Challenging Star Darshan : ಚಾಲೆಂಜಿಂಗ್ ಸ್ಟಾರ್ ದರ್ಶನ್ ಮೇಲೆ ಚಪ್ಪಲಿ ಎಸೆತ : “ಕ್ರಾಂತಿ” ಸಿನಿಮಾದ ಎರಡನೇ ಹಾಡು ರಿಲೀಸ್‌ ವೇಳೆ ದುರ್ಘಟನೆ

ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ (Challenging Star Darshan) ಹಾಗೂ ರಚಿತಾ ರಾಮ್‌ ಅಭಿನಯದ ಕ್ರಾಂತಿ ಸಿನಿಮಾದ “ಬೊಂಬೆ ಬೊಂಬೆ” ಹಾಡನ್ನು ಅಪ್ಪು ನೆಚ್ಚಿನ ಊರಾದ ಬಳ್ಳಾರಿಯ ಹೊಸಪೇಟೆ ಪಟ್ಟಣದ ಡ್ಯಾಮ್‌ ರಸ್ತೆಯಲ್ಲಿರುವ ವಾಲ್ಮೀಕಿ ವೃತ್ತದಲ್ಲಿ ಹಾಡು ಬಿಡುಗಡೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮ ಆರಂಭವಾಗುವ ಮೊದಲೇ ಹೊಸಪೇಟೆಯಲ್ಲಿ ಪುನೀತ್‌ ರಾಜ್‌ಕುಮಾರ್‌ ಹಾಗೂ ದರ್ಶನ್‌ ಅಭಿಮಾನಿಗಳ ನಡುವೆ ಘರ್ಷಣೆ ಶುರುವಾಗಿತ್ತು. ಕ್ರಾಂತಿ ಸಿನಿಮಾದ ಹಾಡು ಬಿಡುಗಡೆಗೆ ಜಮಾಯಿಸಿದ್ದ ಪುನೀತ್‌ ಫ್ಯಾನ್ಸ್‌ ಅಪ್ಪು ಕಟ್‌ ಔಟ್‌ ಹಿಡಿದು ಅಪ್ಪುಗೆ ಜೈಕಾರ ಹಾಕಿ ವೇದಿಕೆ ಏರಿದ್ದರು. ಹಾಗಾಗಿ ಪುನೀತ್‌ ರಾಜ್‌ಕುಮಾರ್‌ ಹಾಗೂ ದರ್ಶನ್‌ ಅಭಿಮಾನಿಗಳ ಜಗಳ ಮತ್ತೊಂದು ಹಂತಕ್ಕೆ ಪ್ರವೇಶಿಸಿತು.

ಈ ಅಭಿಮಾನಿಗಳ ವಾರ್‌ ಬೇರೆ ಹಂತಕ್ಕೆ ತಲುಪುವುದು ಬೇಡ ಎಂದು ಹೊಸಪೇಟೆಯಲ್ಲಿರುವ ಅಪ್ಪು ಪುತ್ಥಳಿಗೆ ದರ್ಶನ್‌ ಮಾಲಾರ್ಪಣೆ ಮಾಡಿದರು. ನಂತರ ಅಭಿಮಾನಿಗಳ ವಾರ್‌ ಕಡಿಮೆ ಆಯಿತು ಹಾಗೂ ದರ್ಶನ್‌ ಕ್ರಾಂತಿ ಸಿನಿಮಾದ ಹಾಡು ಬಿಡುಗಡೆ ಮಾಡಲು ಅಭಿಮಾನಿಗಳ ಸಮ್ಮುಖದಲ್ಲಿ ವೇದಿಕೆ ಏರಿದ್ದರು. ವೇದಿಕೆ ಮೇಲೆ ರಚಿತಾ ರಾಮ್‌ ಸಿನಿಮಾ ಹಾಗೂ ಹಾಡಿನ ಬಗ್ಗೆ ಮಾತನಾಡುತ್ತಿರುವಾಗ ಯಾರೋ ಕಿಡಿಗೇಡಿಗಳು ದರ್ಶನ್‌ ಮೇಲೆ ಚಪ್ಪಲಿ ಎಸೆದಿದ್ದಾನೆ.ಈ ದೃಶ್ಯ ಕ್ಯಾಮೆರಾದಲ್ಲಿ ಸೆರೆ ಆಗಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಇದನ್ನೂ ಓದಿ : Nivedita Shivarajkumar : ಶಿವರಾಜ್‌ಕುಮಾರ್‌ ಪುತ್ರಿ ನಿವೇದಿತಾಯಿಂದ 5 ವೆಬ್‌ ಸಿರೀಸ್‌ : ಅಪ್ಪನ ಬರ್ತಡೇಗೆ ಬಿಗ್‌ ಸರ್ಪ್ರೈಸ್

ಇದನ್ನೂ ಓದಿ : Shah Rukh Khan – Yash : ಬಾಲಿವುಡ್‌ ಸ್ಟಾರ್‌ ನಟನಿಂದ ಯಶ್‌ಗೆ ಶಹಬ್ಬಾಸ್‌ಗಿರಿ : ಇದಕ್ಕಿಂತ ಇನ್ನೇನು ಬೇಕು ಎಂದ ಫ್ಯಾನ್ಸ್‌

ಇದನ್ನೂ ಓದಿ : Jodern: ಕೌಟುಂಬಿಕ ಕಥಾಹಂದರವನ್ನು ಒಳಗೊಂಡ “ಜೋಡರ್ನ್‌” ಚಿತ್ರದ ಟ್ರೇಲರ್‌ ಬಿಡುಗಡೆ

ಇದನ್ನೂ ಓದಿ : Malenadu Film Festival: ಮಲೆನಾಡಿನ ಸಿನಿಹಬ್ಬಕ್ಕೆ ಜೊತೆಯಾದ ಸತ್ಯ ಪಿಕ್ಚರ್ಸ್ ಹಾಗೂ ಅನ್ಲಾಕ್ ರಾಘವ ಚಿತ್ರತಂಡ

ಕ್ರಾಂತಿ ಸಿನಿಮಾದ ಹಾಡುಗಳನ್ನು ಬೇರೆ ಬೇರೆ ಸ್ಥಳಗಳಲ್ಲಿ ಹಾಗೂ ಬೇರೆ ಬೇರೆ ಉಡುಗೆಯಲ್ಲಿ ರಿಲೀಸ್‌ ಮಾಡುವುದಾಗಿ ಸಿನಿತಂಡ ಈಗಾಗಲೇ ತಿಳಿಸಿದೆ. ಅದರಂತೆ ಕ್ರಾಂತಿ ಸಿನಿಮಾದ ಮೊದಲ ಹಾಡು “ಧರಣಿ”ಯನ್ನು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಬಿಡುಗಡೆ ಮಾಡಲಾಯಿತು. ಹಾಗೇ ದರ್ಶನ್‌ ಈಗಾಗಲೇ ತಿಳಿಸಿದಂತೆ ಈ ಸಿನಿಮಾದ ಎರಡನೇ ಹಾಡು “ಬೊಂಬೆ ಬೊಂಬೆ” ಯನ್ನು ಅಪ್ಪು ಮೆಚ್ಚಿನ ಊರಾದ ಬಳ್ಳಾರಿಯ ಹೊಸಪೇಟೆಯಲ್ಲಿ ಬಿಡುಗಡೆ ಮಾಡಲಾಯಿತು. ಆದರೆ ಆ ಸಂದರ್ಭದಲ್ಲಿ ಯಾರೋ ಕಿಡಿಗೇಡಿಗಳು ದರ್ಶನ್‌ ಮೇಲೆ ಚಪ್ಪಲಿ ಎಸೆದಿದ್ದು ಅವರ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಘಟನೆಯ ಕುರಿತು ಎಲ್ಲೆಡೆಯಿಂದಲೇ ವಿರೋಧ ವ್ಯಕ್ತವಾಗುತ್ತಿದೆ.

Challenging star Darshan threw a shoe: Incident occurred during the release of the second song of the movie “Kranti”.

Comments are closed.