Sudeep : ನಾವೆಲ್ಲ ಅಮಿತಾಭ್ ಬಚ್ಚನ್ ನೋಡಬೇಕು ಅಂತಿದ್ರೆ, ಸುದೀಪ್ ಅವರೊಂದಿಗೇ ನಟಿಸಿದವರು! ಅವರನ್ನು ಟ್ರೋಲ್ ಮಾಡಬೇಡಿ ಎಂದ ಜಗ್ಗೇಶ್

ಈ ಬಗ್ಗೆ ಕೆಜಿಎಫ್ ಚಿತ್ರ ತಂಡವಾಗಲೀ, ನಟ ಯಶ್ ಆಗಲೀ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ, ನಟ ಜಗ್ಗೇಶ್ ಸುದೀಪ್(Sudeep) ಅವರ ಬೆನ್ನಿಗೆ ನಿಂತಿದ್ದಾರೆ. ನಿನ್ನೆ ನಡೆದ ತೋತಾಪುರಿ ಸಿನಿಮಾ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಜಗ್ಗೇಶ್, ‘ಸುದೀಪ್ ಅವರು ಸಿಕ್ಕಾಪಟ್ಟೆ ಸಾತ್ವಿಕರಾಗುವುದು ಒಳ್ಳೇದಲ್ಲ. ಕೆಲವು ಸಲ ತಿರುಗಿ ಬೀಳಬೇಕಾಗುತ್ತೆ. ಬೀಳಿ. ಆಗ ನೋಡಿ ನಿಮ್ಮ ತಂಟೆಗೆ ಯಾರಾದರು ಬರ್ತಾರ ಅಂಥ’ ಎಂದು ವೇದಿಕೆಯಲ್ಲಿದ್ದ ಸುದೀಪ್ ಅವರಿಗೆ ಕಿವಿಮಾತು ಹೇಳಿದರು.

‘ಸುದೀಪ್ ಅಂದರೆ ಸುಮ್ಮನೆ ಅಲ್ಲ. ಆತ, ಕನ್ನಡ ಸಿನಿಮಾ ಪತಾಕೆಯನ್ನು ರಾಷ್ಟ್ರ ಮಟ್ಟದಲ್ಲಿ ಹಾರಿಸಿದವರು. ನಾವೆಲ್ಲ ಅಮಿತಾಭ್ ಬಚ್ಚನ್ ನೋಡಬೇಕು ಅಂತ ಕಾಯ್ತಾ ಇದ್ದರೆ ಈ ಸುದೀಪ್ ಅವರ ಜೊತೆ ಹೋಗಿ ನಟಿಸಿ ಬಂದವರು’ ಅಂತ ಬೆರಗಿನಿಂದ ಹೇಳಿದರು ಜಗ್ಗೇಶ್. ‘ಈ ಸುದೀಪ್ ಅವರನ್ನು ಯಾರೋ ಬಂದು ಬೆಳೆಸಲಿಲ್ಲ. ಅವರಿಗೆ ಯಾರೂ ಗಾಡ್ ಫಾದರ್ ಗಳು ಇಲ್ಲ. ತಮನ್ನು ತಾವೇ ಕೆತ್ತಿಕೊಂಡಿದ್ದರಿಂದ ಸುದೀಪ್ ಅನ್ನೋ ಮೂರ್ತಿಯಾಗಿ ನಮಗೆ ಕಾಣುತ್ತಿದ್ದಾರೆ. ಸುದೀಪ್‌ ಈ ಪರಿ ಬೆಳೆದ ರೀತಿ ನೋಡಿ ನಾವೆಲ್ಲ ಹೆಮ್ಮೆ ಪಡಬೇಕೇ ಹೊರತು, ಟ್ರೋಲ್ ಮಾಡಬಾರದು’ ಎಂದು ಹೇಳಿದರು.

ಕೆಜಿಎಫ್ ಸಿನಿಮಾ ಜೊತೆ ಈ ಹಿಂದೆ ಸುದೀಪ್ ಹೆಸರು ತಳುಕಿ ಹಾಕಿಕೊಂಡಿತ್ತು. ಇದು ದೊಡ್ಡ ಸುದ್ದಿಯಾದಾಗ, ಗೋವಾ ಸಿನಿಮೋತ್ಸವದಲ್ಲಿ ಸುದೀಪ್ ಅವರನ್ನು ಪತ್ರಕರ್ತರು ನೀವು ಕೆಜಿಎಫ್ ನಲ್ಲಿ ನಟಿಸುತ್ತಾ ಇದ್ದೀರ ಅಂತ ಕೇಳಿದರು. ಅದಕ್ಕೆ ನಾನು ಆ ಸಿನಿಮಾದಲ್ಲಿ ಇಲ್ಲ ಅಂದಿದ್ದರು. ಈ ವೀಡಿಯೋ, ಕೆಜಿಎಫ್-2 ಸಿನಿಮಾ ಬಿಡುಗಡೆಯಾದಾಗ ಹೊರಬಂದಿದೆ. ಇದರಿಂದ ಸಾಮಾಜಿಕ ಜಾಲತಾಣದಲ್ಲಿ ಸುದೀಪ್–ಯಶ್ ಎನ್ನುವ ಎರಡು ಬಣಗಳಾಗಿ ಒಬ್ಬರಿಗೊಬ್ಬರು ನಿಂದಿಸಿಕೊಳ್ಳುವ ಮಟ್ಟಕ್ಕೆ ವಿವಾದ ಬಿಗಡಾಯಿಸಿದೆ.

ಈ ಹಿನ್ನೆಲೆಯಲ್ಲಿ ಸುದೀಪ್ ಗೆ ಜಗ್ಗೇಶ್ ಸಾತ್ವಿಕರಾಗಿದ್ದರೆ ಆಗುವ ಪರಿಣಾಮದ ಬಗ್ಗೆ ಕಿವಿಮಾತು ಹೇಳಿದರು.

ಇದನ್ನೂ ಓದಿ : KGF 3 : ತೆರೆಗೆ ಬರುತ್ತಾ ಕೆಜಿಎಫ್-3 : ಮುಂದುವರಿಯುತ್ತೆ ರಾಕಿಬಾಯ್‌ ಅಬ್ಬರ

ಇದನ್ನೂ ಓದಿ :Android Shocking News: ಮೇ ತಿಂಗಳಲ್ಲಿ ಆ್ಯಂಡ್ರಾಯ್ಡ್ ಬಳಕೆದಾರರಿಗೆ ಶಾಕ್! ಏನೇನು ಬದಲಾಗುತ್ತಿದೆ?

(Sudeep Do not troll him He became a hero himself)

Comments are closed.