ಕೊರೋನಾದಿಂದ ಐಸಿಯು ಸೇರಿದ್ದ ಕೋಮಲ್…! ರಾಯರ ಪವಾಡದಿಂದ ತಮ್ಮ ಚೇತರಿಸಿಕೊಂಡ ಎಂದ ನಟ ಜಗ್ಗೇಶ್…!!

ಕೊರೋನಾ ಎರಡನೇ ಅಲೆ‌ಮಹಾಮಾರಿಯಾಗಿ ಜನರ ಜೀವ ಬಲಿತೆಗೆದುಕೊಳ್ಳುತ್ತಿದೆ. ಈ ಮಧ್ಯೆ ಸ್ಯಾಂಡಲ್ ವುಡ್ ನ ಹಾಸ್ಯನಟ ಕೋಮಲ್ ಕೊರೋನಾದಿಂದ ಸಾವಿನ ಮನೆ ಕದತಟ್ಟಿ ವಾಪಸ್ಸಾಗಿ ರುವ ಸಂಗತಿ ಬೆಳಕಿಗೆ ಬಂದಿದ್ದು, ತಮ್ಮನ ನೋವಿನ ಬಗ್ಗೆ ನಟ ಜಗ್ಗೇಶ್ ಭಾವುಕ ಟ್ವೀಟ್ ಮಾಡಿದ್ದಾರೆ.

ಸ್ಯಾಂಡಲ್ ವುಡ್ ನ ಹಾಸ್ಯನಟ ಕೋಮಲ್ ಇತ್ತೀಚಿಗೆ ನಟನೆ ಜೊತೆಗೆ ತಮ್ಮದೇ ಸ್ವಂತ ಉದ್ಯಮವೊಂದನ್ನು ಆರಂಭಿಸಿದ್ದರು. ಕಾರ್ಪೋ ರೇಶನ್ ನಲ್ಲಿ ಆರಂಭಿಸಿದ ಈ ಉದ್ಯಮಕ್ಕೆ ಸಂಬಂಧಿಸಿದಂತೆ ಕೆಲ ಬಿಲ್ ಗಳು ಸರ್ಕಾರದ‌ ಮಟ್ಟದಲ್ಲಿ ಪಾಸ್ ಆಗಬೇಕಿತ್ತು.

ಕೋಮಲ್‌ ಬಿಲ್ ಪಾಸ್ ಮಾಡಲು ಕೆಲ ಅಧಿಕಾರಿಗಳು‌ ಲಂಚದ ಆಸೆಗೆ ಸಾಕಷ್ಟು ಅಲೆದಾಡಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ಈ ಕೊರೋನಾ ಸೋಂಕಿನ ಸಮಯದಲ್ಲಿ ಅಲೆದಾಡಿ ಅಲೆದಾಡಿ ಸ್ವತಃ ಕೋಮಲ್ ಗೆ ಕರೋನಾ ಸೋಂಕು ತಗುಲಿದೆ. ಅಷ್ಟೇ ಅಲ್ಲ ಕೊರೋನಾ ಸೋಂಕಿನಿಂದ ಕೋಮಲ್ ಆರೋಗ್ಯ ಬಿಗಡಾಯಿಸಿದ್ದು ಐಸಿಯುದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಈಗ ಕೋಮಲ‌್ ಕೊರೋನಾ ಗೆದ್ದು ಬಂದಿದ್ದು ಚೇತರಿಸಿಕೊಳ್ಳುತ್ತಿದ್ದಾರೆ‌‌.

ತಮ್ಮನ ಅನಾರೋಗ್ಯ ಹಾಗೂ ಆತನನ್ನು ಉಳಿಸಿಕೊಳ್ಳಲು ಪಟ್ಟ ಕಷ್ಟದ ಬಗ್ಗೆ ನಟ ಹಾಗೂ ರಾಜಕೀಯ ನಾಯಕ ಜಗ್ಗೇಶ್ ಸರಣಿ ಟ್ವೀಟ್ ಮಾಡಿದ್ದು ನಾನು ನಂಬಿದ ಗುರು ರಾಯರು ಬೃಂದಾವನದಿಂದ ಬಂದು ತಮ್ಮನ್ನು ರಕ್ಷಿಸಿದರು ಎಂದಿದ್ದಾರೆ. ನಾನು ಇಷ್ಟು ದಿನ‌ ಮುಚ್ಚಿ ಟ್ಟಯಾತನೆ ನನಗೆ ಮಾತ್ರ ಗೊತ್ತು. ಭಕ್ತ ಮತ್ತು ರಾಯರ ನಡುವೆ ಭಾವನಾತ್ಮಕ ಬೇಡಿಕೆ ನಡೆದಿತ್ತು.

ನಾನು ಕಾಯಾವಾಚಾಮನಸಾ ನಿಷ್ಟೆಯಿಂದ ನಡೆದುಕೊಂಡಿದ್ದರೇ, ಹೃದಯದಿಂದ ಒಳ್ಳೆತನ ಅನುಸರಿಸಿದ್ದರೇ, ಪಕ್ಷಿ,ಮನುಷ್ಯ ಆತ್ಮ ದಲ್ಲಿ ಪರಮಾತ್ಮನಿದ್ದಾನೆ ಎಂದು ನಂಬಿದ್ದರೇ, ನನ್ನ ತಮ್ಮನಿಗೆ ಸಾವು ಗೆಲ್ಲುವ ಶಕ್ತಿ ನೀಡಿ ಎಂದು ಬೇಡಿದ್ದೇ ಎಂದು ಜಗ್ಗೇಶ್ ವಿವರವಾಗಿ ಟ್ವೀಟ್ ಮಾಡಿದ್ದಾರೆ.

ಸದ್ಯ ಕೋಮಲ್ ಆರೋಗ್ಯ ಸ್ಥಿರವಾಗಿದ್ದು ಅವರು ಕೊರೋನಾ ನೆಗೆಟಿವ್ ಆಗಿದ್ದಾರೆ. ಕೆಲ ದಿನಗಳಿಂದಲೂ ಜಗ್ಗೇಶ್ ಕೊರೋನಾ ರೌದ್ರರೂಪದ ಬಗ್ಗೆ ಟ್ವೀಟ್ ಮಾಡುತ್ತ ಆಸ್ಪತ್ರೆ, ಆಂಬ್ಯುಲೆನ್ಸ್ ಸಿಬ್ಬಂದಿ, ಸಂಸ್ಕಾರದ ಸಿಬ್ಬಂದಿ ವಸೂಲಿ ಬುದ್ಧಿ ಬಗ್ಗೆ ಕಿಡಿಕಾರಿದ್ದರು.

ಸ್ಯಾಂಡಲ್ ವುಡ್ ನಟ ಕೋಮಲ್ ಗೂ ಮುನ್ನ ಈಗಾಗಲೇ ನಟರಾದ ಪ್ರಜ್ವಲ್, ಡಾರ್ಲಿಂಗ್ ಕೃಷ್ಣ,ನಿಖಿಲ್ ಕುಮಾರಸ್ವಾಮಿ, ನಟಿಯರಾದ ಅನುಪ್ರಭಾಕರ್, ಮಿಲನಾ ನಾಗರಾಜ್ ಸೇರಿದಂತೆ ಹಲವರಿಗೆ ಸೋಂಕು ಕಾಣಿಸಿಕೊಂಡಿದ್ದು ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ.

Comments are closed.