ಇದು ನಶ್ವರ ಜಗತ್ತು, ಚಿರು ಸರ್ಜಾರನ್ನು ಮರೆತಂತೆ, ನಾಳೆ ನನ್ನನ್ನೂ ಮರೆಯುತ್ತೆ ಜಗತ್ತು : ಹಿರಿಯ ನಟ ಜಗ್ಗೇಶ್

ಸ್ಯಾಂಡಲ್ ವುಡ್ ನಟ ಚಿರಂಜೀವಿ ಸರ್ಜಾ ನಮ್ಮನ್ನು ಅಗಲಿ ವರ್ಷವೂ ಕಳೆದಿಲ್ಲ. ಅಷ್ಟರಲ್ಲಾಗಲೇ ಸರ್ಜಾನನ್ನು ಮರೆತಿದ್ದಾರೆ. ನಾಳೆ ಜಗ್ಗೇಶ್ ಸ್ಥಿತಿಯೂ ಅಷ್ಟೆ. ವ್ಯಕ್ತಿ ಸತ್ತ ಮೂರೇ ದಿನಕ್ಕೆ ಮರೆತು ಹೋಗುತ್ತೆ ಅಂದ್ರೆ ನಾಳೆ ಎಲ್ಲರ ಸ್ಥಿತಿಯೂ ಇಷ್ಟೆ ಎಂದು ಹಿರಿಯ ನಟ ಜಗ್ಗೇಶ್ ಭಾವನಾತ್ಮಕವಾಗಿ ಮಾತನಾಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಜಾ ಮನೆಗೆ ತೆರಳಿ ಎಷ್ಟು ಜನ ಅವರ ಮನೆಗೆ ತೆರಳಿ ಮಗುವನ್ನು ಮಾತನಾಡಿಸಿದ್ದೀರಿ, ಅವರ ಕುಟುಂಬದ ಜೊತೆಗೆ ನಾವಿದ್ದೇವೆ ಅಂತಾ ಯಾರೂ ಹೇಳಿದ್ದೀರಿ. ಇಂದು ಅವನನ್ನು ಮರೆತಿದ್ದೀರಿ. ನಾಳೆ ಜಗ್ಗೇಶ್ ಸತ್ತ ಮೇಲೆಯೂ ಹೀಗೆ.. ಒಳ್ಳೆಯ ಸಿನಿಮಾ ಮಾಡಿದ್ದೀರಿ ಅಂತಾ ಒಂದೆರಡು ದಿನ ಮಾತನಾಡುತ್ತೀರಿ. ಆಮೇಲೆ ನನ್ನನ್ನೂ ಮರೆಯುತ್ತಿರಿ. ಇದು ನಶ್ವರ ಜಗತ್ತು, ನಾಳೆ ಜಗತ್ತು ಎಲ್ಲನ್ನೂ ಮರೆಯುತ್ತದೆ ಎಂದಿದ್ದಾರೆ.

ನಾನು ಅಂದ ಜಾಗ ಹಾಳಾಗಿದೆ. ನಾವು ಅಂದ ಜಾಗ ಮತ್ರ ಉಳಿದಿದೆ. ದಯವಿಟ್ಟು ಯಾರಿಗೂ ಅಹಂ ಬೇಡ. ದರ್ಶನ್ ಅಭಿಮಾನಿಗಳು ಅಂದು ಕುಳಿತು ಮಾತನಾಡಿದ್ರೆ ನಾನು ಎಲ್ಲವನ್ನೂ ಬಿಡಿಸಿ ಹೇಳುತ್ತಿದೆ. ಒಂದು ಕಡೆ ನಿರ್ಮಾಪಕನ ಚಿಂತೆ, ಇನ್ನೊಂದು ಕಡೆ ಹುಡುಗನನ್ನು ಪರಿಚಯಿಸಿದವನ ಮದುವೆ ನಡೆಯುತ್ತಿತ್ತು. ಅಂತಹ ಪರಿಸ್ಥಿತಿಯಲ್ಲಿಯೂ ದರ್ಶನ್ ಅಭಿಮಾನಿಗಳಿಗೆ ಉತ್ತರವನ್ನು ಕೊಟ್ಟಿದ್ದೇನೆ ಎಂದಿದ್ದಾರೆ.

ತಾಳ್ಮೆಯಿಂದ ತೋಟಕ್ಕೆ ಕರೆದು ಮಾತನಾಡಿದ್ರೆ ಖಂಡಿತಾ ನಾನು ಹೋಗಿ ಕುಡಿದು, ತಿಂದು ಜೊತೆಯಾಗಿ ಕುಳಿತು ಮಾತಾಡುತ್ತಿದ್ದೆ. ಆದರೆ ಆ ಕಾರ್ಯವನ್ನು ಮಾಡಿಲ್ಲ. ಇಂತಹ ಪ್ರಯೋಗವನ್ನು ಮುಂದೆ ಯಾರಿಗೂ ಮಾಡಲು ಹೋಗಬೇಡಿ. ಇದು ಒಳ್ಳೆಯ ಬೆಳವಣಿಗೆಯಲ್ಲಾ

Comments are closed.