ಪ್ರಣೀತಾ ಬಳಿಕ ಅಮೂಲ್ಯ ಸರದಿ….! ರಾಮ ಮಂದಿರಕ್ಕೆ ದೇಣಿಗೆ ನೀಡಿದ ನಟಿ…!!

ಸ್ಯಾಂಡಲ್ ವುಡ್,ಬಾಲಿವುಡ್, ಟಾಲಿವುಡ್ ಹೀಗೆ ಎಲ್ಲ ಸಿನಿಮಾರಂಗದಲ್ಲೂ ರಾಮ ಮಂದಿರ ನಿರ್ಮಾಣಕ್ಕೆ ಸಖತ್ ರೆಸ್ಪಾನ್ಸ್ ಸಿಗ್ತಿದ್ದು ನಟ-ನಟಿಯರು ದೇಣಿಗೆ ನೀಡಿ ಜನರಿಗೆ ಮಾದರಿಯಾಗುತ್ತಿದ್ದಾರೆ.

ಬಾಲಿವುಡ್ ನ ಅಕ್ಷಯ್ ಕುಮಾರ್, ಸ್ಯಾಂಡಲ್ ವುಡ್ ನ ಪ್ರಣೀತಾ ಹೀಗೆ ಸಾಕಷ್ಟು ನಟ-ನಟಿಯರು ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡುತ್ತಿದ್ದಾರೆ. ಈಗ ಚೆಲುವಿನ ಚಿತ್ತಾರದ ಬೆಡಗಿ ಅಮೂಲ್ಯ ಕೂಡ ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ‌ನೀಡಿದ್ದಾರೆ.

ನಟಿ ಅಮೂಲ್ಯ ಹಾಗೂ ಪತಿ ಜಗದೀಶ್ ಒಟ್ಟಿಗೆ ೧.೫ ಲಕ್ಷ ರೂಪಾಯಿ ದೇಣಿಗೆ ನೀಡಿದ್ದು, ಇದಲ್ಲದೇ ಅಮೂಲ್ಯ ಮಾವ ಹಾಗೂ ಮಾಜಿ ಕಾರ್ಪೋರೇಟರ್ ರಾಮಚಂದ್ರ್ ಅವರ ಹೆಸರಿನಲ್ಲಿ ೧ ಲಕ್ಷ ರೂಪಾಯಿ ದೇಣಿಗೆ ನೀಡಿದ್ದಾರೆ.

ಸಹಿಮಾಡಿದ ಚೆಕ್ ಪೋಟೋವನ್ನು ಹಂಚಿಕೊಂಡಿರುವ ಅಮೂಲ್ಯ ಹಾಗೂ ಜಗದೀಶ್ ಅಭಿಮಾನಿಗಳಿಗೂ ನೀವು ಕೈಲಾದಷ್ಟು ಧನಸಹಾಯ ಮಾಡಿ ರಾಮಮಂದಿರ ನಿರ್ಮಾಣದ ಕಾರ್ಯದಲ್ಲಿ ಪಾಲ್ಗೊಳ್ಳಿ ಎಂದು ಮನವಿ ಮಾಡಿದ್ದಾರೆ.

ಪ್ರತಿವರ್ಷ ಹುಟ್ಟುಹಬ್ಬಕ್ಕೆ ಖರ್ಚು ಮಾಡುವ ಹಣವನ್ನು ಕಿರುಗಾಣಿಕೆಯನ್ನು ಶ್ರೀರಾಮ ನಿಗೆ ಸಮರ್ಪಿಸಿದ್ದೇವೆ. ಇದಕ್ಕೆ ನಮಗೆ ಖುಷಿ ಇದೆ. #Nidhisamarapana4RamMandir ಕ್ಯಾಂಪೇನ್ ಸಪೋರ್ಟ್ ಮಾಡಿ ಎಂದು ಅಮೂಲ್ಯ ಮನವಿ ‌ಮಾಡಿದ್ದಾರೆ.

Comments are closed.