ನಟ ದರ್ಶನ್ ತೂಗುದೀಪ ನಟನೆಯ ರಾಬರ್ಟ್ ಸಿನಿಮಾಕ್ಕೆ 2ನೇ ವರ್ಷದ ಸಂಭ್ರಮ


ಸ್ಯಾಂಡಲ್‌ವುಡ್‌ ಚಾಲೆಂಚಿಂಗ್‌ ಸ್ಟಾರ್‌ ದರ್ಶನ್‌ ಹಾಗೂ ನಿರ್ದೇಶಕ ತರುಣ್‌ ಸುಧೀರ್‌ ಕಾಂಬಿನೇಷನ್‌ “ರಾಬರ್ಟ್‌” ಸಿನಿಮಾ (Robert Movie) ತೆರೆ ಕಂಡು ಎರಡು ವರ್ಷವಾಗಿದೆ. ಎರಡು ವರ್ಷ ಕಳೆದರೂ ಈ ಸಿನಿಮಾದ ಬಗ್ಗೆ ಸಿನಿಪ್ರೇಕ್ಷಕರಲ್ಲಿ ಮನದಲ್ಲಿ ವಿಶಿಷ್ಟ ರೀತಿಯ ಅಭಿಮಾನ ಇರುವುದಂತೂ ಸತ್ಯ. ಹೀಗಾಗಿ ನಿರ್ದೇಶಕ ತರುಣ್‌ ಸುಧೀರ್‌ ಈ ಸಂಭ್ರಮವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ನಿರ್ದೇಶಕ ತರುಣ್‌ ಸುಧೀರ್‌ ತಮ್ಮ ಟ್ವೀಟರ್‌ ಖಾತೆಯಲ್ಲಿ, “ರಾಬರ್ಟ್ ಸಿನಿಮಾ ತೆರೆಗೆ ಬಂದು ಇಂದಿಗೆ 2 ವರ್ಷ. ಈ ಸಿನಿಮಾಕ್ಕೆ ಈ ದಿನಕ್ಕೂ ಸಿಗುತ್ತಿರುವ ನಿಮ್ಮ ಪ್ರೀತಿ ಬೆಂಬಲಕ್ಕೆ ನಮ್ಮ ತಂಡ ಸದಾ ಆಭಾರಿ. ನಾವು ರಾಬರ್ಟ್‌ನ ತಯಾರಿಕೆಯನ್ನು ಪ್ರಾರಂಭಿಸಿದಾಗಿನಿಂದ ಇದು ಅತ್ಯಂತ ರೋಮಾಂಚಕಾರಿ ಪ್ರಯಾಣವಾಗಿದೆ. ಇಲ್ಲಿಯವರೆಗೆ ನಮ್ಮ ಕಡೆಗೆ ಸುರಿಯುತ್ತಿರುವ ಪ್ರಶಂಸೆಗಳು ಮತ್ತು ಪ್ರೀತಿ ಅಸಂಖ್ಯಾತವಾಗಿದೆ! 2 ವರ್ಷಗಳ ರಾಬರ್ಟ್, ಮತ್ತು ನಾನು ಹೇಳಬೇಕಾಗಿರುವುದು ಅದ್ಭುತ ಬೆಂಬಲಿಗರಿಗೆ ಧನ್ಯವಾದಗಳು. ಎಲ್ಲವನ್ನೂ ನೆರವೇರಿಸಿದ ಡಿ ಬಾಸ್‌ ದರ್ಶನ್ ಮತ್ತು umap30071 ಸರ್ ಅವರಿಗೆ ವಿಶೇಷ ಧನ್ಯವಾದಗಳು” ಎಂದು ಫೋಸ್ಟ್‌ ಮಾಡಿದ್ದಾರೆ.

ಇದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 53 ನೇ ಸಿನಿಮಾವಾಗಿದ್ದು ಚೌಕ ಖ್ಯಾತಿಯ ನಿರ್ದೇಶಕ ತರುಣ ಸುಧೀರ್ ನಿರ್ದೇಶಿಸಿದ್ದಾರೆ. ಈ ಸಿನಿಮಾದ ನಾಯಕ ರಾಘವ್ (ದರ್ಶನ್) ಉತ್ತರ ಪ್ರದೇಶದ ಲಕ್ನೋದಲ್ಲಿ ಅಡುಗೆ ಭಟ್ಟನಾಗಿ ವಾಸಿಸುತ್ತಿರುತ್ತಾನೆ. ಯಾರ ತಂಟೆಗೂ ಹೋಗದ, ಸಿಟ್ಟು ಮಾಡಿಕೊಳ್ಳದ ಮುದ್ದಾದ ಮಗನಿಗೂ ಅಹಿಂಸೆ ಹೇಳಿಕೊಟ್ಟು ಸಾತ್ವಿಕವಾಗಿ ಬದುಕುವ ಪ್ರಯತ್ನದಲ್ಲಿರುತ್ತಾನೆ. ಹೆಬ್ಬುಲಿ ಉಮಾಪತಿ ಶ್ರೀನಿವಾಸ ಸಿನಿಮಾಕ್ಕೆ ಬಂಡವಾಳ ಹೂಡಿದ್ದಾರೆ.

ಸಿನಿಮಾದ ಡೈಲಾಗ್‌ಗಳಿಗೆ ವಿಶೇಷ ಒತ್ತುಕೊಟ್ಟಿರುವ ತರುಣ್, ಕೆಜಿಎಫ್ ಖ್ಯಾತಿ ಚಂದ್ರಮೌಳಿ ಮತ್ತು ಅಮ್ಮಾ ಐ ಲವ್ ಯು ಖ್ಯಾತಿ ರಾಜಶೇಖರ್ ಕೆ.ಎಲ್ ರಿಂದ ಡೈಲಾಗ್ ಬರೆಸಿದ್ದಾರೆ. ಅರ್ಜುನ ಜನ್ಯ ಸಿನಿಮಾಕ್ಕೆ ಸಂಗೀತ ನೀಡಿದ್ದು, ಚಕ್ರವರ್ತಿ ಮತ್ತು ತಾರಕ್ ಸಿನಿಮಾದ ನಂತರ ಮೂರನೇ ಬಾರಿಗೆ ದರ್ಶನ್ ಸಿನಿಮಾಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಸಿನಿಮಾಕ್ಕೆ ನಾಯಕಿಯಾಗಿ ಮಾಡೆಲ್ ಕಮ್ ನಟಿ ಆಶಾ ಭಟ್ ನಟಿಸಿದ್ದಾರೆ. ಇನ್ನು ಈ ಸಿನಿಮಾದಲ್ಲಿ ದರ್ಶನ್, ಆಶಾ ಭಟ್, ಸೋನಾಲ್ ಮೊಂಟೇರಿಯೋ, ಐಶ್ವರ್ಯ ಪ್ರಸಾದ್, ತೇಜಸ್ವಿನಿ, ವಿನೋದ್ ಪ್ರಭಾಕರ್, ಜಗಪತಿ ಬಾಬು, ದೇವರಾಜ್, ಚಿಕ್ಕಣ್ಣ ಜೇಸನ್ ಡಿಸೌಜಾ ಬಹುತಾರಾಗಣ ಅಭಿನಯಿಸಿದ್ದಾರೆ.

ಇದನ್ನೂ ಓದಿ : ನಟ ದರ್ಶನ ಅಭಿನಯದ “ರಾಜ ವೀರ ಮದಕರಿ ನಾಯಕ” ಸಿನಿಮಾ ಬಗ್ಗೆ ಬಿಗ್‌ ಅಪ್‌ಡೇಟ್‌ ನೀಡಿದ ನಿರ್ದೇಶಕ ದುನಿಯಾ ಸೂರಿ

ಇದನ್ನೂ ಓದಿ : ಉಡುಪಿ ಕೃಷ್ಣ ಮಠದ ಕುರಿತು ಮಿಥುನ್‌ ರೈ ವಿವಾದತ್ಮಕ ಹೇಳಿಕೆ : ಟ್ವಿಟರ್‌ನಲ್ಲಿ ಕಿಡಿಕಾರಿದ ನಟ ರಕ್ಷಿತ್‌ ಶೆಟ್ಟಿ

“ಕಾಟೇರ” ಸಿನಿಮಾದಲ್ಲಿ ನಾಯಕಿಯಾಗಿ ಮಾಲಾಶ್ರೀ ಪುತ್ರಿ ರಾಧನಾ ರಾಮ್ ನಟಿಸುತ್ತಿದ್ದಾರೆ. ಈಗಾಗಲೇ ಎರಡು ಶೆಡ್ಯೂಲ್ ಶೂಟಿಂಗ್ ಕೂಡ ಮುಗಿದಿದೆ. ‘ರಾಬರ್ಟ್’ ಸಿನಿಮಾದಲ್ಲಿ ನಟ ದರ್ಶನ್ ಬಹಳ ವಿಭಿನ್ನವಾಗಿ ತೋರಿಸಿ ಗೆದ್ದಿದ್ದ ತರುಣ್ ಮತ್ತೊಮ್ಮೆ ಅದೇ ಪ್ರಯತ್ನ ಮಾಡುತ್ತಿದ್ದಾರೆ. “ಹಿಂದಿರೋವ್ರಿಗೆ ದಾರಿ, ಮುಂದಿರೋವ್ನದ್ದು ಜವಾಬ್ದಾರಿ” ಎನ್ನುವ ಟ್ಯಾಗ್‌ಲೈನ್ ಕೂಡ ಇದೆ. ತನ್ನ ಊರಿನ ಜನರಿಗಾಗಿ ಹೋರಾಡುವ ನಾಯಕನಾಗಿ ದರ್ಶನ್ ಸಿನಿಮಾದಲ್ಲಿ ಕಾಣಿಸಿಕೊಂಡಿರೋದು ಗೊತ್ತಾಗುತ್ತಿದೆ. ವರ್ಷಾಂತ್ಯಕ್ಕೆ ಸಿನಿಮಾ ತೆರೆಗೆ ಬರುವ ನಿರೀಕ್ಷೆ ಇದೆ.

Robert Movie : Actor Darshan Thugudeep starrer Robert movie celebrates 2nd year

Comments are closed.