Darshan: ಸಂಕಷ್ಟಗಳಿಂದ ಕಂಗೆಟ್ಟ ಚಾಲೆಂಜಿಂಗ್ ಸ್ಟಾರ್ ….! ತಿರುನಲ್ಲಾರ್ ಶನಿದೇವರ ಮೊರೆ ಹೋದ ದಚ್ಚು….!!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಸದ್ಯ ಕಾಂಟ್ರಾವರ್ಸಿ ಸ್ಟಾರ್ ಎನ್ನಿಸಿಕೊಳ್ಳೋವಷ್ಟರ ಮಟ್ಟಿಗೆ ವಿವಾದಗಳು ಅವರನ್ನು ಕಾಡ್ತಿದೆ. ಈ ಸಂಕಷ್ಟಗಳಿಂದ ಪಾರಾಗಲು ದೇವರ ಮೊರೆ ಹೋಗಿರುವ ಚಾಲೆಂಜಿಂಗ್ ಸ್ಟಾರ್ ಶಕ್ತಿಶಾಲಿ ಶನಿಮಹಾತ್ಮೆಯ ಸ್ಥಳ ಪಾಂಡಿಚೇರಿಯ ತಿರುನೆಲ್ಲಾರ್ ಶನಿ ದೇವಾಲಯಕ್ಕೆ ಭೇಟಿ ನೀಡಿದ್ದಾರೆ.

ತಮಿಳುನಾಡಿನ ಪಾಂಡಿಚೇರಿಯಲ್ಲಿರುವ ತಿರುನೆಲ್ಲಾರ್ ಶನಿಬಾಧೆಯನ್ನು ಕಳೆಯುವ ಶಕ್ತಿಶಾಲಿ ಸ್ಥಳ ಎಂದು ಪ್ರಸಿದ್ಧವಾಗಿದೆ. ಪ್ರಸ್ತುತ ವಿವಾದಗಳಿಂದಲೇ ಕಂಗೆಟ್ಟಿರುವ ದರ್ಶನ್ ತಮ್ಮೆಲ್ಲ ಸಂಕಷ್ಟಗಳನ್ನು ಪರಿಹರಿಸಿಕೊಂಡು ನೆಮ್ಮದಿ ಪಡೆಯಲು ಶನಿದೇವರ ಮೊರೆ ಹೋಗಿದ್ದಾರೆ.

ತಿರುನೆಲ್ಲಾರ್ ದೇವಾಲಯದ ಎದುರು ಕೆರೆ ಇದ್ದು, ಅಲ್ಲಿ ಪುಣ್ಯಸ್ನಾನ ಮಾಡಿ ದೇವರಿಗೆ ಪೂಜೆ ಸಲ್ಲಿಸಿದರೇ ಶನಿಬಾಧೆ ದೂರವಾಗುತ್ತದೆ ಎಂಬ ಪ್ರತೀತಿ ಇದೆ. ತನ್ನನ್ನು ಕಾಡಿದ ಶನಿದೇವನಿಂದ ಮುಕ್ತಿ ಪಡೆಯಲು ನಳ ಮಹಾರಾಜನು ಇದೇ ಸ್ಥಳವನ್ನು ಆಶ್ರಯಿಸಿದ್ದ ಎಂದು ಪುರಾಣಗಳು ಹೇಳುತ್ತವೆ.

ಈ ಹಿನ್ನೆಲೆಯಲ್ಲಿ ದಚ್ಚು ಸ್ನೇಹಿತರ ಜೊತೆಗೆ ಈ ದೇವಾಲಯಕ್ಕೆ ಭೇಟಿ ನೀಡಿದ್ದು ಪೂಜೆ ಸಲ್ಲಿಸಿದ್ದಾರೆ. ಈ ಹಿಂದೆ ಪತ್ನಿ ಜೊತೆ ಜಗಳವಾಡಿಕೊಂಡು ವಿವಾದ ಸೃಷ್ಟಿಸಿಕೊಂಡಿದ್ದ ದರ್ಶನ್ ಬಳಿಕ ಇದೇ ದೇವಾಲಯಕ್ಕೆ ಪೂಜೆ ಸಲ್ಲಿಸಿದ್ದರು ಎನ್ನಲಾಗಿದೆ.

ಒಟ್ಟಿನಲ್ಲಿ ಉಮಾಪತಿ ಜೊತೆಗಿನ 25 ಕೋಟಿ ಸಾಲ ಪ್ರಕರಣ, ಇಂದ್ರಜಿತ್ ಲಂಕೇಶ್ ಜೊತೆಗಿನ ಗಲಾಟೆ ಹೀಗೆ ಎಲ್ಲ ವಿವಾದಗಳಿಂದ ಮುಕ್ತಿ  ಪಡೆಯಲು ದರ್ಶನ್ ಶನಿದೇವರ ಮೊರೆ ಹೋಗಿದ್ದು, ಪೋಟೋಸ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Comments are closed.