ದರ್ಶನ್ ಜಾಲಿ ಬೈಕ್ ರೈಡ್ ಗೆ ಅಡ್ಡ ಬಂದ ಅಭಿಮಾನಿ….! ಆಮೇಲೇನಾಯ್ತು ಗೊತ್ತಾ…?!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಹುಬೇಡಿಕೆಯ ನಟ ಅದರೂ ಅಭಿಮಾನಿಗಳ ಪಾಲಿಗೆ ಎಂದಿಗೂ ಪ್ರೀತಿಯ ದಾಸ. ಇದೀಗ ದಚ್ಚು ಅಭಿಮಾನಿಗಳ ಮೇಲಿನ ಪ್ರೀತಿ ಮತ್ತೊಮ್ಮೆ ಸಾಬೀತಾಗಿದೆ.

ಇತ್ತೀಚಿಗಷ್ಟೇ ಆಪ್ತ ಸ್ನೇಹಿತರ ಜೊತೆ ಮಡಿಕೇರಿಗೆ ಬುಲೆಟ್ ಸವಾರಿ ಹೊರಟ ದರ್ಶನ್ ಅಲ್ಲಿ ಸ್ನೇಹಿತನದ ತೋಟದ ಮನೆಯಲ್ಲಿ ರಿಲ್ಯಾಕ್ಸ್ ಮಾಡಿದ್ದಾರೆ.

(adsbygoogle = window.adsbygoogle || []).push({});

ಜಾಲಿಯಾಗಿ ಸಮಯ ಕಳೆದ ದರ್ಶನ್, ಕ್ರಿಕೆಟ್ ಆಡಿ ಎಂಜಾಯ್ ಮಾಡಿದ್ದಾರೆ. ಇಷ್ಟೇ ಅಲ್ಲ ಅಡುಗೆ ಮಾಡೋದ್ರಲ್ಲೂ ಎಕ್ಸಪರ್ಟ್ ಆಗಿರೋ ದರ್ಶನ್ ತಮ್ಮ ಸ್ನೇಹಿತರ ಜೊತೆ ಅಡುಗೆ ಮಾಡಿ ಊಟ ಮಾಡಿ ಎಂಜಾಯ್ ಮಾಡಿದ್ದಾರೆ.

(adsbygoogle = window.adsbygoogle || []).push({});

ಇಷ್ಟೆ ಆಗಿದ್ದರೇ ಅದರಲ್ಲೇನಿದೆ ವಿಶೇಷ ಎನ್ನಬಹುದು, ಆದರೇ ಅಲ್ಲಿಂದ ಬೆಂಗಳೂರಿಗೆ ಬರೋ ದಾರಿ ಮಧ್ಯೆ ದರ್ಶನ್ ಅಭಿಮಾನಿಗಳಿಗೆ ತಮ್ಮ ಪ್ರೀತಿ ಎಷ್ಟೆಂಬುದನ್ನು ತೋರಿಸಿಕೊಟ್ಟಿದ್ದಾರೆ.

(adsbygoogle = window.adsbygoogle || []).push({});

ಮಡಿಕೇರಿಯಿಂದ ಬೆಂಗಳೂರಿಗೆ ತೆರಳುವ ವೇಳೆ ಸೋಮವಾರಪೇಟೆಯ ತಾಲೂಕಿನ ಬೈಚನಹಳ್ಳಿ ಬಳಿ ಹೆದ್ದಾರಿಯಲ್ಲಿ ದರ್ಶನ್ ರಿಲ್ಯಾಕ್ಸ್ ಮಾಡಲು ಬೈಕ್ ನಿಲ್ಲಿಸಿದ್ದಾರೆ.

(adsbygoogle = window.adsbygoogle || []).push({});

ಈ ವೇಳೆ ರಸ್ತೆಯಲ್ಲಿ ದರ್ಶನ್ ಕಂಡ ಅಭಿಮಾನಿಯೊಬ್ಬರು ತಮ್ಮ ಮನೆಗೆ ಬರುವಂತೆ ಆಹ್ವಾನಿಸಿದ್ದಾರೆ. ತಮ್ಮ ಸ್ಟಾರ್ ಗಿರಿಯ ಹಮ್ಮು ಬಿಮ್ಮು ತೋರದ ದರ್ಶನ್ ಆ ವೃದ್ಧ ಅಭಿಮಾನಿಯ ಬೇಡಿಕೆ ಮನ್ನಿಸಿ ಅವರ ಮನೆಗೆ ತೆರಳಿದ್ದಾರೆ.

(adsbygoogle = window.adsbygoogle || []).push({});

ಅಷ್ಟೇ ಅಲ್ಲ ಅಭಿಮಾನಿಯ ಸದಸ್ಯರ ಜೊತೆ ಪೋಟೋ ತೆಗೆಸಿಕೊಂಡು ಅವರು ನೀಡಿದ ಆತಿಥ್ಯ ಸ್ವೀಕರಿಸಿ ವಾಪಸ್ಸಾಗಿದ್ದಾರೆ. ಸ್ಟಾರ್ ನಟ ತಮ್ಮ ಕೂಗಿಗೆ ಬೆಲೆಕೊಟ್ಟು ಮನೆಗೆ ಬಂದು ತಮ್ಮ ಜೊತೆ ಸಮಯ ಕಳೆದಿದ್ದಕ್ಕೆ ಅಭಿಮಾನಿ ದಂಪತಿಗಳು ಫುಲ್ ಖುಷಿಯಾಗಿದ್ದಾರೆ.

ಉನ್ನುತ ದಚ್ಚು ಈ ಬೈಕ್ ರೈಡ್ ನಲ್ಲಿ ನಟ ದೇವರಾಜ್ ಪುತ್ರ ಪ್ರಜ್ವಲ್ ದೇವರಾಜ್ ಮತ್ತು ಪ್ರಣಮ್ ದೇವರಾಜ್, ನಿರ್ಮಾಪಕ ಉಮಾ ಪತಿ ಶ್ರೀನಿವಾಸ್, ಹಾಸ್ಯನಟ ಚಿಕ್ಕಣ್ಣ ಕೂಡ ಸಾಥ್ ನೀಡಿದ್ದರು

Comments are closed.