Shah Rukh Khan : ಬೇಶರಂ ರಂಗ್​ ವಿವಾದ : ಶಾರೂಕ್​​ ಖಾನ್​​ರನ್ನು ಜೀವಂತ ಸುಡುವ ಎಚ್ಚರಿಕೆ ನೀಡಿದ ಸ್ವಾಮೀಜಿ

ಅಯೋಧ್ಯೆ:Shah Rukh Khan  : ಪಠಾಣ್​ ಸಿನಿಮಾದ ಬೇಶರಂ ರಂಗ್​ ಹಾಡು ದೇಶದಲ್ಲಿ ಭಾರೀ ದೊಡ್ಡಮಟ್ಟದಲ್ಲಿ ಸದ್ದು ಮಾಡುತ್ತಿದೆ. ಈ ಹಾಡಿನಲ್ಲಿ ದೀಪಿಕಾ ಪಡುಕೋಣೆ ಕೇಸರಿ ಬಣ್ಣದ ಬಿಕನಿ ಧರಿಸಿದ್ದು ಬಲಪಂಥೀಯರ ಕಣ್ಣು ಕೆಂಪಗಾಗಿಸಿತ್ತು. ಹೀಗಾಗಿ ಪಠಾಣ್​ ಸಿನಿಮಾವನ್ನು ಬಾಯ್ಕಾಟ್​​​ ಮಾಡಬೇಕು ಎಂಬ ಕೂಗು ಅನೇಕ ಕಡೆಗಳಲ್ಲಿ ಕೇಳಿ ಬರ್ತಿದೆ. ಇದೀಗ ಶಾರೂಕ್​ ಖಾನ್​​ಗೆ ಮತ್ತೊಂದು ಸಂಕಷ್ಟ ಎದುರಾಗಿದ್ದು ಕಿಂಗ್​ಖಾನ್​ರನ್ನು ಜೀವಂತ ಸುಡೋದಾಗಿ ಅಯೋಧ್ಯೆಯಲ್ಲಿ ಧರ್ಮದರ್ಶಿಯೊಬ್ಬರು ಬೆದರಿಕೆ ಹಾಕಿದ್ದಾರೆ. ಶಾರೂಕ್​ ಖಾನ್​​ರ ಮುಂಬರುವ ಸಿನಿಮಾ ಪಠಾಣ್​​​ನ ಬೇಶರಂ ಹಾಡಿನ ವಿರುದ್ಧ ಪ್ರತಿಭಟನೆ ನಡೆಸಿದ ಅವರು ಈ ಸಿನಿಮಾವನ್ನು ಉತ್ತರ ಪ್ರದೇಶದಲ್ಲಿ ಬಿಡುಗಡೆ ಮಾಡಿದಲ್ಲಿ ಥಿಯೇಟರ್​​ಗಳಿಗೆ ಬೆಂಕಿ ಹಚ್ಚೋದಾಗಿ ಎಚ್ಚರಿಕೆ ನೀಡಿದ್ದಾರೆ.


ಶಾರೂಕ್​ ಖಾನ್​ರಿಗೆ ಈ ರೀತಿಯ ಎಚ್ಚರಿಕೆ ನೀಡಿರುವ ವ್ಯಕ್ತಿಯನ್ನು ಚಾವ್ನಿಯ ಮಹಂತ್​ ಪರಮಹಂಸ ಆಚಾರ್ಯ ಎಂದು ಗುರುತಿಸಲಾಗಿದೆ. ಈ ಹಾಡಿನಲ್ಲಿ ನಟಿ ದೀಪಿಕಾ ಪಡುಕೋಣೆ ಕೇಸರಿ ಬಣ್ಣದ ಬಿಕಿನಿಯು ಹಿಂದೂ ಧರ್ಮವನ್ನು ಅವಮಾನಿಸಿದೆ ಎಂದು ಮಹಂತ್​​​ ಪರಮಹಂಸ ಆಚಾರ್ಯ ಗುಡುಗಿದ್ದಾರೆ. ಪಠಾಣ್​​​ ಸಿನಿಮಾದ ಪೋಸ್ಟರ್​ಗಳನ್ನು ಹರಿದು ಹಾಕಿ ಆಕ್ರೋಶ ಹೊರ ಹಾಕಿದ್ದಾರೆ.

ನಮ್ಮ ಸನಾತನ ಧರ್ಮದ ಜನರು ಈ ಬಗ್ಗೆ ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇಂದು ನಾವು ಶಾರೂಕ್​ ಖಾನ್ ಮುಖ್ಯ ಭೂಮಿಕೆಯ ಈ ಸಿನಿಮಾದ ಪೋಸ್ಟರ್​​ಗಳನ್ನು ಸುಟ್ಟು ಹಾಕಿದ್ದೇವೆ. ಒಂದು ವೇಳೆ ನನಗೆ ಶಾರೂಕ್​ ಖಾನ್​ರನ್ನು ಮುಖಾಮುಖಿ ಭೇಟಿಯಾಗುವ ಅವಕಾಶ ಸಿಕ್ಕರೆ ಅವರನ್ನು ಜೀವಂತವಾಗಿ ಸುಟ್ಟು ಹಾಕುತ್ತೇವೆ ಎಂದು ಮಹಂತ್​​ ಪರಮಹಂಸ ಆಚಾರ್ಯ ಎಚ್ಚರಿಕೆ ನೀಡಿದ್ದಾರೆ. ಇದು ಮಾತ್ರವಲ್ಲದೇ ಯಾವೆಲ್ಲ ಥಿಯೇಟರ್​ಗಳಲ್ಲಿ ಪಠಾಣ್​ ಸಿನಿಮಾ ರಿಲೀಸ್​ ಆಗುತ್ತದೆಯೋ ಆ ಎಲ್ಲ ಸಿನಿಮಾ ಮಂದಿರಗಳನ್ನು ಸುಟ್ಟು ಹಾಕುತ್ತೇವೆ ಎಂದಿದ್ದಾರೆ.

ಈಗಾಗಲೇ ಮಧ್ಯಪ್ರದೇಶ, ಬಿಹಾರ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಪಠಾಣ್​ ಸಿನಿಮಾವನ್ನು ಬಾಯ್ಕಾಟ್​ ಮಾಡುವ ಬಗ್ಗೆ ಎಚ್ಚರಿಕೆ ನೀಡಲಾಗಿದೆ. ಪಠಾಣ್​ ಸಿನಿಮಾ ಜನವರಿ 25ರಂದು ಎಲ್ಲಾ ಚಿತ್ರಮಂದಿರಗಳಲ್ಲಿ ರಿಲೀಸ್​ ಆಗುತ್ತಿದೆ.

ಇದನ್ನು ಓದಿ : California earthquake: ಕ್ಯಾಲಿಫೋರ್ನಿಯಾದಲ್ಲಿ 6.4 ತೀವ್ರತೆಯ ಭೂಕಂಪ: 12 ಮಂದಿಗೆ ಗಾಯ

ಇದನ್ನೂ ಓದಿ : Ranji Trophy Karnataka: ಪಾಂಡಿಚೇರಿ ವಿರುದ್ಧ ಮೊದಲ ದಿನವೇ ಕನ್ನಡಿಗರ ಭರ್ಜರಿ ಆಟ

ಇಂಗ್ಲಿಷ್‌ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

Shah Rukh Khan will be burned alive: Ayodhya seer on Pathaan, Besharam Rang row

Comments are closed.