ನಟ ದರ್ಶನ್‌ ಜೊತೆ ನಟಿಸುವುದು ವಿಶೇಷ ಎಂದ ಬಹುಭಾಷಾ ನಟ ತರುಣ್‌ ರಾಜ್‌ ಅರೋರಾ

ನಟ ದರ್ಶನ್‌ ತೂಗುದೀಪ್‌ ಅಭಿನಯದ ಬಹು ನಿರೀಕ್ಷಿತ “ಕ್ರಾಂತಿ” ಸಿನಿಮಾದ ಬಿಡುಗಡೆಗಾಗಿ ಅಭಿಮಾನಿಗಳು ಕಾತುರದಿಂದ ಕಾದಿದ್ದಾರೆ. ಈಗಾಗಲೇ ಈ ಸಿನಿಮಾದ ಹಾಡುಗಳು ಮತ್ತು ಟ್ರೈಲರ್‌ ಸಾಮಾಜಿಕ ಜಾಲತಾಣದಲ್ಲಿ ಸಖತ್‌ ಸದ್ದು ಮಾಡುತ್ತಿದೆ. ಈ ಸಿನಿಮಾದಲ್ಲಿ ಹಲವು ನಟ-ನಟಿಯರು ನಟಿಸಿದ್ದು, ಸದ್ಯ ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂ ಸಿನಿಮಾಗಳಲ್ಲಿ ನಟಿಸಿರುವ ತರುಣ್‌ ರಾಜ್‌ ಅರೋರಾ (Tarun Raj Arora) ಕ್ರಾಂತಿ ಸಿನಿಮಾ ಮೂಲಕ ಕನ್ನಡಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಹಾಗೆ ಬಹುಭಾಷಾ ನಟ ತರುಣ್‌ ರಾಜ್‌ ಅರೋರಾ ಈ ಸಿನಿಮಾದಲ್ಲಿ ನಟಿಸಿದ್ದು, ದರ್ಶನ್‌ ಸಿನಿಮಾದಲ್ಲಿ ಪಾದಾರ್ಪಣೆ ಮಾಡುವುದು ವಿಶೇಷ ಅನಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮಾಡಿದ ನಟ ತರುಣ್‌ ಅವರು ಹಲವಾರು ಕಾರಣಗಳಿಗಾಗಿ ಕ್ರಾಂತಿ ಸಿನಿಮಾ ವಿಶೇಚ ಎಂದು ಭಾವಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಪ್ರಾಥಮಿಕವಾಗಿ ಅವರು ವಿ.ಹರಿಕೃಷ್ಣ ನಿರ್ದೇಶನದಲ್ಲಿ ಚಾಲೆಂಚಿಂಗ್‌ ಸ್ಟಾರ್‌ ದರ್ಶನ್‌ಗೆ ವಿಲನ್‌ ಆಗಿ ನಟಿಸಿದ್ದಾರೆ. “ಇತರ ದಕ್ಷಿಣ ಭಾರತದ ಉದ್ಯಮಗಳು ಮತ್ತು ಬಾಲಿವುಡ್‌ನಲ್ಲಿ ಕೆಲಸ ಮಾಡಿದ ನಾನು ಕನ್ನಡದಲ್ಲಿ ಕೆಲಸ ಮಾಡಲು ಇಷ್ಟಪಡುತ್ತಿದೆ. ದರ್ಶನ್‌ ಅವರು ಅಸಾಧಾರಣ ಮಾಸ್‌ ಅದ್ಭುತ ನಟನೆಯಲ್ಲಿ ಕಾಣಿಸಿಕೊಂಡಿದ್ದು, ಅವರ ಈ ಸಿನಿಮಾದಲ್ಲಿ ಪಾದಾರ್ಪಣೆ ಮಾಡುವುದು ಪರಿಪೂರ್ಣ ವಿಶೇಷ ಆಗಿದೆ.

ಇದನ್ನೂ ಓದಿ : ಕುರುಡು ಕಾಂಚಾಣ ಮೂಲಕ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟ ಡಬ್ಬಿಂಗ್‌ ಕಲಾವಿದೆ ಅಮೂಲ್ಯ ಗೌಡ

ಇದನ್ನೂ ಓದಿ : ನಟ ಪುನೀತ್‌ ರಾಜ್‌ಕುಮಾರ್‌ ಹುಟ್ಟುಹಬ್ಬಕ್ಕೆ “ಗಂಧದಗುಡಿ” ಸಿನಿಮಾ ರೀ ರಿಲೀಸ್‌

ಇದನ್ನೂ ಓದಿ : “ಭೋಲಾ” ಸಿನಿಮಾದ ಟಬು ಫಸ್ಟ್‌ ಲುಕ್‌ ಹಂಚಿಕೊಂಡ ಅಜಯ್‌ ದೇವಗನ್

ಇದನ್ನೂ ಓದಿ : ಮೈಸೂರು ಪಬ್‌ನಲ್ಲಿ ಅಂದು ನಡೆದಿದ್ದೇನು? ದರ್ಶನ್‌ರ ವೈರಲ್ ವಿಡಿಯೋ ಹಿಂದಿನ ಅಸಲಿ ಕತೆ ಬಿಚ್ಚಿಟ್ಟ ರಚಿತಾ ರಾಮ್

ಈ ಸಿನಿಮಾಕ್ಕೆ ನಾನೇ ಡಬ್ಬಿಂಗ್‌ ಕೂಡ ಮಾಡಿದ್ದೇನೆ ಅನ್ನೋದು ಮತ್ತೊಂದು ಖುಷಿಗೆ ಕಾರಣವಾಗಿದೆ. ಕ್ರಾಂತಿ ಸಿನಿಮಾದಲ್ಲಿ ನನ್ನ ಕೆಲಸವನ್ನು ಜನರು ಆನಂದಿಸುತ್ತಾರೆ ಎಂದು ನಾನು ಭಾವಿಸುತ್ತೇನೆ. ನನಗೆ ಅವರ ಆರ್ಶಿವಾದ ಮತ್ತು ಹಾರೈಕೆಗಳು ಬೇಕಾಗುತ್ತದೆ” ಎಂದು ನಟ ತರುಣ್‌ ರಾಜ್‌ ಅರೋರಾ ಹೇಳಿದರು. ಶೈಲಜಾ ನಾಗ್ ಮತ್ತು ಬಿ ಸುರೇಶ ಅವರ ಮೀಡಿಯಾ ಹೌಸ್ ಸ್ಟುಡಿಯೋಸ್ ನಿರ್ಮಿಸಿರುವ ಕ್ರಾಂತಿಯಲ್ಲಿ ರಚಿತಾ ರಾಮ್, ರವಿಚಂದ್ರನ್, ರವಿಶಂಕರ್, ಸಂಯುಕ್ತ ಹೊರ್ನಾಡ್, ಮತ್ತು ನಿಮಿಕಾ ರತ್ನಾಕರ್ ನಟಿಸಿದ್ದಾರೆ.

Multilingual actor Tarun Raj Arora says acting with actor Darshan is special.

Comments are closed.