sudeep has gone to delhi : 13 ವರ್ಷಗಳ ಬಳಿಕ ದೆಹಲಿಗೆ ಹಾರಿದ ಕಿಚ್ಚ ಸುದೀಪ : ಪ್ರಹ್ಲಾದ್​ ಜೋಶಿ ಜೊತೆ ಮಾತುಕತೆ

sudeep has gone to delhi : ಸ್ಯಾಂಡಲ್​ವುಡ್​ನಲ್ಲಿ ಸಧ್ಯ ಸಾಲು ಸಾಲು ಹಿಟ್​ ಸಿನಿಮಾಗಳು ಪ್ರದರ್ಶನ ಕಾಣುತ್ತಿದ್ದು ಚಂದನವನದ ಪಾಲಿಗೆ ಇದೊಂದು ರೀತಿಯಲ್ಲಿ ಸುವರ್ಣಯುಗ ಎನಿಸಿದೆ. ಇದೀಗ ನಟ ಕಿಚ್ಚ ಸುದೀಪ ನಟನೆಯ ವಿಕ್ರಾಂತ್​ ರೋಣ ಸಿನಿಮಾ ಬಿಡುಗಡೆಗೆ ಸಜ್ಜಾಗಿದ್ದು ಸಿನಿಮಾದ ಮೇಲಿನ ನಿರೀಕ್ಷೆ ಕೂಡ ಹೆಚ್ಚೇ ಇದೆ. ಈಗಾಗಲೇ ವಿಕ್ರಾಂತ್​ ರೋಣ ಸಿನಿಮಾದ ಟ್ರೈಲರ್​, ಹಾಡುಗಳು ಸಖತ್​ ವೈರಲ್​ ಆಗಿದೆ. ಅದರಲ್ಲೂ ರಾ ರಾ ರಕ್ಕಮ್ಮ ಎಂಬ ಗೀತೆ ಇಂಟರ್ನೆಟ್​ನಲ್ಲಿ ಸಂಚಲನವನ್ನೇ ಸೃಷ್ಟಿಸಿದೆ.


ಈ ಎಲ್ಲದರ ನಡುವೆ ನಟ ಕಿಚ್ಚ ಸುದೀಪ ಬರೋಬ್ಬರಿ 13 ವರ್ಷಗಳ ಬಳಿಕ ದೆಹಲಿಗೆ ಪ್ರಯಾಣ ಬೆಳೆಸಿದ್ದು ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ ಜೊತೆಯಲ್ಲಿ ಉಪಹಾರವನ್ನು ಸೇವಿಸಿದ್ದಾರೆ. ಈಗ ಸಿನಿಮಾ ಚಿತ್ರೀಕರಣದ ಸಂದರ್ಭದಲ್ಲಿ ದೆಹಲಿಗೆ ತೆರಳಿದ್ದ ನಟ ಸುದೀಪ ಇದಾದ ಬಳಿಕ ದೆಹಲಿ ಕಡೆಗೆ ಪ್ರಯಾಣ ಬೆಳೆಸಿರಲಿಲ್ಲ. ಇದೀಗ ತಮ್ಮ ವಿಕ್ರಾಂತ್​ ರೋಣ ಸಿನಿಮಾದ ಪ್ರಚಾರಕ್ಕಾಗಿ ಸುದೀಪ ದೆಹಲಿ ಕಡೆ ಮುಖ ಮಾಡಿದ್ದಾರೆ.


ಜುಲೈ 28ರಂದು ವಿಕ್ರಾಂತ್​ ರೋಣ ಸಿನಿಮಾ ವಿಶ್ವಾದ್ಯಂತ ತೆರೆ ಕಾಣಲಿದೆ . ಈ ಸಂಬಂಧ ದೆಹಲಿಗೆ ಪ್ರಚಾರ ಕಾರ್ಯಕ್ಕಾಗಿ ತೆರಳಿದ್ದ ಸುದೀಪ ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿಯನ್ನು ಭೇಟಿಯಾದ್ರು. ಪ್ರಹ್ಲಾದ್​ ಜೋಶಿ ಜೊತೆಯಲ್ಲಿ ಬೆಳಗಿನ ಉಪಹಾರ ಸೇವಿಸಿದ ಸುದೀಪ ಕೆಲ ಕಾಲ ಮಾತುಕತೆಯನ್ನು ನಡೆಸಿದ್ದಾರೆ. ಪ್ರಹ್ಲಾದ್​ ಜೋಶಿ ನಟ ಸುದೀಪರಿಗೆ ಶಾಲು ಹೊದಿಸಿ ಗೌರವ ಸೂಚಿಸಿದ್ದಾರೆ.


ಕಿಚ್ಚ ಸುದೀಪ ಸದ್ಯ ಉತ್ತರ ಭಾರತದಲ್ಲಿ ವಿಕ್ರಾಂತ್​ ರೋಣ ಸಿನಿಮಾ ಪ್ರಮೋಷನ್​ ಮಾಡ್ತಿದ್ದಾರೆ. ಕೆಜಿಎಫ್​ 2 ಸಿನಿಮಾದ ಬಳಿಕ ಸ್ಯಾಂಡಲ್​ವುಡ್​ನ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ಎನಿಸಿರುವ ವಿಕ್ರಾಂತ್​ ರೋಣಗೆ ಅನುಪ್​ ಭಂಡಾರಿ ನಿರ್ದೇಶನವಿದೆ. ಜಾಕ್​ ಮಂಜು ಈ ಸಿನಿಮಾದ ನಿರ್ಮಾಪಕರಾಗಿದ್ದು 3 ಡಿ ಆವೃತ್ತಿಯಲ್ಲೊ ಜುಲೈ 28ರಂದು ಗ್ರ್ಯಾಂಡ್​ ರಿಲೀಸ್​ ಕಾಣಲಿದೆ.

ಇದನ್ನು ಓದಿ : File Income Tax Returns : ITR ಅನ್ನು ಆನ್‌ಲೈನ್‌ ನಲ್ಲಿ ಫೈಲ್‌ ಮಾಡಿ, ದಂಡದಿಂದ ತಪ್ಪಿಸಿಕೊಳ್ಳಿ!

ಇದನ್ನೂ ಓದಿ : Robin Uthappa blessed with a baby girl : ರಾಬಿನ್ ಉತ್ತಪ್ಪಗೆ ಹೆಣ್ಣು ಮಗು, 2ನೇ ಮಗುವಿಗೆ ತಂದೆಯಾದ ಕೊಡಗಿನ ವೀರ

sudeep has gone to delhi after 13 years to promote vikrant rona movie and this time he met pralhad joshi

Comments are closed.