jothe jotheyali serial : ಜೊತೆ ಜೊತೆಯಲ್ಲಿ ಧಾರವಾಹಿಯಲ್ಲಿ ಮತ್ತೊಂದು ಟ್ವಿಸ್ಟ್​ : ಆರ್ಯವರ್ಧನ್​ ಪಾತ್ರಕ್ಕೆ ಬಿತ್ತು ಕತ್ತರಿ

jothe jotheyali serial : ಇತ್ತಿಚೇಗಷ್ಟೆ ಜೊತೆ ಜೊತೆಯಲಿ ಧಾರವಾಹಿಯಿಂದ ನಟ ಅನಿರುದ್ಧ ಅವರನ್ನು ಹೊರಹಾಕಿರೋದು ಹಳೆ ಸುದ್ದಿಯಾದ್ರೆ, ಇದೀಗ ಮತ್ತೊಂದು ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಅನಿರುದ್ಧ ಅವರನ್ನು ಟೀಂ ನಿಂದ ಹೊರ ಹಾಕಿದ ನಂತರ ಆರ್ಯವರ್ಧನ್ ಪಾರ್ಟ್ ನ್ನು ಯಾರು ಮಾಡುತ್ತಾರೆ ಎಂಬ ಕುತೂಹಲ ಎಲ್ಲರಲ್ಲೂ ಇತ್ತು‌. ಆದ್ರೆ ಇದೀಗ ಅನಿರುದ್ಧ ಅವರನ್ನು ಬಿಟ್ಟು ಧಾರವಾಹಿಯನ್ನು ಮುಂದುವರಿಸಲಾಗಿದೆ‌. ಇಲ್ಲಿ ಕೇವಲ ಅನಿರುದ್ಧ ಮಾತ್ರವಲ್ಲ ಆರ್ಯವರ್ಧನ್ ಪಾತ್ರವಿಲ್ಲದೆಯೇ ಧಾರವಾಹಿ ನಡೆಸುತ್ತೇವೆ ಎಂಬ ಸೂಚನೆಯನ್ನು ನಿರ್ಮಾಪಕ ಆರೂರು ಜಗದೀಶ್ ನೀಡಿದ್ದಾರೆ.

ಅನಿರುದ್ಧ ಇಲ್ಲದೆ ಧಾರವಾಹಿ ಮುಂದುವರಿಯುತ್ತಾ, ಅನಿರುದ್ಧ ಇಲ್ಲದೇ ಸೀರಿಯಲ್ ನ್ನಯ ಜನ ನೋಡುತ್ತಾರಾ ಹೀಗೆ ಸಾಕಷ್ಟು ಪ್ರಶ್ನೆಗಳು ಎದುರಾಗಿದ್ದವು‌. ಕೆಲ ಮಂದಿಯಂತು ಸಾಮಾಜಿಕ ಜಾಲತಾಣದಲ್ಲಿ ಅನಿರುದ್ಧ ಇಲ್ಲದೇ ನಾವು ಜೊತೆ ಜೊತೆಯಲಿ ಧಾರವಾಹಿ ನೋಡುವುದಿಲ್ಲವೆಂದು ಪೋಸ್ಟ್ ಹಾಕಿಕೊಂಡಿದ್ದರು. ಇದೆಲ್ಲದರ ನಡುವೆ ಇದೀಗ ಧಾರವಾಹಿಯ ನಿರ್ಮಾಪಕರು ಅನಿರುದ್ಧ ಹಾಗೂ ಆರ್ಯವರ್ಧನ್ ಪಾತ್ರಕ್ಕೆ ಸವಾಲು ಹಾಕುವಂತ ಕೆಲಸ ಮಾಡಿದ್ದಾರೆ.

ನಿರ್ಮಾಪಕ ಆರೂರು ಜಗದೀಶ್ ಧಾರವಾಹಿ ಗೆ ಅನಿರುದ್ಧ ಅವರಿಗಿಂತ ಕಟೆಂಟೆ ಇಂಪಾರ್ಟೆಂಟ್ ಎಂದು ಹೇಳಿಕೆಯೊಂದನ್ನು ಕೊಟ್ಟಿದ್ದರು. ಕಥೆಯೇ ಧಾರವಾಹಿಯ ಹೀರೋ ಎಂಬುದನ್ನು ಮಾಧ್ಯಮಗಳ ಮುಂದೆ ಸ್ಪಷ್ಟಪಡಿಸಿದ್ದರು. ಈಗ ತಾವು ಹೇಳಿರುವ ಮಾತನ್ನು ಕಾರ್ಯರೂಪಕ್ಕೆ ತಂದಿದ್ದಾರೆ. ಅನಿರುದ್ಧ ಇಲ್ಲದೆಯೇ ಧಾರವಾಹಿಯನ್ನು ಮುಂದುವರೆಸಿದ್ದಾರೆ. ಈ ಮೂಲಕ ಕೋಳಿ‌ ಕೂಗದೆಯೇ ಬೆಳಗಾಗುತ್ತೆ ಎಂಬುದನ್ನು ಸಾಧಿಸಲು ಹೊರಟ್ಟಿದ್ದಾರೆ.

ಅನಿರುದ್ಧ ಅವರನ್ನು ತಂಡದಿಂದ ಕೈ ಬಿಟ್ಟ ಬಳಿಕ ಆರ್ಯವರ್ಧನ್ ಪಾತ್ರಕ್ಕಾಗಿ ಹಲವು ಕಲಾವಿದರನ್ನು ಹುಡುಕಲಾಯಿತು. ಆದ್ರೆ ಇದೀಗ ಕೊನೆಯ ಕ್ಷಣದಲ್ಲಿ ಆ ಪಾತ್ರವನ್ನು ಬಿಟ್ಟು ಹೊಸದೊಂದು ಪಾತ್ರವನ್ನು ಧಾರವಾಹಿ ತಂಡ ಸೃಷ್ಟಿ ಮಾಡಿದೆ‌‌. ಆ ಹೊಸ ಪಾತ್ರವನ್ನು ಹರೀಶ್ ರಾಹ್ ನಿರ್ವಹಿಸುತ್ತಿದ್ದಾರೆ. ಒಟ್ಟಿನಲ್ಲಿ ಈ ಎಲ್ಲಾ ಬೆಳವಣಿಗೆಗಳ ಬಳಿಕ ಜೊತೆ ಜೊತೆಯಲಿ ಧಾರವಾಹಿಯನ್ನು ನೋಡುಗ ಹೇಗೆ ಸ್ವೀಕರಿಸುತ್ತಾನೆ ಎಂಬುದನ್ನು ಕಾದುನೋಡಬೇಕಿದೆ.

ಇದನ್ನು ಓದಿ : Kichcha Sudeeps Special Postal Envelope :ಕಿಚ್ಚ ಸುದೀಪ್ ಹೆಸರಿನಲ್ಲಿ ವಿಶೇಷ ಅಂಚೆ ಲಕೋಟೆಯನ್ನು ಹೊರತರುತ್ತಿದೆ ಭಾರತೀಯ ಅಂಚೆ ಇಲಾಖೆ

ಇದನ್ನೂ ಓದಿ : Sonia Gandhi : ಕಾಂಗ್ರೆಸ್​ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ತಾಯಿ ವಿಧಿವಶ

one more twist in jothe jotheyali serial : serial team dropped aryavardhan charecter

Comments are closed.