Shiva Rajkumar : ಶಿವರಾಜ್ ಕುಮಾರ್: ಶಕ್ತಿಧಾಮದ ಮಕ್ಕಳಲ್ಲಿ ಅಪ್ಪುನ ಕಾಣ್ತಾ ಇದ್ದೀನಿ

ಮೈಸೂರಿನ ಶಕ್ತಿ ಧಾಮದ ಹೆಸರು ಹೇಳಿದರೆ ಸಾಕು ನಟ ಶಿವರಾಜ್ ಕುಮಾರ್ (Shiva Rajkumar) ಭಾವುಕರಾಗುತ್ತಾರೆ. ಅದರಲ್ಲೂ, ಪುನೀತ್ ನಿಧನದ ನಂತರ ಶಕ್ತಿ ಧಾಮದ ಒಡನಾಟ ಶಿವಣ್ಣ ಹೆಚ್ಚಿಸಿಕೊಂಡಿದ್ದಾರೆ. ಬೇಸರ ಎನಿಸಿದಾಗೆಲ್ಲ ಶಕ್ತಿಧಾಮಕ್ಕೆ ಹೋಗಿಬರುತ್ತಾರೆ. ಅಲ್ಲಿದ್ದರೆ ಏನೋ ನೆಮ್ಮದಿಯಂತೆ. ಪಾರ್ವತಮ್ಮ ರಾಜ್ ಕುಮಾರ್ ಇದ್ದಾಗ, ಶಕ್ತಿಧಾಮಕ್ಕೆ ಹೋಗಿ ಬಾರಯ್ಯಾ ಅಂದರೂ ಶಿವಣ್ಣ ಆ ಕಡೆ ತಲೆ ಹಾಕುತ್ತಿರಲಿಲ್ಲವಂತೆ.

‘ಹೌದು, ಅಮ್ಮಾಇದ್ದಾಗ ಹೇಳೋರು, ಹೋಗಿ ಬಾರೋ ಅಂತ. ಹಾಗೆಲ್ಲ ಏನೂ ಅನಿಸ್ತಾ ಇರಲಿಲ್ಲ. ಹಾಗಂತ ನಾನು ಶಕ್ತಿಧಾಮಕ್ಕೆ ಹೋಗಬಾರದು ಅಂತಲ್ಲ. ಆದರೂ, ಅಮ್ಮ ಹೇಳೋರು, ಹೋಗಲಿ ಬಿಡು, ನಿನಗೆ ಯಾವಾಗ ಹೋಗಬೇಕು ಅನಿಸುತ್ತೋ ಆಗ ಹೋಗು ಅನ್ನೋರು. ನಾನು ಶಕ್ತಿಧಾಮನ ಬಹಳಮಿಸ್ ಮಾಡ್ಕೊಂಡು ಬಿಟ್ಟೆ’ ಶಿವಣ್ಣ ಹೀಗೆ ಭಾವುಕರಾಗಿ ಮೈಸೂರಿನ ಶಕ್ತಿಧಾಮ ಕಾರ್ಯಕ್ರಮದಲ್ಲಿ ಹೇಳಿದರು.

ಇದನ್ನೂ ಓದಿ : james movie ott premiere : ಜೇಮ್ಸ್​ ಸಿನಿಮಾ ಒಟಿಟಿ ಪ್ರದರ್ಶನಕ್ಕೆ ದಿನಗಣನೆ ಆರಂಭ

‘ಈಗ ನನಗೆ ಬೇಸರ ಅನಿಸಿದರೆ ಅಥವಾ ಮೈಸೂರಿನಲ್ಲಿ ಶೂಟಿಂಗ್ ಏನಾದರು ಇದ್ದರೆ ಮಿಸ್ ಮಾಡದೆ ಶಕ್ತಿಧಾಮಕ್ಕೆ ಬರ್ತೀನಿ. 8 ತಿಂಗಳಲ್ಲಿ ಲೆಕ್ಕವಿಲ್ಲದಷ್ಟು ಸಲ ಬಂದಿದ್ದೀನಿ. ನಿಜ ಹೇಳಬೇಕಾದರೆ, ಶಕ್ತಿಧಾಮದ ಮಕ್ಕಳಲ್ಲಿ ಅಪ್ಪು ಕಾಣ್ತಾ ಇದ್ದೀನಿ. ಇಲ್ಲಿಗೆ ಬಂದರೆ ಏನೋ ನೆಮ್ಮದಿ’ ಎಂದರು. ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಿ.ಎಂ ಅವರನ್ನು ಉದ್ದೇಶಿಸಿ ಶಿವಣ್ಣ ಮಾತನಾಡಿ, ‘ನಾನು ಈ ರೀತಿಯ ಮುಖ್ಯಮಂತ್ರಿಯನ್ನು ನೋಡಲೇ ಇಲ್ಲ. ಅವರ ಸರ್ಕಾರ ನಮಗೆ ಸಾಕಷ್ಟು ಭರವಸೆಗಳನ್ನು ನೀಡಿದೆ. ನಮಗೆ ಅದ್ಬುತ ಪ್ರತಿಕ್ರಿಯೆ ನೀಡಿ ಸಹಕರಿಸಿದ್ದಾರೆ. ನಮ್ಮ ಕುಟುಂಬದ ಮೇಲೆ ಸಿಕ್ಕಾಪಟ್ಟೆ ಮಮತೆ’ ಎಂದು ಹೊಗಳಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ‘ಅಪ್ಪುಗೆ ತಾಯಿ ಕರುಳು ಇತ್ತು. ಹಾಗಾಗಿ, ಇಷ್ಟೊಂದು ಜನಕ್ಕೆ ಸಹಾಯ ಮಾಡಿದ್ದರು. ಶಿವಣ್ಣ ಈಗ ಶಕ್ತಿಧಾಮ ಮುನ್ನಡೆಸುತ್ತಿರುವುದು ಖುಷಿಯ ವಿಚಾರ. ನಮ್ಮ ಸರ್ಕಾರದಿಂದ ಶಕ್ತಿಧಾಮಕ್ಕೆ ಎಲ್ಲ ನೆರವು ನೀಡಲು ನಮ್ಮ ಸರ್ಕಾರ ಸಿದ್ಧ’ ಎಂದರು.

ಇದನ್ನೂ ಓದಿ : Upendra : ಚಿರಂಜೀವಿಗೆ ನಿರ್ದೇಶಿಸುವ ಅವಕಾಶ ಕೈತಪ್ಪಿದ್ದು ಚಿತ್ರ ಬದುಕಿನ ದೊಡ್ಡ ಬೇಸರ! ಉಪೇಂದ್ರ

(Shiva Rajkumar I am seeing appu in Shaktidham s children s faces)

Comments are closed.