ನಾನೆಲ್ಲೂ ಓಡಿ ಹೋಗಲ್ಲ….! ಸಿಸಿಬಿ ವಿಚಾರಣೆ ಬಳಿಕ ರಾಧಿಕಾಕುಮಾರಸ್ವಾಮಿ ರಿಯಾಕ್ಷನ್…!!

ಬೆಂಗಳೂರು: ವಂಚಕ ಯುವರಾಜ್ ಅಲಿಯಾಸ್ ಸ್ವಾಮಿ ಜೊತೆ ಹಣಕಾಸು ವ್ಯವಹಾರ ಹೊಂದಿದ್ದ ಕಾರಣಕ್ಕೆ ಸಂಕಷ್ಟಕ್ಕೆ ಸಿಲುಕಿರುವ ನಟಿ ರಾಧಿಕಾ ಕುಮಾರಸ್ವಾಮಿ ಸಿಸಿಬಿ ವಿಚಾರಣೆಗೆ ಹಾಜರಾಗಿದ್ದಾರೆ‌‌.

ಸಿಸಿಬಿ ವಶದಲ್ಲಿರುವ ಸ್ವಾಮಿ ಅಕೌಂಟ್ ನಿಂದ ರಾಧಿಕಾಗೆ ಅಪಾರ ಮೊತ್ತದ ಹಣ ವರ್ಗಾವಣೆಯಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಗುರುವಾರ ಡಾಲರ್ಸ್ ಕಾಲೋನಿ‌ ನಿವಾಸದಲ್ಲಿ ಸುದ್ಧಿಗೋಷ್ಟಿ ನಡೆಸಿದ್ದ ನಟಿ ರಾಧಿಕಾ, ಐತಿಹಾಸಿಕ ಸಿನಿಮಾವೊಂದಕ್ಕಾಗಿ ಯುವರಾಜ್ ಅವರಿಂದ 75 ಲಕ್ಷ ಹಣ ಪಡೆಯಲಾಗಿದೆ. ಅದನ್ನು ಹೊರತು ಪಡಿಸಿ ಬೇರೆ ವ್ಯವಹಾರ ಇಲ್ಲ ಎಂದಿದ್ದರು.

ಯುವರಾಜ್ ವಿಚಾರಣೆ ವೇಳೆ ರಾಧಿಕಾ ಕುಮಾರಸ್ವಾಮಿ ಜೊತೆ ಹಣಕಾಸು ವ್ಯವಹಾರ ನಡೆಸಿರುವ ಸಂಗತಿ ಬಯಲಾದ ಹಿನ್ನೆಲೆಯಲ್ಲಿ ಸಿಸಿಬಿ ರಾಧಿಕಾ ಕುಮಾರಸ್ವಾಮಿ ಗೆ ವಿಚಾರಣೆಗೆ ಹಾಜರಾಗುವಂತೆ ನೊಟೀಸ್ ಜಾರಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ಶುಕ್ರವಾರ ೧೧ ಗಂಟೆಗೆ ರಾಧಿಕಾ ವಿಚಾರಣೆಗೆ ಹಾಜರಾಗಿದ್ದಾರೆ.

ನಾಲ್ಕು ತಾಸುಗಳ ಕಾಲ ಪ್ರಕರಣದ ತನಿಖಾಧಿಕಾರಿ ನಾಗರಾಜ್ ರಾಧಿಕಾ ಕುಮಾರಸ್ವಾಮಿ ವಿಚಾರಣೆ ನಡೆಸಿದ್ದು, ಅಗತ್ಯ ಮಾಹಿತಿ ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ಇನ್ನು ವಿಚಾರಣೆ ಬಳಿಕ ಮಾಧ್ಯಮಗಳ ಎದುರು ಮಾತನಾಡಿದ ರಾಧಿಕಾ ಕುಮಾರಸ್ವಾಮಿ, ವಿಚಾರಣೆಗೆ ಹಾಜರಾಗಿದ್ದೇನೆ. ಅಲ್ಲಿ ಏನು ವಿಚಾರಣೆ ನಡೀತು ಅನ್ನೋದನ್ನೆಲ್ಲ ಇಲ್ಲಿ ಹೇಳೋಕೆ ಸಾಧ್ಯವಿಲ್ಲ.

ಆದರೆ ನಾನು ಎಲ್ಲೂ ಓಡಿ ಹೋಗಲ್ಲ. ಬೆಂಗಳೂರಿನಲ್ಲೇ ಇರ್ತೆನೆ. ಹೀಗಾಗಿ ಯಾವಾಗ ವಿಚಾರಣೆಗೆ ಕರೆದರೂ ಬರೋದಿಕ್ಕೆ ಸಿದ್ಧ ಎಂದಿದ್ದಾರೆ. ಮೂಲಗಳ ಮಾಹಿತಿ ಪ್ರಕಾರ ಯುವರಾಜ್ ಹೇಳಿಕೆ ಮತ್ತು ರಾಧಿಕಾ ಹೇಳಿಗೆ ಒಂದಕ್ಕೊಂದು ತಾಳೆ ಯಾಗದ ಹಿನ್ನೆಲೆಯಲ್ಲಿ ಇಬ್ಬರನ್ನೂ ಎದುರು-ಬದುರು ಕೂರಿಸಿ ವಿಚಾರಣೆ ನಡೆಸಿ ಮಾಹಿತಿ ಪಡೆದಿದ್ದಾರೆ ಎನ್ನಲಾಗಿದೆ.

ಸಿಸಿಬಿ ಪೊಲೀಸರು ಅಗತ್ಯ ಮಾಹಿತಿ ಕಲೆಹಾಕಲು ರಾಧಿಕಾ ಕುಮಾರಸ್ವಾಮಿ ಮೊಬೈಲ್ ವಶಪಡಿಸಿಕೊಂಡಿದ್ದಾರೆ ಎಂಬ ಮಾತು ಕೇಳಿ ಬಂದಿದ್ದು, ಈ ಮಾಹಿತಿ ಖಚಿತವಾಗಿಲ್ಲ.

Comments are closed.