Rachitha Ram : ಜ್ಯೂನಿಯರ್ಸ್ ಡ್ರಾಮಾ ನೋಡೋಕೆ ಬಂದ ರಚ್ಚು: ಸೆಟ್ ನಲ್ಲೇ ರಚಿತಾರಾಮ್ ಕಿಡ್ನಾಪ್

ಇತ್ತೀಚಿಗೆ ರಿಯಾಲಿಟಿ ಶೋಗಳು ಯಾವ ಸಿನಿಮಾಕ್ಕೂ ಕಡಿಮೆಯಿಲ್ಲದಷ್ಟು ಅದ್ದೂರಿಯಾಗಿ ಮೂಡಿಬರುತ್ತಿವೆ. ಕಿರುತೆರೆಯ ಶೋಗಳ ಪ್ರಮುಖ ಆಕರ್ಷಣೆ ಹಿರಿತೆರೆಯ ಸ್ಟಾರ್ ಗಳು. ಈ ಅದ್ದೂರಿ ರಿಯಾಲಿಟಿ ಶೋಗಳ ಸಾಲಿಗೆ ಝೀ ಕನ್ನಡ ವಾಹಿನಿಯ ಡ್ರಾಮಾ ಜ್ಯೂನಿಯರ್ (Drama Jounior ) ಕೂಡ ಸೇರ್ಪಡೆಗೊಂಡಿದೆ. ಸ್ಯಾಂಡಲ್ ವುಡ್ ನ ಗುಳಿಕೆನ್ನೆಯ ಬೆಡಗಿ ರಚಿತಾರಾಮ್ (Rachitha Ram), ರನ್ನು ಮಕ್ಕಳೇ ಕಿಡ್ನಾಪ್ ಮಾಡುವಂತೇ ಶೋಗೆ ಪ್ರೋಮೋ ಸಿದ್ದಪಡಿಸಲಾಗಿದ್ದು ಈ ಪ್ರೋಮೋ ಈಗ ಸೋಷಿಯಲ್ ಮೀಡಿಯಾ ದಲ್ಲಿ ಸಖತ್ ಸದ್ದು ಮಾಡ್ತಿದೆ. ಸ್ವತಃ ನಟಿ ರಚಿತಾರಾಮ್ ಈ ಪ್ರೋಮೋ ಶೇರ್ ಮಾಡಿಕೊಂಡು ಸಂಭ್ರಮಿಸಿದ್ದಾರೆ.

ಶೂಟಿಂಗ್​ ಗೆ ತೆರಳಲು ಸಿದ್ದವಾಗಿ ಕಾರಿನಲ್ಲಿ ಕೂತ ರಚಿತಾರಾಮ್ ರನ್ನು ಗನ್ ಪಾಯಿಂಟ್ ನಲ್ಲಿ ಕಿಡ್ನಾಪ್ ಮಾಡಿ. ಅಲ್ಲಿಂದ ಫ್ಲೈಟ್ ಏರಿದ ರಚಿತಾರಾಮ್ ಗೆ ಅಲ್ಲಿ ಹಿರಿಯ ನಟ ರವಿಚಂದ್ರನ್ ಕೂಡ ಕಾಣಸಿಗುತ್ತಾರೆ. ‘ಖ್ಯಾತ ನಟ ರವಿಚಂದ್ರನ್​ ಅಪಹರಣ’ ಎಂದು ಪತ್ರಿಕೆಯಲ್ಲಿ ಬಂದ ಸುದ್ದಿಯನ್ನು ಅವರು ಓದುತ್ತ ಕುಳಿತಿರುತ್ತಾರೆ. ‘ಇದೆಲ್ಲ ಇವನದ್ದೇ ಕೆಲಸ’ ಎಂದು ಮಾಸ್ಟರ್​ ಆನಂದ್​ ಕಡೆಗೆ ರವಿಚಂದ್ರನ್​ ಕೈ ತೋರಿಸುತ್ತಾರೆ. ‘ಇದರಲ್ಲಿ ನಂದೇನೂ ಇಲ್ಲ. ಎಲ್ಲಾ ಪ್ಲಾನ್​ ನಮ್​ ಬಾಸ್​ ಅವರದ್ದೇ’ ಅಂತ ಆನಂದ್​ ಜಾರಿಕೊಂಡಾಗ ಹಿರಿಯ ನಟಿ ಲಕ್ಷ್ಮೀ ಎಂಟ್ರಿ ಆಗುತ್ತದೆ.

ಹಿಂದಿನ ಸೀಸನ್ ಗಳಲ್ಲಿ ಮುಖ್ಯಮಂತ್ರಿ ಚಂದ್ರು, ಹಿರಿಯ ನಟಿ ಲಕ್ಷ್ಮೀ ಹಾಗೂ ಮಾಸ್ಟರ್ ಆನಂದ ಕಾರ್ಯನಿರ್ವಹಿಸಿದ್ದರು. ಆದರೆ ಈ ಸೀಸನ್ ನಲ್ಲಿ ನಟಿ ಲಕ್ಷ್ಮೀಯವರಿಗೆ ನಿರ್ಣಾಯಕರ ಸ್ಥಾನದಲ್ಲಿ ನಟಿ ರಚಿತಾರಾಮ್ ಹಾಗೂ ಹಿರಿಯ ನಟ ರವಿಚಂದ್ರನ್ ಸಾಥ್ ನೀಡಲಿದ್ದಾರಂತೆ. ಮಾರ್ಚ್ 19ರಿಂದ ‘ಡ್ರಾಮಾ ಜ್ಯೂನಿಯರ್ಸ್​ 4’ ಪ್ರಸಾರವಾಗಲಿದ್ದು, ಶನಿವಾರ ಮತ್ತು ಭಾನುವಾರ ರಾತ್ರಿ 7.30 ಬಿತ್ತರ ಆಗುವ ಈ ಶೋ ನೋಡಲು ವೀಕ್ಷಕರು ಕಾತುರರಾಗಿದ್ದಾರೆ. ಪ್ರೋಮೋ ನೋಡಿದ ಬಳಿಕ ವೀಕ್ಷಕರ ಕೌತುಕ ಹೆಚ್ಚಿದೆ. ಈ ಬಾರಿ ಮಕ್ಕಳ ಡ್ರಾಮಾ ಸಿಕ್ಕಾಪಟ್ಟೆ ಜೋರಾಗಿಯೇ ಇರುತ್ತದೆ ಎಂಬುದಕ್ಕೆ ಈ ಪ್ರೋಮೋ ಸಾಕ್ಷಿ ಒದಗಿಸಿದೆ.

ಕಳೆದ ಮೂರು ಸೀಸನ್ ಗಳಲ್ಲಿ ಸ್ಪರ್ಧಿಗಳಾಗಿದ್ದ ಮಿಂಚಿದ ಹುಡುಗರ ಪ್ರತಿಭೆಗೆ ಕರುನಾಡೇ ಬೆರಗಾಗಿತ್ತು. ಈ ಸೀಸನ್ ಮುಗಿಯುತ್ತಿದ್ದಂತೆ ಹಲವು ಡ್ರಾಮಾ ಜ್ಯೂನಿಯರ್ ಪ್ರತಿಭೆಗಳು ಸಿನಿಮಾ ಹಾಗೂ ಸೀರಿಯಲ್ ಗಳಲ್ಲಿ ಅವಕಾಶ ಪಡೆದುಕೊಂಡಿದ್ದರು.

ಇದನ್ನೂ ಓದಿ : ಪುನೀತ್ ಹಾಡಿಗೆ ಸುದೀಪ್‌ಮೆಚ್ಚುಗೆ : ನೆಚ್ಚಿನ ಹೀರೋ ಬಗ್ಗೆ ಕಿಚ್ಚ ಏನಂದ್ರು ಗೊತ್ತಾ

ಇದನ್ನೂ ಓದಿ : ತಂದೆ ಸಾಲಕ್ಕೆ ಪುತ್ರಿ ಹೊಣೆ : ಸಂಕಷ್ಟಕ್ಕೆ ಸಿಲುಕಿದ ಬಾಲಿವುಡ್ ಬೆಡಗಿ ಶಿಲ್ಪಾ ಶೆಟ್ಟಿ

( Rachitha Ram kidnapped after Ravichandran in Z kannada Drama Júnior)

Comments are closed.