ನಿತ್ಯಭವಿಷ್ಯ : 21-11-2020

ಮೇಷರಾಶಿ
ನಿಮ್ಮ ಪರಿಶ್ರಮ ವೃತ್ತಿರಂಗದ ಮೇಲೆ ಪ್ರಭಾವ ಬೀರುತ್ತದೆ, ಸ್ವಂತ ಉದ್ಯಮದಲ್ಲಿ ನೆಮ್ಮದಿ, ವಾಹನ ಮತ್ತು ಭೂಮಿ ಖರೀದಿಗೆ ಮನಸ್ಸು, ಸಾಂಸಾರಿಕವಾಗಿ ಸಣ್ಣಪುಟ್ಟ ಸಮಸ್ಯೆ, ಸುಧಾರಿಸಿಕೊಂಡು ಹೋಗುವುದರಿಂದ ಯಶಸ್ಸು, ಆಕಸ್ಮಿಕವಾಗಿ ಉದ್ಯೋಗ ಲಾಭ.

ವೃಷಭರಾಶಿ
ಅಡೆತಡೆಗಳಿಂದ ನೆಮ್ಮದಿ ಹಾಳಾಗಲಿದೆ, ಧೈರ್ಯದಿಂದ ಮುನ್ನಡಿಯಿಟ್ಟರೆ ಯಶಸ್ಸು ಹಿಂಬಾಲಿಸಿಕೊಂಡು ಬರುವುದು, ಸಹೋದರನಿಂದ ಲಾಭ ಮತ್ತು ನಷ್ಟ, ದೂರ ಪ್ರಯಾಣಕ್ಕಾಗಿ ಖರ್ಚು, ಸಂಗಾತಿಯಿಂದ ಭಾಗ್ಯೋದಯ.

ಮಿಥುನರಾಶಿ
ಆರ್ಥಿಕವಾಗಿ ನಾನಾ ರೀತಿಯಲ್ಲಿ ಖರ್ಚು ವೆಚ್ಚಗಳು ನಿಮ್ಮನ್ನು ಕಂಗೆಡಿಸಲಿದೆ, ಪಾಲುದಾರಿಕೆಯಲ್ಲಿ ಅನಿರೀಕ್ಷಿತ ಅವಕಾಶಗಳು, ಶತ್ರು ಮತ್ತು ಋಣಭಾದೆ, ರೋಗ ಬಾಧೆಗಳಿಂದ ಸಮಸ್ಯೆ, ಕೋರ್ಟ್ ಕೇಸುಗಳಿಂದ ಮಾನಸಿಕ ಹಿಂಸೆ, ಸಹಕಾರಿ ಕೆಲಸಗಳು ಮಂದಗತಿಯಲ್ಲಿ ಸಾಗುವುದು.

ಕಟಕರಾಶಿ
ಹಲವು ಅವಕಾಶಗಳು ನಿಮಗೆ ಒದಗಿ ಬರಲಿದೆ, ಸದುಪಯೋಗ ಪಡಿಸಿಕೊಂಡ್ರೆ ಉತ್ತಮ ಭವಿಷ್ಯ, ಪ್ರಾಮಾಣಿಕ ಕೆಲಸಕ್ಕೆ ತಕ್ಕ ಪ್ರತಿಫಲ, ಪ್ರೀತಿ-ಪ್ರೇಮ ವಿಚಾರದಲ್ಲಿ ಯಶಸ್ಸು, ಸಂತಾನದ ಯೋಗ ಪ್ರಾಪ್ತಿ, ಉದ್ಯೋಗದಲ್ಲಿ ಉನ್ನತ ಹುದ್ದೆ.

ಸಿಂಹರಾಶಿ
ಸ್ವಕಾರ್ಯಕ್ಕಾಗಿ ಅಧಿಕ ಸುತ್ತಾಟ, ಕೆಲಸವು ಕೈಗೂಡುವುದರಿಂದ ನೆಮ್ಮದಿ, ವಾಹನ ಖರೀದಿ ಸಾಧ್ಯತೆ, ದೇವತಾ ದರ್ಶನ ಭಾಗ್ಯ, ಆಸ್ತಿಗಾಗಿ ಮಾಡಿದ ಸಾಲ ತೀರಿಸುವಿರಿ, ಮಕ್ಕಳಿಂದ ಅನಗತ್ಯ ಖರ್ಚು, ತಂದೆ ಮಾಡಿದ ಸಾಲದ ಹೊಣೆ ನಿಮ್ಮದು.

ಕನ್ಯಾರಾಶಿ
ಮನೆಯಲ್ಲಿ ಮಂಗಲ ಕಾರ್ಯ, ಚಿನ್ನಾಭರಣ ಖರೀದಿ, ಆರ್ಥಿಕ ಸ್ಥಿತಿ ಏರುಪೇರಾಗಾಗಲಿದೆ, ಸಮತೋಲನದಲ್ಲಿಟ್ಟುಕೊಳ್ಳಲು ಯತ್ನಿಸಿ, ಮಕ್ಕಳು ಬಿದ್ದು ಪೆಟ್ಟು ಮಾಡಿಕೊಳ್ಳುವ ಸಂಭವ, ಪತ್ರ ವ್ಯವಹಾರಗಳಿಂದ ಅನುಕೂಲ, ಪಾಲುದಾರಿಕೆ ವ್ಯವಹಾರ, ಜ್ಯೂಸ್ ರೇಸ್ ಲಾಟರಿ ಇವುಗಳಿಂದ ಸಮಸ್ಯೆ.

ತುಲಾರಾಶಿ
ವೃತ್ತಿರಂಗದಲ್ಲಿ ಉನ್ನತ ಸ್ಥಾನ ಪ್ರಾಪ್ತಿಯಾಗಲಿದೆ, ಉದ್ಯೋಗ ಸ್ಥಳದಲ್ಲಿ ಹಣಕಾಸಿನ ಹರಿವು, ಗುತ್ತಿಗೆದಾರರಿಗೆ ಧನಾಗಮನದಿಂದ ನೆಮ್ಮದಿ, ಸಾಹಸ ಕ್ರೀಡಾ ಪಟುಗಳಿಗೆ ಮನ್ನಣೆ, ಕರಾರುಪತ್ರ, ವ್ಯವಹಾರಸ್ಥರಿಗೆ ಧನಾಗಮನ, ಕುಟುಂಬ ಸಂಕಷ್ಟ ನಿವಾರಣೆ.

ವೃಶ್ಚಿಕರಾಶಿ
ಸ್ವ ಉದ್ಯೋಗ ಮಾಡುವವರಿಗೆ ಆದಾಯದಲ್ಲಿ ಏರಿಕೆ, ಮೇಲಾಧಿಕಾರಿಗಳ ಮೆಚ್ಚುಗೆ ಗಳಿಸುವಿರಿ, ಕುಟುಂಬದಲ್ಲಿ ನೆಮ್ಮದಿಯ ವಾತಾವರಣ, ಪ್ರಯಾಣದಿಂದ ಅನುಕೂಲ, ನೆರೆಹೊರೆಯವರಿಂದ ಬಂಧುಗಳಿಂದ ಅನುಕೂಲ, ಸ್ವಯಂಕೃತ ಅಪರಾಧಗಳಿಂದ ಸಮಸ್ಯೆ.

ಧನಸ್ಸುರಾಶಿ
ಸಮಾಧಾನ ಚಿತ್ತ ವ್ಯವಹರಿಸಿದರೆ ಯಶಸ್ಸು, ಶುಭ ಕಾರ್ಯದ ಕುರಿತು ಹಿರಿಯರೊಂದಿಗೆ ಚರ್ಚೆ ಸಾಧ್ಯತೆ, ಆತ್ಮ ವಿಶ್ವಾಸದಿಂದ ಯಶಸ್ಸು, ಆರ್ಥಿಕ ಸಂಕಷ್ಟಗಳು, ಮಾತಿನಿಂದ ಸಮಸ್ಯೆ ಎಚ್ಚರಿಕೆ, ವಾಹನ ಚಾಲನೆಯಲ್ಲಿ ಎಚ್ಚರಿಕೆ, ಅಪಘಾತಗಳಾಗುವ ಸಂಭವ, ಮಕ್ಕಳಿಂದ ಹಣಕಾಸಿನ ಸಹಾಯ.

ಮಕರರಾಶಿ
ಕೆಲಸ ಕಾರ್ಯಗಳಲ್ಲಿ ಯಶಸ್ಸು, ಪಾಲುದಾರಿಕೆಯಲ್ಲಿ ಅನುಕೂಲ ಮತ್ತು ಲಾಭ, ಸಂಗಾತಿಯಿಂದ ಭೂಮಿ ಯೋಗ, ಪೆಟ್ರೋಲ್ ಬಂಕ್, ಸಿಮೆಂಟ್, ಖಾದಿ ಮಾರಾಟ, ಕಟ್ಟಡ ನಿರ್ಮಾಣ, ಕೆಲಸಗಾರರಿಗೆ ಅನುಕೂಲ, ಹೊಸ ಯೋಜನೆ ಕೈಗೂಡಲಿದೆ.

ಕುಂಭರಾಶಿ
ಮನಸಿಗೆ ನಿರಾಸೆ ಕಾಡಲಿದೆ, ಪತ್ನಿಯ ಸಹನೆ ತಾಳ್ಮೆ ನಿಮ್ಮನ್ನು ಸರಿದಾರಿಗೆ ತರಲಿದೆ, ಉದ್ಯೋಗಕ್ಕಾಗಿ ಸಾಲ ಮಾಡುವಿರಿ, ಮಾನಸಿಕ ಒತ್ತಡಗಳಿಂದ ನಿದ್ರಾಭಂಗ, ಗೃಹ ಬದಲಾವಣೆಯಿಂದ ತೊಂದರೆ, ಕಷ್ಟ ನಷ್ಟಗಳನ್ನು ಧೈರ್ಯದಿಂದ ಎದುರಿಸಿ.

ಮೀನರಾಶಿ
ನಿಮಗಿಂದು ಯಶಸ್ಸಿನ ಕಾಲ, ಉತ್ತಮ ಹೆಸರು, ಕೀರ್ತಿ ಪ್ರತಿಷ್ಠೆ, ಹಣಕಾಸಿನ ಸಮಸ್ಯೆ ಬಗೆಹರಿಯುವ ಸಂದರ್ಭ, ಉದ್ಯೋಗದಲ್ಲಿ ಉನ್ನತ ಮಟ್ಟಕ್ಕೇರುವ ಅವಕಾಶ, ನಿಮ್ಮ ಮನೋಭಾವನೆಯನ್ನು ಎಲ್ಲಾ ವಿಚಾರದಲ್ಲಿಯೂ ಬದಲಾಯಿಸಿಕೊಳ್ಳಿ, ಧೈರ್ಯದಿಂದ ಮುನ್ನಡೆದರೆ ಯಶಸ್ಸು.

Comments are closed.