈ ವಾರದ ಕತೆ ಹೇಳೋಕು ಕಿಚ್ಚ ಗೈರಾಗಲಿದ್ದಾರೆ.

ಕನ್ನಡ ಕಿರುತೆರೆಯಲ್ಲಿ ಮಿಂಚುತ್ತಿರೋ ಬಿಗ್ ಬಾಸ್ ಮನೆಯಲ್ಲಿ ಕಳೆದ ವಾರ ಕಂಚಿನಕಂಠ, ಖಡಕ್ ನಿರೂಪಣೆ ಕೇಳಿಬರಲಿಲ್ಲ. ಕಾರಣ ಕಿಚ್ಚ ಗೈರಾಗಿದ್ದು. ಅನಾರೋಗ್ಯದ ಹಿನ್ನೆಲೆಯಲ್ಲಿ ಸುದೀಪ್ ನಿರೂಪಣೆಯಿಂದ ಹಿಂದೆ ಸರಿದಿದ್ದರು. ಅನಾರೋಗ್ಯ ಹಾಗೂ ವೈದ್ಯರು ವಿಶ್ರಾಂತಿಗೆ ಸೂಚಿಸಿರೋದರಿಂದ ಆಂಕ್ಯರಿಂಗ್ ಗೆ ಬರ್ತಿಲ್ಲ ಎಂದು ಸುದೀಪ್ ಟ್ವೀಟ್ ಮಾಡಿದ್ದರು. ಈ ಬಗ್ಗೆ ಕಲರ್ಸ್ ಕನ್ನಡ ಬ್ಯುಸಿನೆಸ್ ಹೆಡ್ ಪರಮೇಶ್ವರ್ ಗುಂಡ್ಕಲ್ ಕೂ ಇದುವರೆಗಿನ ಬಿಗ್ ಬಾಸ್ ಆವೃತ್ತಿಯಲ್ಲಿ ಇದೇ ಮೊದಲ‌ ಬಾರಿಗೆ ಸುದೀಪ್ ಶೂಟಿಂಗ್ ಗೆ ಬರುತ್ತಿಲ್ಲ ಎಂದಿದ್ದರು.

ಒಂದು ವಾರದ ವಿಶ್ರಾಂತಿ ಬಳಿಕ ಸುದೀಪ್ ಈ ವಾರಾಂತ್ಯದ ಕತೆ ಹೇಳೋಕೆ ಬಿಗ್ ಬಾಸ್ ಮನೆಗೆ ಬರ್ತಾರೆ ಎಂದುಕೊಳ್ಳಲಾಗಿತ್ತು. ಆದರೆ ವೈದ್ಯರು ಇನ್ನಷ್ಟು ದಿನಗಳ ಕಡ್ಡಾಯ ವಿಶ್ರಾಂತಿ ಸೂಚಿಸಿರೋದರಿಂದ ಕಿಚ್ಚ ಸುದೀಪ್ ವಾರದ ಕತೆ ಕಿಚ್ಚನ ಜೊತೆಗೆ ಬರುತ್ತಿಲ್ಲ.

ಈ ಸಂಗತಿಯನ್ನು ಟ್ವೀಟ್ ನಲ್ಲಿ ಸ್ಪಷ್ಟಪಡಿಸಿರೋ ಸುದೀಪ್ ಕೆಲವು ಗಂಟೆಗಳ ಕಾಲ ಶೂಟಿಂಗ್ ನಲ್ಲಿ ಪಾಲ್ಗೊಂಡು ಸ್ಪರ್ಧಿಗಳ ಮಾತು ಆಲಿಸಬಹುದಿತ್ತು. ಆದರೆ ವೈದ್ಯರು ಇನ್ನಷ್ಟು ವಿಶ್ರಾಂತಿ ಹೇಳಿರೋದರಿಂದ ಶೂಟಿಂಗ್ ಗೆ ಬರುತ್ತಿಲ್ಲ. ವಿಶ್ರಾಂತಿಗೆ ಅವಕಾಶ ಮಾಡಿಕೊಟ್ಟ ವಾಹಿನಿಗೆ ಥ್ಯಾಂಕ್ಸ್ ಎಂದಿದ್ದಾರೆ. ಕಿಚ್ಚ ಸುದೀಪ್ ಅನಾರೋಗ್ಯ ಎನ್ನುತ್ತಿದ್ದಂತೆ ಕೊರೋನಾ ಎಂಬ ಗಾಸಿಪ್ ಕೇಳಿಬಂದಿತ್ತು.

ಆದರೆ ಸುದೀಪ್ ವಿಪರೀತ ಕಾಲು ನೋವಿನಿಂದ ಬಳಲುತ್ತಿದ್ದಾರೆ ಎನ್ನಲಾಗಿದೆ. ವಿಕ್ರಾಂತ್ ರೋಣ ಶೂಟಿಂಗ್, ಸ್ಯಾಂಡಲ್ ವುಡ್ 25 ವರ್ಷಾಚರಣೆಯ ಸಂಭ್ರಮದ ಕಾರ್ಯಕ್ರಮ, ಬಿಗ್ ಬಾಸ್ ಶೋ ಸೇರಿದಂತೆ ಹಲವು ಕಾರಣಕ್ಕೆ ದಿನಕ್ಕೆ 10-12 ತಾಸು ನಿಂತು ಸುದೀಪ್ ಕೆಲಸ ಮಾಡಿದ್ದಾರೆ.

ಹೀಗಾಗಿ ವಿಪರೀತ ಕಾಲು ನೋವಾಗಿದ್ದು ವೈದ್ಯರು ಕಡ್ಡಾಯ ವಿಶ್ರಾಂತಿ ಸೂಚಿಸಿದ್ದಾರೆ. ಹೀಗಾಗಿ ಸುದೀಪ್ ಸಧ್ಯ ಮನೆಯಲ್ಲೇ ರೆಸ್ಟ್ ಪಡೆಯಲಿದ್ದಾರೆ.

Comments are closed.