ಮಂತ್ರವಾದಿಯ ಮಾತು ಕೇಳಿ ತನ್ನಿಬ್ಬರು ಹೆಣ್ಣು ಮಕ್ಕಳನ್ನು ಬೆತ್ತಲೆಗೊಳಿಸಿ ಹತ್ಯೆಗೈದ ಉಪನ್ಯಾಸಕಿ…!

ಚಿತ್ತೂರು : ಮಂತ್ರವಾದಿಯೋರ್ವನ ಮಾತು ಕೇಳಿ ಕಾಲೇಜಿನ ಉಪನ್ಯಾಸಕಿಯೋರ್ವರು ತನ್ನಿಬ್ಬರು ಹೆಣ್ಣು ಮಕ್ಕಳನ್ನು ಬೆತ್ತಲೆಗೊಳಿಸಿ ನಂತರ ಡೆಂಬೆಲ್ಸ್ ನಿಂದ ಹೊಡೆದು ಕೊಲೆ ಮಾಡಿರುವ ಘಟನೆ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಮದನಪಲ್ಲಿ ಎಂಬಲ್ಲಿ ನಡೆದಿದೆ.

ಅಲೆಕ್ಯ ( 27 ವರ್ಷ) ಹಾಗೂ ಸಾಯಿ ದಿವ್ಯ (22 ವರ್ಷ) ಎಂಬವರೇ ಮೃತ ದುರ್ದೈವಿಗಳು. ಅಲೆಕ್ಯ ಮಧ್ಯಪ್ರದೇಶದ ಭೋಪಾಲ್ ನಲ್ಲಿ ಸ್ನಾತಕೋತ್ತರ ವಿದ್ಯಾಭ್ಯಾಸವನ್ನು ಮಾಡುತ್ತಿದ್ರೆ, ಸಾಯಿ ದಿವ್ಯ ಬಿಬಿಎಂ ಕಲಿಯುತ್ತಿದ್ದು, ಎಆರ್ ರೆಹಮಾನ್ ಮ್ಯೂಸಿಕ್ ಅಕಾಡೆಮಿಯ ವಿದ್ಯಾರ್ಥಿನಿಯಾಗಿದ್ದಾಳೆ. ತಂದೆ ಪುರುಷೋತ್ತ್ ನಾಯ್ಡು ಹಾಗೂ ಪದ್ಮಜಾ ಉಪನ್ಯಾಸಕರು. ಪುರುಷೋತ್ತಮ್ ನಾಯ್ಡು ಕಾಲೇಜೊಂದರಲ್ಲಿ ಪ್ರಾಂಶುಪಾಲರಾಗಿದ್ರೆ, ಪದ್ಮಜಾ ಮದನಪಲ್ಲಿಯ ಖಾಸಗಿ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದರು.

ದಂಪತಿಗಳಿಬ್ಬರೂ ಮೂಡನಂಬಿಕೆಯ ದಾಸರಾಗಿದ್ದು, ಮನೆಯಲ್ಲಿ ನಿತ್ಯವೂ ಪೂಜೆ ನಡೆಯುತ್ತಿತ್ತು. ಮಂತ್ರವಾದಿಯೋರ್ವ ಇಬ್ಬರೂ ಮಕ್ಕಳನ್ನು ಬೆತ್ತಲೆಗೊಳಿಸಿ ಹತ್ಯೆ ಮಾಡಿದ್ರೆ ಅವರು ಮತ್ತೆ ಹುಟ್ಟು ಬರುತ್ತಾರೆ ಅಂತಾ ನಂಬಿಸಿದ್ದ. ಉಪನ್ಯಾಸಕಿಯಾಗಿದ್ದರೂ ಕೂಡ ಮಂತ್ರವಾದಿಯ ಮಾತಿಗೆ ಜೋತುಬಿದ್ದ ಪಾಪಿ ತಾಯಿ ಪದ್ಮಜಾ ತನ್ನಿಬ್ಬರು ಮಕ್ಕಳನ್ನು ಬೆತ್ತಲೆಗೊಳಿಸಿದ್ದಾಳೆ. ನಂತರ ಡೆಂಬೆಲ್ಸ್ ನಿಂದ ಹೊಡೆದು ಹತ್ಯೆಗೈದಿದ್ದಾಳೆ.

ಘಟನೆ ನಡೆಯುತ್ತಿದ್ದಂತೆಯೇ ಮಂತ್ರವಾದಿ ಸ್ಥಳದಿಂದ ಪರಾರಿಯಾಗಿದ್ದಾನೆ. ಪ್ರಕರಣದ ದಾಖಲು ಮಾಡಿಕೊಂಡಿರುವ ಮದನಪಲ್ಲಿ ಠಾಣೆಯ ಪೊಲೀಸರು ಆರೋಪಿ ಪದ್ಮಜಾಳನ್ನು ಬಂಧಿಸಿದ್ದು, ಮಕ್ಕಳ ಶವಗಳನ್ನು ಮದನಪಲ್ಲಿ ಸರಕಾರಿ ಆಸ್ಪತ್ರೆಗೆ ಸಾಗಿಸಿ ಮರಣೋತ್ತರ ಕಾರ್ಯವನ್ನು ನಡೆಸಲಾಗುತ್ತಿದೆ. ಇನ್ನು ತಂದೆ ತಾಯಿ ಇಬ್ಬರೂ ಕೂಡ ಮಾನಸಿಕವಾಗಿ ಅಸ್ವಸ್ಥರಾಗಿದ್ದರು ಅನ್ನೋ ಮಾಹಿತಿ ಲಭ್ಯವಾಗಿದ್ದು, ಪೊಲೀಸರು ಈ ನಿಟ್ಟಿನಲ್ಲಿ ತನಿಖೆ ಮುಂದುವರಿಸಿದ್ದಾರೆ.

Comments are closed.