ರಾಮಾಚಾರಿ. ಈ ಹೆಸರು ಕೇಳಿದಾಕ್ಷಣ ಎಲ್ಲರಿಗೂ ಸಾಹಸ ಸಿಂಹ ವಿಷ್ಣುವರ್ಧನ್ ನೆನೆಪಿಗೆ ಬರ್ತಾರೆ. ಕನ್ನಡದ ಸೂಪರ್ ಹಿಟ್ ಸಿನಿಮಾ ನಾಗರಹಾವು ಸಿನಿಮಾದ ರಾಮಚಾರಿಯ ಪಾತ್ರ ಕನ್ನಡ ಸಿನಿ ಪ್ರೇಕ್ಷಕರ ಮನದಲ್ಲಿ ಅಚ್ಚಳಿಯದೇ ಉಳಿದುಕೊಂಡಿದೆ. ಇದೀಗ ಕರಾವಳಿಯ ಯುವಕರ ತಂಡವೊಂದು ರಾಮಾಚಾರಿ ವೆಡ್ಸ್ ಮಾರ್ಗರೆಟ್ಸ್ ಕಥೆ ಹೇಳೋದಕ್ಕೆ ರೆಡಿಯಾಗಿದೆ.
ವಿಷ್ಣುವರ್ಧನ್ ನಂತರದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್, ರಾಕಿಂಗ್ ಸ್ಟಾರ್ ಯಶ್ ಕೂಡ ರಾಮಾಚಾರಿ ಹೆಸರಲ್ಲಿ ಸಕ್ಸಸ್ ಕಂಡಿದ್ದಾರೆ. ಇದೀಗ ಕುಂದಾಪುರದ ಕಲತ್ವ ಮತ್ತು ಸಿರಿ ತಂಡದ ” ರಾಮಾಚಾರಿ ವೆಡ್ಸ್ ಮಾರ್ಗರೆಟ್ಸ್ ಅನ್ನೋ ತುಳು ಮತ್ತು ಕನ್ನಡ ಭಾಷೆಯಲ್ಲಿ ಆಲ್ಬಮ್ ಸಾಂಗ್ವೊಂದನ್ನು ಸಿದ್ದ ಮಾಡ್ತಿದೆ. ವನಸ್ತಾ ಆಗ್ರೋ ಫುಡ್ಸ್ ರವರ ಬಂಡವಾಳ ಹೂಡಿದ್ದು, ಟೀಮ್ ಕಲತ್ವ ಹಾಗೂ ಸಿರಿ ತಂಡದ ಕನ್ನಡ, ತುಳು ಭಾಷೆಯಲ್ಲಿ ಆಲ್ಬಮ್ ಗೀತೆಯೊಂದನ್ನು ಸಿದ್ದಪಡಿಸಿದ್ದು ರಾಮಾಚಾರಿ ವೆಡ್ಸ್ ಮಾರ್ಗರೆಟ್ಸ್ ಬಿಡುಗಡೆಗೆ ಸಜ್ಜಾಗಿದೆ.
ಜೀ ಕನ್ನಡ ವಾಹಿನಿಯ ಹೆಸರಾಂತ ರಿಯಾಲಿಟಿ ಶೋ ಡ್ರಾಮಾ ಜ್ಯುನಿಯರ್ಸ್ ಹಾಗೂ ಡಿಕೆಡಿ ಡ್ಯಾನ್ಸ್ ಶೋ ಖ್ಯಾತಿಯ ಸೂರಜ್, ಶ್ರಾವ್ಯ ಮರವಂತೆ ಜೊತೆಗೆ ಅಂತಾರಾಷ್ಟ್ರೀಯ ಖ್ಯಾತ ಯೋಗಪಟು ತನ್ವಿತ ವಿ. ಕುಂದಾಪುರ ಹಾಡಿನ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಶಿವು ಕುಂದಾಪುರ ರವರ ನಿರ್ದೇಶನ ಹಾಗೂ ಮನೀಶ್ ಮೊಯ್ಲಿ ಸಹ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಹಾಡು ಏಕಕಾಲದಲ್ಲಿ ಕನ್ನಡ ಹಾಗೂ ತುಳು ಎರಡು ಭಾಷೆಯಲ್ಲಿ ಬಿಡುಗಡೆಯಾಗಲಿದೆ.
ಇದನ್ನೂ ಓದಿ : ಪೋಟೋಶೂಟ್ ನಲ್ಲಿ ಮಿಂಚಿದ ಬಿಗ್ ಬಾಸ್ ಚೆಲುವೆ: ವೈಷ್ಣವಿ ನೋಡಿ ಬೆರಗಾದ ಅಭಿಮಾನಿಗಳು!
ಮನೀಶ್ ಮೊಯ್ಲಿ ಸಾಹಿತ್ಯದಲ್ಲಿ ಮೂಡಿಬಂದಿರುವ ಕನ್ನಡ ಹಾಡಿಗೆ ಶೀತಲ್ ಎಸ್ ಎಂ ಹಾಗೂ ಶ್ರೀಧರ್ ಕರ್ಕೇರ ಸಾಹಿತ್ಯದ ತುಳು ಹಾಡಿಗೆ ಕೆಪಿ ಮಿಲನ್, ರೋಷನಿ ಪೂಜಾರಿ ಧ್ವನಿ ನೀಡಿದ್ದಾರೆ. ಒಲವೇ ಖ್ಯಾತಿಯ ಸನತ್ ಉಪ್ಪುಂದರವರ ಛಾಯಾಗ್ರಹಣವಿದೆ. ಇನ್ನು ನಿತೀಶ್ ಭಾರಧ್ವಾಜ್ ರವರು ಪ್ರೊಡಕ್ಷನ್ ಮ್ಯಾನೇಜರ್ ಆಗಿದ್ದು, ಪ್ರಚಾರ ಕಲೆಯಲ್ಲಿ ಶ್ರೀಶ ಉಪ್ಪುಂದ ಹಾಗೂ ಹಂಚಿಕೆ ವಿಭಾಗದಲ್ಲಿ ರವಿರಾಜ್ ಪೂಜಾರಿ, ಹರ್ಷಿತ್ ತೆಕ್ಕಟ್ಟೆ ಕಾರ್ಯನಿರ್ವಹಿಸಿದ್ದಾರೆ. ದುಬಾರಿ ವೆಚ್ಚದಲ್ಲಿ ಸೆಟ್ ನಿರ್ಮಿಸಿ ಚಿತ್ರೀಕರಿಸಿರುವುದು ಈ ಆಲ್ಬಮ್ ಹಾಡಿನ ವಿಶೇಷ. ಈ ಹಾಡು ಅತೀ ಶೀಘ್ರದಲ್ಲೇ ಟೀಮ್ ಕಲತ್ವ ಯೌಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಗೊಳ್ಳಲಿದೆ.
ಇದನ್ನೂ ಓದಿ : ಮನೆಗೆ ಬಂದ್ರು ವಿಶೇಷ ಅತಿಥಿಗಳು: ಮೇಘಾ ಶೆಟ್ಟಿ ಹಂಚಿಕೊಂಡ್ರು ಖುಷಿ ಸುದ್ದಿ!
ಇದನ್ನೂ ಓದಿ : ತೆರೆಗೆ ಬರಲಿದೆ ನಟಿ ಭಾರತಿ ಅಂತರಾಳ…! ನಟ ಅನಿರುದ್ಧ ರಿಲೀಸ್ ಮಾಡಿದ್ರು ಟ್ರೇಲರ್…!!
Comments are closed.