Biggboss: ಬಿಗ್ ಬಾಸ್ ನಲ್ಲಿ ಸ್ಪರ್ಧಿಗಳಿಗೆ ಎಲಿಮಿನೇಶನ್ ಶಾಕ್…! ಸುದೀಪ್ ಹೇಳಿದ್ದೇನು ಗೊತ್ತಾ…?!

ಬಿಗ್ ಬಾಸ್ ರಿಯಾಲಿಟಿ ಶೋದ ಸೆಕೆಂಡ್ ಇನ್ನಿಂಗ್ಸ್ ಕುತೂಹಲಕರ ಘಟ್ಟದಲ್ಲಿದೆ. ಇನ್ನೇನು 15 ದಿನದಲ್ಲಿ ಅಂತ್ಯವಾಗೋ ಶೋನಲ್ಲಿ ಅಂತಿಮ ಹಂತ ತಲುಪಲು ಹಾಗೂ ಶೋ ಗೆಲ್ಲಲು ಸ್ಪರ್ಧಿಗಳು ಕಸರತ್ತು ನಡೆಸಿರೋ ಬೆನ್ನಲ್ಲೇ ಸುದೀಪ್ ಎಲಿಮಿನೇಶನ್ ಗೆ ಟ್ವಿಸ್ಟ್ ನೀಡಿ ಸಖತ್ ಶಾಕ್ ನೀಡಿದ್ದಾರೆ.

ಸಾಮಾನ್ಯವಾಗಿ ವಾರಾಂತ್ಯದ ಎಪಿಸೋಡ್ ನಲ್ಲಿ ಎಲಿಮಿನೇಶನ್ ನಡೆಯೋದು ಕಾಮನ್. ಆದರೆ ನಾಮಿನೇಶನ್ ಗೆ ಟ್ವಿಸ್ಟ್ ನೀಡಿರೋ ಕಿಚ್ಚ ಸುದೀಪ್, ಈ ವಾರಾಂತ್ಯದಲ್ಲಿ ಯಾರು ನಾಮಿನೇಟ್ ಆಗಲ್ಲ. ಬದಲಾಗಿ ವಾರದ ಯಾವುದೋ ಒಂದು ದಿನ ಒಬ್ಬರು ಸ್ಪರ್ಧಿ ಮನೆಯಿಂದ ಹೊರಕ್ಕೆ ಹೋಗುತ್ತಾರೆ ಎಂದಿದ್ದಾರೆ.

ಇದರಿಂದ ಎಲಿಮಿನೇಟ್ ಆಗಿರೋ ಸ್ಪರ್ಧಿಗಳ ಎದೆಯಲ್ಲಿ ಡವ್ ಡವ್ ಆರಂಭವಾಗಿದೆ. ವಾರಾಂತ್ಯದ ಎರಡು ದಿನ ಯಾರು ಎಲಿಮಿನೇಟ್ ಆಗ್ತಾರೆ ಎನ್ನುತ್ತ ಕುತೂಹಲ ಕಾಯ್ತಿದ್ದ ಸ್ಪರ್ಧಿಗಳಿಗೆ ಶಾಕ್ ನೀಡಿದ ಸುದೀಪ್, ಈ ವಾರ ಯಾರನ್ನು ಎಲಿಮಿನೇಟ್ ಮಾಡುತ್ತಿಲ್ಲ. ಮುಂದಿನ ಶನಿವಾರ ನಾನು ಬರುವ ವೇಳೆಗೆ ಒಬ್ಬ ಸ್ಪರ್ಧಿ ಇರೋದಿಲ್ಲ ಎಂದರು.

ಇವಾಗಿನಿಂದ ಪ್ರತಿಕ್ಷಣ ನಿಮ್ಮದಾಗಿಸಿಕೊಳ್ಳಿ. ಎಲಿಮಿನೇಟ್ ಆಗಿ ಹೊರಹೋಗುವ ಸ್ಪರ್ಧಿಗೆ ನಾನು ಸಿಗುವುದಿಲ್ಲ ಅನ್ನೋ ಬೇಸರ ನನಗೂ ಇದೆ ಎಂದ ಸುದೀಪ್, ಇಂದಿಗೆ 14 ದಿನದಲ್ಲಿ  ಗ್ರ್ಯಾಂಡ್ ಫಿನಾಲೆ ನಡೆಯಲಿದೆ ಎನ್ನುವ ಮೂಲಕ ಸ್ಪರ್ಧಿಗಳಲ್ಲಿ ಮತ್ತಷ್ಟು ಉತ್ಸಾಹ ತುಂಬಿದ್ದಾರೆ.

ದಿವ್ಯಾ ಉರುಡುಗ,ಪ್ರಶಾಂತ್ ಸಂಬರಗಿ, ಚಕ್ರವರ್ತಿ ಚಂದ್ರಚೂಡ,  ಶುಭಾ ಪೂಂಜಾ, ಶಮಂತ್ ನಾಮಿನೇಟ್ ಆಗಿದ್ದು, ಇವರ ಪೈಕಿ ಸದ್ದಿಲ್ಲದೇ ಬಿಗ್ ಬಾಸ್ ಮನೆ ತೊರೆದು ಹೋಗುವವರು ಯಾರು ಎಂಬ ಕುತೂಹಲ ಈಗ ಸ್ಪರ್ಧಿಗಳಲ್ಲಿ ಮನೆ ಮಾಡಿದೆ.

ಸುದೀಪ್ ಎಲಿಮಿನೇಶನ್ ಟ್ವಿಸ್ಟ್ ತಿಳಿಸುತ್ತಿದ್ದಂತೆ ಸದಸ್ಯರಲ್ಲಿ ಈ ಬಗ್ಗೆ ಚರ್ಚೆ ನಡೆದಿದ್ದು, ಎಲ್ಲರೂ ಒಂದಾಗಿರಿ. ಯಾವಾಗ ಬೇಕಾದರೂ ಯಾರನ್ನು ಬೇಕಾದರೂ ಹೊರಕ್ಕೆ ಕರೆಯಬಹುದು ಎಂದು ಶುಭಾಪೂಂಜಾ ಸಲಹೆ ಕೂಡ ನೀಡಿದ್ದಾರೆ.

Comments are closed.