Upendra : ಚಿರಂಜೀವಿಗೆ ನಿರ್ದೇಶಿಸುವ ಅವಕಾಶ ಕೈತಪ್ಪಿದ್ದು ಚಿತ್ರ ಬದುಕಿನ ದೊಡ್ಡ ಬೇಸರ! ಉಪೇಂದ್ರ

ನಟ ಉಪೇಂದ್ರ (Upendra) ಸುಮ್ಮನೆ ಕೂತಿಲ್ಲ. ಕಬ್ಜ (Kabja) ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಎಲ್ಲಾ ಅಂದುಕೊಂಡಂತೆ ಆದರೆ, ಕಬ್ಜ ಸಿನಿಮಾ ಈ ತಿಂಗಳು ಮುಗಿಯಲಿದೆ. ಈ ಮಧ್ಯೆ ಉಪೇಂದ್ರ ಅವರ ಹೋಮ್ ಮಿನಿಸ್ಟರ್ ಸಿನಿಮಾ ದಿಢೀರ್ ಅಂತ ಬಂದು ಹೋಯ್ತು. ಮುಂದಿನ ವರ್ಷ ವಿಧಾನಸಭೆ ಚುನಾವಣೆ ಇರುವುದರಿಂದ ಸಿನಿಮಾ ಜೊತೆಗೆ ಪ್ರಜಾಕೀಯ ಪಕ್ಷದ ಕಡೆಗೂ ಗಮನ ಕೊಟ್ಟಿದ್ದಾರೆ. ಇಂತಿಪ್ಪ ಉಪೇಂದ್ರರಿಗೆ ಸದಾ ಕಾಲ ಕಾಡುವ ಒಂದ ವಿಷಯವೂ ಇದೆ. ಅದನ್ನು ಅವರೇ ಹೇಳಿಕೊಂಡಿದ್ದಾರೆ. ಅದೇನೆಂದರೆ, ತೆಲುಗಿನ ಮೆಗಾಸ್ಟಾರ್ ಚಿರಂಜೀವಿ ಅವರ ಚಿತ್ರವೊಂದನ್ನು ನಿರ್ದೇಶನ ಮಾಡುವ ಅವಕಾಶ ತಪ್ಪಿಹೋಗಿದ್ದು.

‘ಎಂಥ ಅದ್ಬುತ ಅವಕಾಶ ಬಂತು. ಏಕೋ ಅದು ಕೈಗೂಡಲಿಲ್ಲ ಈ ಅನಿಸುತ್ತಿದೆ. ಅದ್ಬುತ ನಟನಿಗೆ ನಿರ್ದೇಶನ ಮಾಡುವ ಭಾಗ್ಯ ತಪ್ಪಿಹೋಯ್ತಲ್ಲ ಅಂತ ಈಗಲೂ ಪರಿತಪಿಸುತ್ತಿದ್ದೇನೆ’ ಎಂದು ಉಪೇಂದ್ರ ಹೇಳಿಕೊಂಡಿದ್ದಾರೆ. ಉಪೇಂದ್ರ ಕನ್ನಡದಲ್ಲಿ ಸೂಪರ್ ಸ್ಟಾರ್, ತೆಲುಗು ಚಿತ್ರರಂಗದಲ್ಲಿ ಮಾಸ್ ಸ್ಟಾರ್ ಆಗಿದ್ದವರು. 90ರ ದಶಕದಲ್ಲೇ ಕನ್ನಡದ ನಿರ್ದೇಶಕನೊಬ್ಬ ತೆಲುಗಿನ ಸಿನಿಮಾ ಮಾರ್ಕೆಟ್ ನಲ್ಲಿ ಖಾತೆ ತೆರೆದಿದ್ದಾರೆ ಅಂದರೆ ಅದು ಉಪೇಂದ್ರ. ಉಪೇಂದ್ರ, ಎ ಸಿನಿಮಾಗಳೆಲ್ಲವೂ ತೆಲುಗಿನ ಸೂಪರ್, ಡೂಪರ್ ಹಿಟ್ಟ್ ಆಗಿದ್ದವು.

1997ರಲ್ಲಿ ಉಪೇಂದ್ರ ರಾಜಶೇಖರ್ ಅಭಿನಯದ ಓಂಕಾರಮ್ ಸೂಪರ್ ಹಿಟ್ ಆಯಿತು. ಇದೇ ಸಂದರ್ಭದಲ್ಲಿ ತೆಲುಗಿನ ಸ್ಟಾರ್ ನಟ ಚಿರಂಜೀವಿ ಅವರಿಗೆ ನಿರ್ದೇಶಿಸುವ ಅವಕಾಶ ದೊರೆತದ್ದು. ‘ಅಶ್ವಿನಿ ದತ್ ಪ್ರೊಡಕ್ಷನ್ ಅಡಿಯಲ್ಲಿ ಚಿರಂಜೀವಿ ಅವರಿಗೆ ಸಿನಿಮಾ ನಿರ್ದೇಶಿಸುವ ಅವಕಾಶ ಬಂತಾದರೂ, ಅದಕ್ಕೆ ಕಾಲಕೂಡಿಬರಲೇ ಇಲ್ಲ. ಇದು ನನ್ನ ಜೀವನದ ಬಹುದೊಡ್ಡ ವಿಷಾದನೀಯ ಸಂಗತಿ. ಮತ್ತೆ ನಾನು ಮತ್ತು ಚಿರಂಜೀವಿ ಅವರು ಒಟ್ಟಿಗೆ ಕೆಲಸ ಮಾಡುವ ಅವಕಾಶ ಬರಲೇ ಇಲ್ಲ’ ಎಂದು ಉಪೇಂದ್ರ ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : Kabja : ಸೆಪ್ಟೆಂಬರ್ ಗೆ ಬಂದೇ ಬರ್ತದೇ ಸುದೀಪ್, ಉಪೇಂದ್ರ ಅಭಿನಯದ ಕಬ್ಜ!

ಉಪೇಂದ್ರ ಅವರಿಗೆ ಚಿರಂಜೀವಿ ಅವರಿಗೆ ಸಿನಿಮಾ ನಿರ್ದೇಶಿಸುವ ಅವಕಾಶ ಒದಗಿಬರದೇ ಇರುವ ಬೇಸರ ಇದ್ದರೂ, ಚಿರಂಜೀವಿ ಅವರ ಗಾಢ ಒಡನಾಟದ ಖುಷಿಯನ್ನು ತಂದುಕೊಟ್ಟಿದೆ. ಚಿರಂಜೀವಿ ತಮ್ಮ ನಾಗಬಾಬು ಅವರ ಒಕಮಾಟ ಸಿನಿಮಾದಲ್ಲಿ ನಟಿಸಿದ್ದಾರೆ. ಅಲ್ಲುಅರ್ಜುನ್ ನಟನೆಯ ಸನ್ ಆಫ್ ಸತ್ಯಮೂರ್ತಿ ಸಿನಿಮಾದಲ್ಲಿ ಉಪೇಂದ್ರ ನಟಿಸಿದ್ದಾರೆ. ಈಗ ಬಿಡುಗಡೆಗೆ ಸಿದ್ಧಗೊಂಡಿರುವ ವರಣ್ ತೇಜ ಅಭಿನಯದ ಗಣಿ ಸಿನಿಮಾದಲ್ಲಿ ಒಂದು ಪಾತ್ರ ನೀಡಿರುವುದು ಉಪೇಂದ್ರ ಅವರಿಗೆ ಮತ್ತಷ್ಟು ಸಂತಸ ನೀಡಿದೆ.

‘ ಚಿರಂಜೀವಿ ಕುಟುಂಬದಿಂದ ಹೊರಬರುತ್ತಿರುವ ನಾಯಕನಟರು ನನ್ನನ್ನು ತೆಲುಗು ಚಿತ್ರರಂಗಕ್ಕೆ ಮತ್ತೆ ಮತ್ತೆ ಮರುಪರಿಚಯ ಮಾಡಿಸುತ್ತಿದ್ದಾರೆ’ ಎಂದು ಉಪೇಂದ್ರ ಖುಷಿಯಾಗಿ ಹೇಳಿಕೊಂಡಿದ್ದಾರೆ.

ಗಣಿ ಚಿತ್ರದ ಕನ್ನಡ ಅವತರಣಿಕೆಗೆ ಉಪೇಂದ್ರ ಅವರೇ ಡಬ್ಬಿಂಗ್ ಮಾಡಿದ್ದಾರೆ. ಕನ್ನಡ ಅಭಿಮಾನಿಗಳು ಈ ಚಿತ್ರವನ್ನು ನೋಡಿ ಪ್ರೋತ್ಸಾಹಿಸಿ ಎಂದು ಮನವಿ ಮಾಡಿದ್ದಾರೆ.

ಇದನ್ನೂ ಓದಿ: Upendra In Lady Getup : ಉಪೇಂದ್ರ ಲೇಡಿ ಗೆಟಪ್ ನಲ್ಲಿ ಕಾಣಿಸಿಕೊಂಡದ್ದು ಏಕೆ ಗೊತ್ತಾ? ದಿಢೀರನೆ ತೆರೆಗೆ ಬರುತ್ತಿದೆ ಹೋಮ್ ಮಿನಿಸ್ಟರ್ !

(Upendra Said Miss the opportunity to direct the film for Megastar Chiranjeevi is the big regret in my life)

Comments are closed.