ಇತ್ತೀಚಿಗೆ ರಿಯಾಲಿಟಿ ಶೋಗಳು ಯಾವ ಸಿನಿಮಾಕ್ಕೂ ಕಡಿಮೆಯಿಲ್ಲದಷ್ಟು ಅದ್ದೂರಿಯಾಗಿ ಮೂಡಿಬರುತ್ತಿವೆ. ಕಿರುತೆರೆಯ ಶೋಗಳ ಪ್ರಮುಖ ಆಕರ್ಷಣೆ ಹಿರಿತೆರೆಯ ಸ್ಟಾರ್ ಗಳು. ಈ ಅದ್ದೂರಿ ರಿಯಾಲಿಟಿ ಶೋಗಳ ಸಾಲಿಗೆ ಝೀ ಕನ್ನಡ ವಾಹಿನಿಯ ಡ್ರಾಮಾ ಜ್ಯೂನಿಯರ್ (Drama Jounior ) ಕೂಡ ಸೇರ್ಪಡೆಗೊಂಡಿದೆ. ಸ್ಯಾಂಡಲ್ ವುಡ್ ನ ಗುಳಿಕೆನ್ನೆಯ ಬೆಡಗಿ ರಚಿತಾರಾಮ್ (Rachitha Ram), ರನ್ನು ಮಕ್ಕಳೇ ಕಿಡ್ನಾಪ್ ಮಾಡುವಂತೇ ಶೋಗೆ ಪ್ರೋಮೋ ಸಿದ್ದಪಡಿಸಲಾಗಿದ್ದು ಈ ಪ್ರೋಮೋ ಈಗ ಸೋಷಿಯಲ್ ಮೀಡಿಯಾ ದಲ್ಲಿ ಸಖತ್ ಸದ್ದು ಮಾಡ್ತಿದೆ. ಸ್ವತಃ ನಟಿ ರಚಿತಾರಾಮ್ ಈ ಪ್ರೋಮೋ ಶೇರ್ ಮಾಡಿಕೊಂಡು ಸಂಭ್ರಮಿಸಿದ್ದಾರೆ.
ಶೂಟಿಂಗ್ ಗೆ ತೆರಳಲು ಸಿದ್ದವಾಗಿ ಕಾರಿನಲ್ಲಿ ಕೂತ ರಚಿತಾರಾಮ್ ರನ್ನು ಗನ್ ಪಾಯಿಂಟ್ ನಲ್ಲಿ ಕಿಡ್ನಾಪ್ ಮಾಡಿ. ಅಲ್ಲಿಂದ ಫ್ಲೈಟ್ ಏರಿದ ರಚಿತಾರಾಮ್ ಗೆ ಅಲ್ಲಿ ಹಿರಿಯ ನಟ ರವಿಚಂದ್ರನ್ ಕೂಡ ಕಾಣಸಿಗುತ್ತಾರೆ. ‘ಖ್ಯಾತ ನಟ ರವಿಚಂದ್ರನ್ ಅಪಹರಣ’ ಎಂದು ಪತ್ರಿಕೆಯಲ್ಲಿ ಬಂದ ಸುದ್ದಿಯನ್ನು ಅವರು ಓದುತ್ತ ಕುಳಿತಿರುತ್ತಾರೆ. ‘ಇದೆಲ್ಲ ಇವನದ್ದೇ ಕೆಲಸ’ ಎಂದು ಮಾಸ್ಟರ್ ಆನಂದ್ ಕಡೆಗೆ ರವಿಚಂದ್ರನ್ ಕೈ ತೋರಿಸುತ್ತಾರೆ. ‘ಇದರಲ್ಲಿ ನಂದೇನೂ ಇಲ್ಲ. ಎಲ್ಲಾ ಪ್ಲಾನ್ ನಮ್ ಬಾಸ್ ಅವರದ್ದೇ’ ಅಂತ ಆನಂದ್ ಜಾರಿಕೊಂಡಾಗ ಹಿರಿಯ ನಟಿ ಲಕ್ಷ್ಮೀ ಎಂಟ್ರಿ ಆಗುತ್ತದೆ.
ಹಿಂದಿನ ಸೀಸನ್ ಗಳಲ್ಲಿ ಮುಖ್ಯಮಂತ್ರಿ ಚಂದ್ರು, ಹಿರಿಯ ನಟಿ ಲಕ್ಷ್ಮೀ ಹಾಗೂ ಮಾಸ್ಟರ್ ಆನಂದ ಕಾರ್ಯನಿರ್ವಹಿಸಿದ್ದರು. ಆದರೆ ಈ ಸೀಸನ್ ನಲ್ಲಿ ನಟಿ ಲಕ್ಷ್ಮೀಯವರಿಗೆ ನಿರ್ಣಾಯಕರ ಸ್ಥಾನದಲ್ಲಿ ನಟಿ ರಚಿತಾರಾಮ್ ಹಾಗೂ ಹಿರಿಯ ನಟ ರವಿಚಂದ್ರನ್ ಸಾಥ್ ನೀಡಲಿದ್ದಾರಂತೆ. ಮಾರ್ಚ್ 19ರಿಂದ ‘ಡ್ರಾಮಾ ಜ್ಯೂನಿಯರ್ಸ್ 4’ ಪ್ರಸಾರವಾಗಲಿದ್ದು, ಶನಿವಾರ ಮತ್ತು ಭಾನುವಾರ ರಾತ್ರಿ 7.30 ಬಿತ್ತರ ಆಗುವ ಈ ಶೋ ನೋಡಲು ವೀಕ್ಷಕರು ಕಾತುರರಾಗಿದ್ದಾರೆ. ಪ್ರೋಮೋ ನೋಡಿದ ಬಳಿಕ ವೀಕ್ಷಕರ ಕೌತುಕ ಹೆಚ್ಚಿದೆ. ಈ ಬಾರಿ ಮಕ್ಕಳ ಡ್ರಾಮಾ ಸಿಕ್ಕಾಪಟ್ಟೆ ಜೋರಾಗಿಯೇ ಇರುತ್ತದೆ ಎಂಬುದಕ್ಕೆ ಈ ಪ್ರೋಮೋ ಸಾಕ್ಷಿ ಒದಗಿಸಿದೆ.
ಕಳೆದ ಮೂರು ಸೀಸನ್ ಗಳಲ್ಲಿ ಸ್ಪರ್ಧಿಗಳಾಗಿದ್ದ ಮಿಂಚಿದ ಹುಡುಗರ ಪ್ರತಿಭೆಗೆ ಕರುನಾಡೇ ಬೆರಗಾಗಿತ್ತು. ಈ ಸೀಸನ್ ಮುಗಿಯುತ್ತಿದ್ದಂತೆ ಹಲವು ಡ್ರಾಮಾ ಜ್ಯೂನಿಯರ್ ಪ್ರತಿಭೆಗಳು ಸಿನಿಮಾ ಹಾಗೂ ಸೀರಿಯಲ್ ಗಳಲ್ಲಿ ಅವಕಾಶ ಪಡೆದುಕೊಂಡಿದ್ದರು.
ಇದನ್ನೂ ಓದಿ : ಪುನೀತ್ ಹಾಡಿಗೆ ಸುದೀಪ್ಮೆಚ್ಚುಗೆ : ನೆಚ್ಚಿನ ಹೀರೋ ಬಗ್ಗೆ ಕಿಚ್ಚ ಏನಂದ್ರು ಗೊತ್ತಾ
ಇದನ್ನೂ ಓದಿ : ತಂದೆ ಸಾಲಕ್ಕೆ ಪುತ್ರಿ ಹೊಣೆ : ಸಂಕಷ್ಟಕ್ಕೆ ಸಿಲುಕಿದ ಬಾಲಿವುಡ್ ಬೆಡಗಿ ಶಿಲ್ಪಾ ಶೆಟ್ಟಿ
( Rachitha Ram kidnapped after Ravichandran in Z kannada Drama Júnior)
Comments are closed.