Real Star Upendra : ಸೌಂದರ್ಯ ಜಗದೀಶ್‌ ಪುತ್ರ ಸ್ನೇಹಿತ್‌ ವಿರುದ್ದ ದೂರು : ಧ್ವನಿ ಎತ್ತಿದ ಉಪೇಂದ್ರ

(Real Star Upendra)ಸೌಂದರ್ಯ ಜಗದೀಶ್‌ ಅವರ ಪುತ್ರ ಸ್ನೇಹಿತ್‌ ತಮ್ಮ ಚಿಕ್ಕ ವಯಸ್ಸಿನಲ್ಲಿಯೇ ಹಲವಾರು ಸಿನಿಮಾಗಳಲ್ಲಿ ನಟಿಸುವ ಮೂಲಕ ಚಂದನವನದಲ್ಲಿ ಸದ್ದು ಮಾಡುತ್ತಿದ್ದಾರೆ. ಸದ್ಯಕ್ಕೆ ಯಾವುದೇ ಸಿನಿಮಾದಲ್ಲಿಯೂ ಸ್ನೇಹಿತ್‌ ಅಭಿನಯಿಸಿರಲಿಲ್ಲ. ಆದರೆ ಇದೀಗ ವ್ಯಕ್ತಿಯೊಬ್ಬರಿಗೆ ಅವಾಚ್ಯ ಶಬ್ಧದಿಂದ ಬೈದಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಅಲ್ಲದೇ ಸ್ನೇಹಿತ್‌ ಹಾಗೂ ಅವರ ಜೊತೆಗಿದ್ದ ಏಳು ಮಂದಿಯ ವಿರುದ್ದ ದೂರು ಸಲ್ಲಿಸಲಾಗಿದೆ. ಕಾರಿನಲ್ಲಿದ್ದ ಅನ್ನಪೂರ್ಣ ಎನ್ನುವವರನ್ನು ಕಾರ್‌ ನಿಂದ ಎಳೆದು ಹಲ್ಲೆ ಮಾಡಿ ಅವಾಚ್ಯ ಶಬ್ಧದಿಂದ ಬೈದಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಈ ಹಿಂದೆಯಷ್ಟೇ ಸ್ನೇಹಿತ್‌ ಮಹಾಲಕ್ಷ್ಮೀ ಲೇಔಟ್‌ ನ ತಮ್ಮ ಪಕ್ಕದ ಮನೆಯವರ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ಮಾತು ಕೇಳಿ ಬಂದಿತ್ತು.

ನಟ ಉಪೇಂದ್ರ(Real Star Upendra) ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಸ್ನೇಹಿತ್‌ ಕುರಿತಂತೆ ಬರೆದುಕೊಂಡಿದ್ದಾರೆ.” ಸೌಂದರ್ಯ ಜಗದೀಶ್‌ ಹಾಗೂ ನನ್ನ ಪರಿಚಯ, ಸ್ನೇಹ ಸುಮಾರು 25 ವರ್ಷಗಳಷ್ಟೂ ಹಳೆಯದು. ಅಂದಿನಿಂದ ಇಂದಿನವರೆಗೂ ನಾನು ಕಂಡಂತೆ ಜಗದೀಶ್‌ ತುಂಬಾ ಮೃದು ಸ್ವಭಾವದವರು, ಸ್ನೇಹ ಜೀವಿ ಅವರ ಶ್ರೀಮತಿ ರೇಖಾ ಮಗ ಸ್ನೇಹಿತ್‌ ಮಗಳು ಸೌಂದರ್ಯ ಕೂಡ ನಮ್ಮ ಕುಟುಂಬಕ್ಕೆ ಪರಿಚಯ. ಇತ್ತೀಚೆಗೆ ಸ್ನೇಹಿತ್‌ ಕುರಿತು ಕೇಳಿ ಬರುತ್ತಿರುವ ಆರೋಪಗಳನ್ನು ಕೇಳಿ ದಿಗ್ಭ್ರಮೆಯಾಯಿತು. ನಾನು ಕಂಡಂತೆ ಈತ ತುಂಬಾ ವಿನಯವಂತ , ಬೆಳೆಯುತ್ತಿರುವ ಹುಡುಗ, ಏಕೆ ಈ ರೀತಿ ಆರೋಪ ಮಾಡಿದ್ದಾರೆ ಎಂದು ನನಗೆ ತಿಳಿಯದು. ಏನಾದರೂ ಬಿನ್ನಾಭಿಪ್ರಾಯವಿದ್ದರೆ ಸಮಾಧಾನದಿಂದ ಕುಳಿತು ಚರ್ಚಿಸಿ ಬಗೆಹರಿಸಿಕೊಳ್ಳುವುದು ಒಳ್ಳೆಯದು. ಒಂದಂತೂ ಎಲ್ಲರಿಗೂ ಅನ್ವಯಿಸುವ ಸತ್ಯ ಅಜ್ಞಾನದ ಫಲ ಅಹಂಕಾರ, ಅಹಂಕಾರದ ಫಲ ದ್ವೇಷ, ದ್ವೇಷದ ಫಲ ಸರ್ವನಾಶ” ಎಂದು ರಿಯಲ್‌ ಸ್ಟಾರ್‌ ಉಪೇಂದ್ರ ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಹಾಕಿದ್ದರು.

ಅದಾದ ಬಳಿಕ ಪೋಸ್ಟ್‌ ಕುರಿತಂತೆ ಹಲವಾರು ಪರ ಹಾಗೂ ವಿರೋಧದ ಕುರಿತಂತೆ ಚರ್ಚೆ ನಡೆದಿದೆ. ಇದರ ಬೆನ್ನಲ್ಲೇ ನಟ ಉಪೇಂದ್ರ “ಅಬ್ಬಬಾ ! ಕಾಮೆಂಟ್ಸ್‌ ಬಾಕ್ಸ್‌ ತುಂಬಾ ನ್ಯಾಯ ಅನ್ಯಾಯಗಳ ಬಗ್ಗೆ ಬೊಬ್ಬೆ ಹೊಡೆಯುತ್ತಿದ್ದಾರೆ ಪರಾಕ್ರಮಿಗಳು ! ಈ ದೇಶದ ಪ್ರಜೆಯಾಗಿ ನನಗೂ ನ್ಯಾಯಾಂಗ ವ್ಯವಸ್ಥೆ ಬಗ್ಗೆ ಅಪಾರ ಗೌರವವಿದೆ. ಚಿಕ್ಕ ಹುಡುಗನಾಗಿದ್ದಾಗಿನಿಂದ ನನಗೆ ತಿಳಿ ದಿರುವ ಹುಡುಗ ಎಂದು ಎರಡು ಸಾಲು ಬರೆದೆ, ಅದೂ ಅವನು ತಪ್ಪೇ ಮಾಡಿಲ್ಲ ಎಂದು ಹೇಳಿಲ್ಲ. ಕೂತು ಮಾತನಾಡಿ ಸಮಸ್ಯೆ ಬಗೆಹರಿಸಿಕೊಳ್ಳಿ ಎಂದು ಹೇಳಿದ್ದು ಮತ್ತು ಕೊನೆಯ ಸಾಲಲ್ಲಿ ಅಜ್ಞಾನದ ಫಲ ಅಹಂಕಾರ, ಅಹಂಕಾರದ ಫಲ ದ್ವೇಷ, ದ್ವೇಷದ ಫಲ ಸರ್ವನಾಶ ಇದು ಎಲ್ಲರಿಗೂ ಅನ್ವಯಿಸುತ್ತದೆ ಎಂದು ಹೇಳಿದ್ದೇನೆ ಎಂದು ಕಮೆಂಟ್‌ ಮಾಡಿದ್ದಾರೆ.

ಇದನ್ನೂ ಓದಿ : ಕಲೆಕ್ಷನ್‌ ವಿಚಾರದಲ್ಲಿ ದಾಖಲೆ ಬರೆದ ಪೊನ್ನಿಯನ್‌ ಸೆಲ್ವಂ ಗಳಿಸಿದ್ದೆಷ್ಟು ಗೊತ್ತಾ ?

ಇದನ್ನೂ ಓದಿ : ಒಂದು ಮಗುವಿಗಾಗಿ ಹಂಬಲಿಸಿದ್ರಾ ಧ್ರುವ ಸರ್ಜಾ ಪ್ರೇರಣಾ ದಂಪತಿ ! ಆಕ್ಷ್ಯನ್ ಪ್ರಿನ್ಸ್ ಬಿಚ್ಚಿಟ್ರು ಅಸಲಿ‌ನೋವು

ಇದರಲ್ಲಿ ಪ್ರಜಾಕೀಯ ತಂದು ರಾಜಕೀಯ ಮಾಡುವ ನಿಮಗೆ ತಿಳಿದಿರಲಿ… ವ್ಯಾಪಾರಿ ರಾಜಕೀಯದಿಂದ ಭ್ರಷ್ಟ ವ್ಯವಸ್ಥೆಯಿಂದ ಸಾವಿರಾರು ಸಮಸ್ಯೆ ಎದುರಿಸುತ್ತಿದ್ದರೂ ರಾಜಕೀಯದಲ್ಲಿ ಭ್ರಷ್ಟತೆ ತುಂಬಿ ತುಳುಕುತ್ತಿದೆ ಎಂದು ಗೊತ್ತಿದ್ದೂ ಅದಕ್ಕೆ ಪ್ರತಿಕ್ರಯಿಸದೇ ಜಾಣ ಕುರುಡರೇ ನಿಮ್ಮನ್ನು ನೀವು ನೋಡಿಕೊಳ್ಳಿ. ಈ ನಿಮ್ಮ ನೀತಿ ನಿಯತ್ತು, ಪರಾಕ್ರಮ ಚುನಾವಣೆಯಲ್ಲಿ ಮತ ಕೇಳಲು ಬರುವ ಭ್ರಷ್ಟ ನಾಯಕರ ಮುಂದೆ ತೋರಿಸಿ ನೋಡೋಣ…” ಎಂದು ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

Complaint against Soundarya Jagdish’s son Senhith: Upendra raised his voice

Comments are closed.