Darshan: ಸಿನಿಮಾ ಬಳಿಕ ರಾಜಕೀಯಕ್ಕೆ ಚಾಲೆಂಜಿಂಗ್ ಸ್ಟಾರ್….! ದಚ್ಚು ಭವಿಷ್ಯ ನುಡಿದ ಜ್ಯೋತಿಷಿ….!!

ಒಂದಾದ ಮೇಲೊಂದರಂತೆ ವಿವಾದ ಮೈಮೇಲೆ ಎಳೆದುಕೊಂಡು ಓಡಾಡುತ್ತಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್  ಮುಂದೊಂದು ದಿನ ರಾಜಕೀಯಕ್ಕೆ ಬರ್ತಾರಂತೆ. ಅಷ್ಟೇ ಅಲ್ಲ ರಾಜಕೀಯದಲ್ಲೂ ಅವರಿಗೆ ಒಳ್ಳೆಯ ಭವಿಷ್ಯವಿದೆಯಂತೆ. ಇಂತಹದೊಂದು ಸಂಗತಿ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿದೆ.

ಸ್ಯಾಂಡಲ್ ವುಡ್ ನ ಚಾಲೆಂಜಿಂಗ್ ಸ್ಟಾರ್ ದರ್ಶನ್  ಸಿನಿಮಾಗಳ ಜೊತೆಗೆ ಜೊತೆಗೆ ವಿವಾದಗಳಿಂದಲೂ ಸುದ್ದಿಯಾದವರು. ಈಗ ಮತ್ತೊಮ್ಮೆ 25 ಕೋಟಿ ಸಾಲ ಪ್ರಕರಣ ಹಾಗೂ ಮೈಸೂರಿನ ಸಂದೇಶ್ ಹೊಟೇಲ್ ವೇಟರ್ ಮೇಲಿನ ಹಲ್ಲೆ ಪ್ರಕರಣದಲ್ಲಿ ಸಿಲುಕಿಕೊಂಡಿರೋ ದರ್ಶನ್ ಸುದ್ದಿಯಲ್ಲಿದ್ದಾರೆ.

ಈ ಮಧ್ಯೆ ದರ್ಶನ್ ಗ್ರಹಗತಿಗಳ ಲೆಕ್ಕಾಚಾರದ ಮೇಲೆ ಜ್ಯೋತಿಷಿ ಯೊಬ್ಬರು ನುಡಿದಿರೋ ಭವಿಷ್ಯ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿದೆ. ಸಂಖ್ಯಾ ಜ್ಯೋತಿಷಿ ಎಂದು ಕರೆಯಿಸಿಕೊಳ್ಳುವ ಜ್ಯೋತಿಷಿ ಯೊಬ್ಬರು ದರ್ಶನ ಜಾತಕ ಮತ್ತು ಸಿಎಂ ಬಿಎಸ್ವೈ ಜಾತಕ ಒಂದೇ ರೀತಿ ಇದೆ ಎಂದಿದ್ದಾರೆ.

ಅಷ್ಟೇ ಅಲ್ಲ 2011 ರಲ್ಲಿ ಸಿಎಂ ಬಿಎಸ್ವೈಗೆ ಸಂಕಷ್ಟ ಬಂದಿತ್ತು. ಅದೇ ಸಂದರ್ಭದಲ್ಲೂ ದರ್ಶನ್ ಕೂಡ ಸಮಸ್ಯೆಗೆ ಸಿಲುಕಿಕೊಂಡಿದ್ದರು. ಈಗಲೂ ಅದೇ ಸ್ಥಿತಿ ಇದೆ. ಆದರೆ ಕೆಲವೇ ದಿನದಲ್ಲಿ ದರ್ಶನ್ ಈ ಸಮಸ್ಯೆಗಳಿಂದ ಹೊರಬರಲಿದ್ದಾರೆ ಎಂದಿದ್ದಾರೆ.

ಅಷ್ಟೇ ಅಲ್ಲದೇ ದರ್ಶನಗೆ ರಾಜಕೀಯದಲ್ಲೂ ಉಜ್ವಲ ಭವಿಷ್ಯವಿದ್ದು, ರಾಜಕೀಯಕ್ಕೆ ಬಂದ್ರೇ ಸ್ಥಾನಮಾನ ಪಡೆಯಬಹುದು ಎಂದಿದ್ದಾರೆ. ಆದರೆ ಈ ಬಗ್ಗೆ ದರ್ಶನ್ ಯಾವ ರೀತಿಯಲ್ಲೂ ಪ್ರತಿಕ್ರಿಯೆ ನೀಡಿಲ್ಲ.

ಇಷ್ಟಕ್ಕೂ ದರ್ಶನ್ ಗೆ ರಾಜಕೀಯ ಹೊಸದೇನಲ್ಲ. ದರ್ಶನ್ ತಾಯಿ ಕಾಂಗ್ರೆಸ್ ನಲ್ಲಿ ಗುರುತಿಸಿಕೊಂಡಿದ್ದಾರೆ. ಇನ್ನೊಂದೆಡೆ ನಟ ದರ್ಶನ್ ಕೂಡ ಪಕ್ಷಾತೀತವಾಗಿ ಚುನಾವಣೆ ವೇಳೆ ಪಿ.ಸಿ.ಮೋಹನ್, ಬಿ.ಸಿ.ಪಾಟೀಲ್, ಸುಮಲತಾ ಅಂಬರೀಶ್ ಸೇರಿದಂತೆ ಹಲವರ ಪರ ಚುನಾವಣಾ ಪ್ರಚಾರದಲ್ಲೂ ತೊಡಗಿಸಿಕೊಂಡಿದ್ದರು.

ಆದರೆ ಸಾಲು ಸಾಲು ಚಿತ್ರದಲ್ಲಿ ಬ್ಯುಸಿಯಾಗಿರೋ ದರ್ಶನ್ ಜ್ಯೋತಿಷ್ಯಿ ಭವಿಷ್ಯದಂತೆ ಖುದ್ದು ಎಲೆಕ್ಷನ್ ಗೆ ನಿಂತು ತಮ್ಮ ರಾಜಕೀಯ ಅದೃಷ್ಟ ಪರೀಕ್ಷೆಗೆ ಮುಂದಾಗ್ತಾರಾ ಅನ್ನೋದನ್ನು ಕಾದು ನೋಡಬೇಕಿದೆ.

Comments are closed.