ಸ್ಯಾಂಡಲ್ ವುಡ್ ನ ಮಣಿರತ್ನಂ ಎಂದೇ ಕರೆಸಿಕೊಂಡ ರಿಯಲ್ ಸ್ಟಾರ್ ಉಪೇಂದ್ರ ( Real Star Upendra) ಹಲವು ವರ್ಷಗಳ ಬಳಿಕ ಡೈರೈಕ್ಟರ್ ( Director) ಕ್ಯಾಪ್ ತೊಟ್ಟಿದ್ದಾರೆ. ಉಪ್ಪಿ ನಿರ್ದೇಶನದ ಹೊಸ ಮೂವಿ ಯುಐ ( UI ) ಮುಹೂರ್ತ ಶುಕ್ರವಾರದಂದು ಅದ್ದೂರಿಯಾಗಿ ನಡೆದಿದ್ದು, ಕಿಚ್ಚ ಸುದೀಪ್, ಶಿವಣ್ಣ ಸೇರಿದಂತೆ ಹಲವು ಸೆಲೆಬ್ರೆಟಿಗಳು ಮುಹೂರ್ತದಲ್ಲಿ ಪಾಲ್ಗೊಂಡು ರಿಯಲ್ ಸ್ಟಾರ್ ಸಿನಿಮಾಗಳ ನೆನಪು ಮೆಲುಕು ಹಾಕಿ ಶುಭ ಹಾರೈಸಿದ್ದಾರೆ.
ಬೆಂಗಳೂರಿನ ಬಂಡೆ ಮಂಕಾಳಮ್ಮದೇವಾಲಯದಲ್ಲಿ ಸಿನಿಮಾದ ಮುಹೂರ್ತ ನಡೆದಿದೆ. ಈ ಸಮಾರಂಭದಲ್ಲಿ ಮಾತನಾಡಿದ ಹ್ಯಾಟ್ರಿಕ್ ಹೀರೋ ಶಿವಣ್ಣ ತಮ್ಮ ಮತ್ತು ಉಪೇಂದ್ರ ನಡುವಿನ ಸ್ನೇಹವನ್ನು ನೆನಪಿಸಿಕೊಂಡಿದ್ದಾರೆ. ನಾನು ಉಪ್ಪಿ ಬಾಯ್ ಪ್ರೆಂಡ್ ಗರ್ಲ್ ಪ್ರೆಂಡ್ ಇದ್ದಂಗೆ. ಒಬ್ಬರನ್ನೊಬ್ಬರು ಅಷ್ಟು ಪ್ರೀತಿಸುತ್ತೇವೆ ಎಂದರು. ಉಪ್ಪಿ ಸಿನಿಮಾಗಳ ಬಗ್ಗೆ ಮಾತನಾಡಿದ ಶಿವಣ್ಣ ತರ್ಲೆ ನನ್ ಮಗ ಸಿನಿಮಾದಿಂದ ಆರಂಭಿಸಿ ಆಫರೇಶನ್ ಅಂತ ತನಕ ಎಲ್ಲಾ ಸಿನಿಮಾಗಳೂ ಒಂದೊಂದು ವಿಭಿನ್ನತೆಯೊಂದಿಗೆ ತೆರೆಗೆ ಬಂದು ನಮ್ಮನ್ನು ಸೆಳೆದಿದೆ.
ಅದರಲ್ಲೂ ಉಪೇಂದ್ರ ನಿರ್ದೇಶನದ ಓಂ ಸಿನಿಮಾ ನನ್ನ ಕೆರಿಯರ್ ಗೆ ಒಂದು ದೊಡ್ಡ ತಿರುವು ಕೊಟ್ಟ ಸಿನಿಮಾ. ಇವತ್ತು ನೋಡಿದರೂ ಆ ಸಿನಿಮಾದ ಮೇಕಿಂಗ್ ವಿಭಿನ್ನ ಹಾಗೂ ಯೂನಿಕ್ ಆಗಿ ನಿಲ್ಲುತ್ತದೆ. ಈಗ 7 ವರ್ಷಗಳ ಬಳಿಕ ಮತ್ತೆ ಉಪೇಂದ್ರ ಮತ್ತೆ ನಿರ್ದೇಶನಕ್ಕೆ ಮುಂದಾಗಿದ್ದಾರೆ. ಹಾರ್ಸ್ ಮುಖವಾಡದ ವಿಭಿನ್ನ ಪೋಸ್ಟರ್ ಜೊತೆ ಮತ್ತೆ ಬರುತ್ತಿದ್ದಾರೆ. ನಾನಂತೂ ಈ ಸಿನಿಮಾ ನೋಡೋಕೆ ಕಾಯ್ತಿದ್ದೇನೆ ಎಂದರು.
Brainstorm starts soon…. pic.twitter.com/mb6nOcOn1t
— Upendra (@nimmaupendra) June 3, 2022
ಉಪೇಂದ್ರ ಅವರ ಸಾಧನೆಯ ವಿಟಿ ನೋಡಿದ್ರೇ ಮೈ ಜುಮ್ಮೆನ್ನಿಸುತ್ತದೆ ಎಂದು ಮಾತು ಆರಂಭಿಸಿದ ನಟ ಡಾಲಿ ಧನಂಜಯ್, ಅವರ ಪ್ರತಿಯೊಂದು ಸಿನಿಮಾದಲ್ಲೂ ಕಾಮನ್ ಮ್ಯಾನ್ ಕೆನ್ನೆಗೆ ಹೊಡೆದು ಹೇಳುವ ಬುದ್ಧಿಮಾತೊಂದು ಇರುತ್ತೆ ಎಂದರು. ಸುದೀಪ್ ಕೂಡ ಉಪೇಂದ್ರ ಅವರ ವಿಭಿನ್ನ ಸಿನಿಮಾಗಳನ್ನು ಶ್ಲಾಘಿಸಿದರು. ನಟ ವಶಿಷ್ಠ ಸಿಂಹ, ದುನಿಯಾ ವಿಜಯ್ ಸೇರಿದಂತೆ ಹಲವು ಚಿತ್ರರಂಗದ ಗಣ್ಯರು ಮುಹೂರ್ತದಲ್ಲಿ ಪಾಲ್ಗೊಂಡಿದ್ದರು. ಯುಐ ಸಿನಿಮಾದ ಟೈಟಲ್ ಹಾಗೂ ಪೋಸ್ಟರ್ ಜನ ಸಾಮಾನ್ಯರ ತಲೆಗೆ ಹುಳಬಿಡುವಂತೆ ಸಿದ್ಧವಾಗಿದ್ದು ಸಿನಿಮಾದ ಮೂಲಕ ಉಪೇಂದ್ರ್ ಯಾವ ಸಂದೇಶ ಕೊಡಲಿದ್ದಾರೆ ಅನ್ನೋದು ಸದ್ಯದ ಕುತೂಹಲ.
ಇದನ್ನೂ ಓದಿ : Samantha Ruth Prabhu : ಪುಷ್ಪ ಬೆಡಗಿಯ ಹೊಸ ಅವತಾರ : ಬೇಗಂ ಲುಕ್ ನಲ್ಲಿ ಮಿಂಚಿದ ಸಮಂತಾ
ಇದನ್ನೂ ಓದಿ : Yash : ಛತ್ರಪತಿ ಶಿವಾಜಿ ಬಯೋಪಿಕ್ ನಲ್ಲಿ ಯಶ್: ಇಲ್ಲಿದೆ ವೈರಲ್ ಪೋಟೋದ ಅಸಲಿ ಸತ್ಯ
sandalwood Actor Upendra Direction Movie UI Muhurta
Comments are closed.