Kangana Ranaut: ತನ್ನ ಪ್ರೇಮಕಥೆಯಲ್ಲಿ ‘ಪ್ರೀತಿ’ಯೇ ಇರಲಿಲ್ಲ ಅನ್ನೋದನ್ನು ಯಾವ ಹೆಣ್ಣು ಕೂಡಾ ಸಹಿಸಲ್ಲ; ನಟಿ ಕಂಗನಾ ಹೀಗಂದಿದ್ಯಾಕೆ..?

ಮುಂಬೈ: Kangana Ranaut: ಕಳೆದೆರಡು ವರ್ಷಗಳ ಹಿಂದೆ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆಗೆ ಶರಣಾದಾಗ ಅದೊಂದು ಕೊಲೆ ಎಂದು ವಾದಿಸಿದ್ದ ನಟಿ ಕಂಗನಾ ರಣಾವತ್ ಇದೀಗ ನಟಿ ತುನಿಶಾ ಶರ್ಮಾರದ್ದು ಕೂಡಾ ಆತ್ಮಹತ್ಯೆ ಅಲ್ಲ, ಕೊಲೆ ಎಂದು ಹೇಳಿದ್ದಾರೆ. ಈ ಬಗ್ಗೆ ಇನ್ ಸ್ಟಾಗ್ರಾಂನಲ್ಲಿ ಭಾವನಾತ್ಮಕ ಪೋಸ್ಟ್ ವೊಂದನ್ನು ಹಂಚಿಕೊಂಡಿದ್ದಾರೆ.

ನಟಿ ತುನಿಶಾ ಸಾವಿನ ಬಗ್ಗೆ ಇನ್ ಸ್ಟಾಗ್ರಾಂನಲ್ಲಿ ನಟಿ ಕಂಗನಾ ರಣಾವತ್ ಧ್ವನಿ ಎತ್ತಿದ್ದು, ಮಹಿಳೆ ಎಲ್ಲವನ್ನೂ ನಿಭಾಯಿಸಬಲ್ಲಳು. ಮದುವೆ ಮುರಿದು ಬಿದ್ದಾಗ, ನಿಜವಾದ ಪ್ರೀತಿ ಕಳೆದುಹೋದಾಗ, ಸಂಬಂಧ ಒಡೆದು ಹೋದಾಗ ಕೂಡಾ ಅದನ್ನು ಹೆಣ್ಣಾದವಳು ನಿಭಾಯಿಸಿಕೊಂಡು ಹೋಗುತ್ತಾಳೆ. ಆದರೆ ತನ್ನ ಪ್ರೇಮಕಥೆಯಲ್ಲಿ ಪ್ರೀತಿಯೇ ಇಲ್ಲ ಅನ್ನೋದನ್ನು ಮಾತ್ರ ಆಕೆ ಸಹಿಸಲಾರಳು. ತಾನು ಅತಿಯಾಗಿ ಪ್ರೀತಿಸುವ ವ್ಯಕ್ತಿ ತನ್ನನ್ನು ಪ್ರೀತಿಸಿಯೇ ಇಲ್ಲ, ಸುಮ್ಮನೆ ತನ್ನ ಜೊತೆಗಿದ್ದ ಅನ್ನೋ ನೋವನ್ನು ತಡೆದುಕೊಳ್ಳುವ ಶಕ್ತಿ ಹೆಣ್ಣಿಗಿಲ್ಲ. ತುನಿಶಾ ವಿಚಾರದಲ್ಲೂ ಹೀಗೆಯೇ ಆಗಿದೆ. ಆಕೆಯ ಪ್ರಿಯಕರ ಕೂಡಾ ಅವಳನ್ನು ಪ್ರೀತಿಸಿಲ್ಲ ಬದಲಾಗಿ ದೈಹಿಕವಾಗಿ, ಮಾನಸಿಕವಾಗಿ ಅವಳನ್ನು ಬಳಸಿಕೊಂಡ, ಅವಳ ಪ್ರೀತಿ, ದುರ್ಬಲತೆಯನ್ನೇ ಅಸ್ತ್ರವಾಗಿಸಿಕೊಂಡು ಶೋಷಣೆ ನಡೆಸಿದ. ಈ ವಿಚಾರ ಆಕೆಯ ಗಮನಕ್ಕೆ ಬರುತ್ತಿದ್ದಂತೆ ಆಕೆ ತನ್ನ ಗ್ರಹಿಕಾ ಸಾಮಥ್ರ್ಯ ಕಳೆದುಕೊಂಡಳು. ತಾನು ಇದ್ದರೂ ಒಂದು ಸತ್ತರೂ ಒಂದೇ ಎಂದು ಸಾಯುವ ನಿರ್ಧಾರ ತೆಗೆದುಕೊಂಡಳು. ಆದರೆ ಇದು ಆತ್ಮಹತ್ಯೆ ಅಲ್ಲ. ಕೊಲೆ ಎಂದೇ ಪರಿಗಣಿಸಬೇಕು ಎಂದು ಕಂಗನಾ ರಣಾವತ್ ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ: Shree Balaji Photo Studio Movie : ಸ್ಯಾಂಡಲ್‌ವುಡ್‌ ನಲ್ಲಿ ಸದ್ದು ಮಾಡುತ್ತಿದೆ “ಶ್ರೀ ಬಾಲಾಜಿ ಸ್ಟುಡಿಯೋ” ಅನ್ನೋ ಪೋಟೋಗ್ರಾಫರ್‌ ಕಥೆಯ ಸಿನಿಮಾ

ಪತ್ನಿಯೇ ಆಗಲಿ, ಪ್ರೇಯಸಿಯೇ ಆಗಲಿ ಪುರುಷರು ಒಂದು ಹುಡುಗಿಯ ಜೊತೆ ಸಂಬಂಧವಿರುವಾಗಲೇ ಅಕ್ರಮ ಸಂಬಂಧ ಇಟ್ಟುಕೊಳ್ಳುವುದನ್ನು ಕ್ರಿಮಿನಲ್ ಅಪರಾಧ ಎಂದೇ ಪರಿಗಣಿಸಬೇಕು. ಒಬ್ಬ ಹುಡುಗಿಯನ್ನು ಕೇವಲ ಲೈಂಗಿಕವಾಗಿ ಬಳಸಿಕೊಂಡು ಬಳಿಕ ಏಕಾಏಕಿ ಸಂಬಂಧ ಮುರಿದುಕೊಳ್ಳುವುದನ್ನು ಕೂಡಾ ಅಪರಾಧ ಎಂದೇ ಪರಿಗಣಿಸಬೇಕು ಎಂದು ಕಂಗನಾ ಬರೆದುಕೊಂಡಿದ್ದಾರೆ.

ನಮ್ಮ ಹೆಣ್ಣುಮಕ್ಕಳ ಬಗ್ಗೆ ನಾವು ಕಾಳಜಿ ಹೊಂದಬೇಕು. ಹೆಣ್ಣಿನ ರಕ್ಷಣೆ ಸರ್ಕಾರದ ಹೊಣೆ. ಪ್ರಧಾನಿ ಮೋದಿ ಈ ಬಗ್ಗೆ ಗಮನಹರಿಸಬೇಕು. ಹೆಣ್ಣನ್ನು ಗೌರವಿಸದ ನೆಲ ನಾಶವಾಗುತ್ತದೆ. ದ್ರೌಪದಿಗೆ ಕೃಷ್ಣನಂತೆ, ಸೀತೆಗೆ ರಾಮನಂತೆ ಹೆಣ್ಣುಮಕ್ಕಳ ರಕ್ಷಣೆಗೆ ಪ್ರಧಾನಿ ಮೋದಿ ಮುಂದಾಗಬೇಕು. ಮಹಿಳೆಯರ ಮೇಲಿನ ಆಸಿಡ್ ಅಟ್ಯಾಕ್, ಶೃದ್ಧಾಳಂತೆ ಭೀಕರವಾಗಿ ಕೊಲೆಗೈಯುವವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ನಟಿ ಕಂಗನಾ ರಣಾವತ್ ಆಗ್ರಹಿಸಿದ್ದಾರೆ.

ಇದನ್ನೂ ಓದಿ: Raj B Shetty : ಸೇಡಿನ ಜ್ವಾಲೆಯ ಸಿನಿಮಾಕ್ಕೆ ರಾಜ್‌ ಬಿ ಶೆಟ್ಟಿ ನಾಯಕ !

Kangana Ranaut: No girl can bear to have no love in her love story; Why did actress Kangana says this?

Comments are closed.