“ಕಾಂತಾರ 2” ಕಥೆಯಲ್ಲಿ ಟ್ವಿಸ್ಟ್ ! ಸಿನಿಮಾದ ಸಿಕ್ರೆಟ್‌ ಬಿಚ್ಚಿಟ್ಟ ವಿಜಯ್ ಕಿರಗಂದೂರು

ನಟ ರಿಷಬ್‌ ಶೆಟ್ಟಿ ನಿರ್ದೇಶನದ “ಕಾಂತಾರ” ಸಿನಿಮಾ ಕಳೆದ ವರ್ಷ ತೆರೆಕಂಡು ಇಡೀ ಭಾರತ ಸಿನಿರಂಗವೇ ಕನ್ನಡ ಸಿನಿರಂಗದತ್ತ ತಿರುಗಿ ನೋಡುವಂತೆ, ಕನ್ನಡ ಸಿನಿಮಾಗಳ ಬಗ್ಗೆ ಮೆಚ್ಚುಗೆ ಮಾತನಾಡುವಂತೆ ಮಾಡಿದೆ. ಕಾಂತಾರ ಸಿನಿಮಾದ ಎರಡನೇ ಭಾಗ ಬರಲಿದೆಯಾ ಎಂಬ ಕುತೂಹಲ ಎಲ್ಲರಲ್ಲಿಯೂ ಮೂಡಿತ್ತು. “ಕಾಂತಾರ 2” (Kantara 2 Movie Update ) ಸಿನಿಮಾ ಬರಲಿದೆ ಎಂಬ ಸುದ್ದಿಗಳು ಹರಿದಾಡಿತ್ತು. ಹೀಗೆ ಅಧಿಕೃತ ಘೋಷಣೆ ಇಲ್ಲದಿದ್ದರೂ ಸಹ “ಕಾಂತಾರ 2” ಬಗ್ಗೆ ನಿರೀಕ್ಷೆ ಹುಟ್ಟಿಕೊಂಡುಬಿಟ್ಟಿದೆ.

ಪ್ರತಿ ಬಾರಿಯೂ ಭಿನ್ನ ವಿಭಿನ್ನ ಕಥೆ ಮಾಡುವ ರಿಷಬ್ ಶೆಟ್ಟಿ ಕಾಂತಾರ 2 ಸಿನಿಮಾದಲ್ಲಿ ಯಾವ ರೀತಿಯ ಚಿತ್ರಕಥೆ ಮಾಡಬಹುದು ಎಂಬ ಕುತೂಹಲ ಸಿನಿ ರಸಿಕರಲ್ಲಿ ಮೂಡಿತ್ತು. ಇನ್ನು ಹೊರಗಡೆ ಕಾಂತಾರ 2 ಬರಲಿದೆ ಎಂಬ ಸುದ್ದಿ ಹರಿದಾಡಿದ ಬೆನ್ನಲ್ಲೇ ಸಂದರ್ಶನವೊಂದರಲ್ಲಿ ನಟ ದಿಗಂತ್ ರಿಷಬ್ ಶೆಟ್ಟಿ ಕಾಂತಾರ 2 ಕಥೆ ರಚಿಸುವಲ್ಲಿ ನಿರತರಾಗಿದ್ದಾರೆ ಎಂಬ ಹೇಳಿಕೆಯನ್ನು ನೀಡಿದ್ದರು. ದಿಗಂತ್ ನೀಡಿದ್ದ ಈ ಹೇಳಿಕೆ ಕಾಂತಾರ ಎರಡನೇ ಭಾಗ ಬರುವುದನ್ನು ಬಹುತೇಕ ಖಚಿತಪಡಿಸಿತು.

ಹೀಗೆ ಕಾಂತಾರ 2 ಕುರಿತ ಚರ್ಚೆ ಜೋರಾಗಿರುವಾಗಲೇ ಸಿನಿತಂಡ ಕಾಂತಾರ 2 ಸಿನಿಮಾ ಮಾಡಲು ದೈವದ ಅನುಮತಿಯನ್ನು ಕೇಳಿತ್ತು. ಬಳಿಕ ನಿನ್ನೆಯಷ್ಟೇ ( ಜನವರಿ 20 ) ದೈವದ ಹರಕೆಯನ್ನು ತೀರಿಸಿದ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿತ್ತು. ಇದರ ಬೆನ್ನಲ್ಲೇ ಇದೀಗ ಸಿನಿಮಾದ ನಿರ್ಮಾಪಕ ವಿಜಯ್ ಕಿರಗಂದೂರು ಕಾಂತಾರ 2 ಸಿನಿಮಾದ ಬಗ್ಗೆ ವಿಶೇಷ ಸಂದರ್ಶನದಲ್ಲಿ ಮಾತನಾಡಿ ಸಿನಿಮಾದ ಚಿತ್ರೀಕರಣ ಯಾವಾಗ ಆರಂಭಗೊಳ್ಳಲಿದೆ ಹಾಗೂ ಸಿನಿಮಾ ಯಾವಾಗ ತೆರೆಗೆ ಬರಲಿದೆ ಎಂಬ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಈ ಹಿಂದೆ ಯುಟ್ಯೂಬ್ ಸಂದರ್ಶನವೊಂದರಲ್ಲಿ ದಿಗಂತ್ ಹೇಳಿದಂತೆ ರಿಷಬ್ ಶೆಟ್ಟಿ ಕಾಂತಾರ 2 ಸಿನಿಮಾಕ್ಕಾಗಿ ಕಥೆ ಬರೆಯಲು ಆರಂಭಿಸಿದ್ದಾರೆ. ಈ ಕುರಿತು ಸಂದರ್ಶನದಲ್ಲಿ ವಿಜಯ್ ಕಿರಗಂದೂರು ಸಹ ಮಾತನಾಡಿದ್ದು ‘ರಿಷಬ್ ಶೆಟ್ಟಿ ಸದ್ಯ ಸಿನಿಮಾದ ಕತೆ ಬರೆಯುತ್ತಿದ್ದು, ತನ್ನ ಸಹ ಬರಹಗಾರರ ಜತೆ ಕರ್ನಾಟಕ ಕರಾವಳಿ ಕಾಡಿನ ಒಳಗೆ ಹೋಗಿ ಸಿನಿಮಾಕ್ಕಾಗಿ ಸಂಶೋಧನೆಗೆ ಇಳಿದಿದ್ದಾರೆ’ ಎಂದು ಹೇಳಿಕೆ ನೀಡಿದರು. ಈ ವರ್ಷ ಮಳೆಗಾಲದಲ್ಲಿ ಕೆಲ ಭಾಗವನ್ನು ಚಿತ್ರೀಕರಿಸಬೇಕಾಗಿರುವ ಕಾರಣ ರಿಷಬ್ ಶೆಟ್ಟಿ ಜೂನ್ ತಿಂಗಳಿನಲ್ಲಿ ಚಿತ್ರೀಕರಣ ಪ್ರಾರಂಭಿಸುವ ಯೋಜನೆ ಹೊಂದಿದ್ದಾರೆ. ಇನ್ನು ಸಿನಿಮಾವನ್ನು 2024ರ ಏಪ್ರಿಲ್ ಅಥವಾ ಮೇ ತಿಂಗಳಿನಲ್ಲಿ ಪ್ಯಾನ್ ಇಂಡಿಯಾ ಸಿನಿಮಾವಾಗಿ ಬಿಡುಗಡೆ ಮಾಡುವುದು ನಮ್ಮ ಗುರಿ’ ಎಂದು ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ : KD movie : ಪ್ರೇಮ್‌ ನಿರ್ದೇಶನದ “ಕೆಡಿ” ಸಿನಿಮಾಕ್ಕಾಗಿ : ಆಕ್ಷನ್‌ ಫ್ರಿನ್ಸ್‌ ಧ್ರುವ ಸರ್ಜಾ ಭರ್ಜರಿ ತಯಾರಿ

ಇದನ್ನೂ ಓದಿ : Actor Prem – Tabla Nani : ನಿರ್ದೇಶಕ ಅಥರ್ವ್‌ ಆರ್ಯ ಸಿನಿಮಾದಲ್ಲಿ ಜೊತೆಯಾದ ನಟ ಪ್ರೇಮ್‌, ತಬಲ ನಾಣಿ

ಇದನ್ನೂ ಓದಿ : ನಟಿ ರಚಿತಾ ರಾಮ್ ವಿರುದ್ದ ದೂರು ದಾಖಲು : ಬಂಧನ ಭೀತಿಯಲ್ಲಿ ಡಿಂಪಲ್ ಕ್ವೀನ್

ಈ ಮೂಲಕ ಕಾಂತಾರ 2 ಮುಂದಿನ ವರ್ಷದ ಬೇಸಿಗೆಯಲ್ಲಿ ಬೆಳ್ಳಿತೆರೆಗೆ ಅಪ್ಪಳಿಸಲಿದೆ. ಇಷ್ಟೇ ಅಲ್ಲದೇ “ಕಾಂತಾರ 2” “ಕಾಂತಾರ” ಸಿನಿಮಾದ ಮುಂದುವರಿದ ಭಾಗವಲ್ಲ ಎಂಬುದೂ ಸಹ ಖಚಿತವಾಗಿದೆ. ಈ ಬಾರಿ ಕಾಂತಾರ ಸಿನಿಮಾದಲ್ಲಿ ತೋರಿಸಲಾಗಿದ್ದ ಕಥೆಗೂ ಹಿಂದೆ ನಡೆದಿದ್ದೇನು ಎಂಬುದನ್ನು ತೆರೆಮೇಲೆ ತರಲಿದ್ದು, ಇದು ಸೀಕ್ವೆಲ್ ಆಗಿರದೇ ಪ್ರೀಕ್ವೆಲ್ ಆಗಿರಲಿದೆ. ಕಾಂತಾರ ಸಿನಿಮಾದಲ್ಲಿ ತೋರಿಸಲಾಗಿದ್ದ ಭೂತಕೋಲದ ಹಿನ್ನೆಲೆಯನ್ನು ಈ ಬಾರಿ ಇನ್ನೂ ಆಳವಾಗಿ ತೋರಿಸಲಾಗುತ್ತದೆ. ಈ ಮೂಲಕ ಕಾಡುಬೆಟ್ಟು ಶಿವನ ತಂದೆಯ ಕಾಲಘಟ್ಟದ ಕಥೆಯನ್ನು ಸಿನಿ ರಸಿಕರು ನಿರೀಕ್ಷಿಸಬಹುದು ಎಂದು ನಿರ್ಮಾಪಕ ವಿಜಯ್‌ ಕಿರಗಂದೂರು ತಿಳಿಸಿದ್ದಾರೆ.

Kantara 2 Movie Update : Twist in the story of “Kantara 2”! Vijay Kirgandur revealed the secret of the movie

Comments are closed.