Puneeth Rajkumar : ಪುನೀತ್ ರಾಜ್‌ ಕುಮಾರ್ ಸಮಾಧಿಗೆ ಹಾಲು ತುಪ್ಪ ಕಾರ್ಯ ನೆರವೇರಿಸಿದ ಅಪ್ಪು ಕುಟುಂಬಸ್ಥರು

ಬೆಂಗಳೂರು : ಸ್ಯಾಂಡಲ್‍ವುಡ್ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಬಾರದ ಲೋಕಕ್ಕೆ ಪಯಣಿಸಿ ಇಂದಿಗೆ ಐದು ದಿನ ಕಳೆದಿದೆ. ಈ ಹಿನ್ನೆಲೆಯಲ್ಲಿ ರಾಜ್‌ ಕುಟುಂಬಸ್ಥರು ದೊಡ್ಮನೆ ಮಗನ ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ. ಐದನೇ ದಿನದ ಹಾಲು, ತುಪ್ಪದ ಕಾರ್ಯವನ್ನು ನೆರವೇರಿಸಿದ್ದಾರೆ.

ಲಕ್ಷಾಂತರ ಅಭಿಮಾನಿಗಳ ಪಾಲಿನ ಆರಾಧ್ಯ ದೈವ. ಅತ್ಯಂತ್ಯ ವಯಸ್ಸಿನಲ್ಲಿಯೇ ಬಾರದ ಲೋಕಕ್ಕೆ ಪಯಣಿಸಿದ್ದ ಅಪ್ಪು ಅಗಲಿಕೆಯ ನೋವು ರಾಜ್‌ ಕುಟುಂಬಸ್ಥರನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಕಲ್ಪಿಸಿಕೊಳ್ಳುವುದಕ್ಕೂ ಸಾಧ್ಯವಿಲ್ಲದಂತೆ ಸಾವಿನ ಕದ ತಟ್ಟಿದ್ದ ಪುನೀತ್‌ ರಾಜ್‌ ಕುಮಾರ್‌ ನಮ್ಮನ್ನಗಲಿ ಇಂದಿಗೆ ಐದು ದಿನ ಕಳೆದಿದೆ. ಈ ಹಿನ್ನೆಲೆಯಲ್ಲಿಂದು ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿರುವ ಪುನೀತ್‌ ಅವರ ಸಮಾಧಿಗೆ ಕಾರ್ಯ ನೆರವೇರಿಸಲಾಗಿದೆ.

ಇದನ್ನೂ ಓದಿ: ಪುನೀತ್‌ ಸಮಾಧಿಗೆ ಕುಟುಂಬಸ್ಥರಿಂದ ಹಾಲು-ತುಪ್ಪ ಶಾಸ್ತ್ರ

ಐದನೇ ದಿನದ ಕಾರ್ಯದ ಹಿನ್ನೆಲೆಯಲ್ಲಿ ಪುನೀತ್‌ ರಾಜ್‌ ಕುಮಾರ್‌ ಅವರ ಸಮಾಧಿಗೆ ಹೂವಿನಿಂದ ಅಲಂಕಾರ ಮಾಡಲಾಗಿತ್ತು. ಅಪ್ಪು ಬಹುವಾಗಿ ಇಷ್ಟಪಡುವ ಕಪ್‌ ಕಡಬು, ಬಿರಿಯಾನಿ, ನಾಟಿ ಕೋಳಿ ಸಾರು ಸೇರಿದಂತೆ ಹಲವು ಬಗೆಯ ಪದಾರ್ಥಗನ್ನು ಮನೆಯಿಂದಲೇ ಮಡಿಯಾಗಿ ಮಾಡಿಕೊಂಡು ಬಂದು ಬಾಳೆ ಎಲೆಯಲ್ಲಿಟ್ಟು ಬಡಿಸಲಾಯಿತು. ನಂತರ ಹಾಲು, ತುಪ್ಪದ ಕಾರ್ಯವನ್ನು ನೆರವೇರಿಸಲಾಯಿತು.

ಪುನೀತ್‌ ರಾಜ್‌ ಕುಮಾರ್‌ ಅವರಿಗೆ ಹಾಲು ತುಪ್ಪದ ಕಾರ್ಯ ನೆರವೇರಿಸುವ ಸಂದರ್ಭದಲ್ಲಿ ಅಶ್ವಿನಿ ಪುನೀತ್‌ ಅವರು ಭಾವುಕರಾದ್ರು. ರಾಘವೇಂದ್ರ ರಾಜ್‌ ಕುಮಾರ್‌ ಭಜನೆಯ ಮೂಲಕ ಸಹೋದರಿಗೆ ಭಗವಂತನಲ್ಲಿ ಮುಕ್ತಿಯನ್ನು ಬೇಡಿದ್ದಾರೆ. ಈ ವೇಳೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಪ್ಪಾಜಿ ಅವರ ಎರಡು ಕಣ್ಣುಗಳನ್ನು ಇಬ್ಬರಿಗೆ ನೀಡಿದ್ರೆ, ಅಪ್ಪು ಅವರ ಎರಡು ಕಣ್ಣುಗಳು ನಾಲ್ಕು ಜನರಿಗೆ ದೃಷ್ಟಿಯನ್ನು ನೀಡುವ ಮೂಲಕ ದಾಖಲೆ ಮಾಡಿದ್ದಾರೆ. ಎಲ್ಲಾ ರೀತಿಯಲ್ಲಿಯೂ ಸಹಕಾರ ನೀಡಿದ ಮಾಧ್ಯಮದವರಿಗೆ, ಸಿಎಂ ಹಾಗೂ ಸರಕಾರಕ್ಕೆ ನಮ್ಮ ಧನ್ಯವಾದಗಳು ಎಂದಿದ್ದಾರೆ.

ಇದನ್ನೂ ಓದಿ: Puneeth Rajkumar : 2 ಕಣ್ಣುಗಳ ಮೂಲಕ ನಾಲ್ಕು ಮಂದಿಗೆ ದೃಷ್ಟಿ ನೀಡಿದ ಪುನೀತ್‌ ರಾಜ್‌ ಕುಮಾರ್‌

(Appu Performs Haalu , thuppa For Puneet Rajkumar Samadhi)

Comments are closed.